• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು (ಭಾಗ-೧)

ನಾ ದಿವಾಕರ by ನಾ ದಿವಾಕರ
January 21, 2022
in ಅಭಿಮತ
0
ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು (ಭಾಗ-೧)
Share on WhatsAppShare on FacebookShare on Telegram

ಜಾತ್ಯತೀತ ಮೌಲ್ಯಗಳ ಪ್ರತಿಪಾದಕರು ಹಿಂದೂ ಮತ್ತು ಹಿಂದುತ್ವವಾದಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಬೌದ್ಧಿಕ ವಲಯದಲ್ಲಿ ಸಂಚಲನ ಉಂಟಾಗುತ್ತಿದೆ. ಈ ಸೂಕ್ಷ್ಮ ಆಧ್ಯಾತ್ಮಿಕ ವ್ಯತ್ಯಾಸಗ್ರಹಿಕೆಗಳು ವಾಸ್ತವಿಕ ನೆಲೆಯಲ್ಲಿ ಹೇಗೆ ಅಪ್ರಸ್ತುತವೆನಿಸುತ್ತದೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ತೊಡಗಿರುವ ಹಿಂದೂ ಸಮುದಾಯದ ಮೇಲ್ಪದರದ ಗಣ್ಯ ಬುದ್ಧಿಜೀವಿಗಳೇ ಮತ್ತೊಂದು ನೆಲೆಯಲ್ಲಿ ನಿಂತು ಇಸ್ಲಾಂ ಮತವನ್ನು ಇಸ್ಲಾಂವಾದದಿಂದ ಬೇರೆಯಾಗಿಯೇ ನೋಡಬೇಕು ಎಂದು ವಾದಿಸುತ್ತಾರೆ. ಅಷ್ಟೇ ಅಲ್ಲದೆ ಭಾರತದ ಮೇಲೆ ಆಕ್ರಮಣ ಮಾಡಿದವರನ್ನು ಪರ್ಷಿಯನೀಕರಣಗೊಂಡ ತುರುಕರು ಎಂದು ಪರಿಗಣಿಸಬೇಕೇ ಹೊರತು ಮುಸ್ಲಿಂ ಸೇನಾನಿಗಳು ಎಂದು ಭಾವಿಸಬಾರದು ಎಂದೂ ವಾದಿಸುತ್ತಾರೆ.

ADVERTISEMENT

ಮತ ಅಥವಾ ಧರ್ಮ ಎನ್ನುವ ಪದವು ಹೆಚ್ಚು ಜನಪ್ರಿಯತೆ ಗಳಿಸಿದ್ದು 19ನೆಯ ಶತಮಾನದಲ್ಲಿ. ಏಕದೈವವಾದದ ಪೌರಾಣಿಕ ನೆಲೆಯಲ್ಲಿ, ವಿಜ್ಞಾನದ ಪ್ರಭಾವ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೂ ಸಹ ದೈವತ್ವವನ್ನು ವಾಸ್ತವ ಎಂದು ಒಪ್ಪಿಕೊಳ್ಳುವ ಒಂದು ಮನಸ್ಥಿತಿಯನ್ನು ಮತ ಎಂದು ವ್ಯಾಖ್ಯಾನಿಸಲಾಗಿತ್ತು. ಬಹುಪಾಲು ವಸಾಹತು ದಾಳಿಕೋರರಿಗೆ ಇದ್ದುದು ಒಂದೇ ಮತ- ಅವರ ದೃಷ್ಟಿಕೋನದ ಕ್ರೈಸ್ತ, ಕ್ಯಾಥೊಲಿಕ್ ಅಥವಾ ಪ್ರೊಟೆಸ್ಟಂಟ್ ಮತ. ಯಹೂದ್ಯ ಮತವನ್ನು ಗತಕಾಲದ ಮತ ಎಂದೇ ಪರಿಭಾವಿಸಿದ ವಸಾಹತು ಶಕ್ತಿಗಳು ಇಸ್ಲಾಂ ಮತವನ್ನು , ಸಮಾನ ಬೇರುಗಳನ್ನು ಹೊಂದಿದ್ದರೂ ಸಹ, ಪಾಷಂಡ ಮತ ಎಂದೇ ಭಾವಿಸಿದ್ದರು. ವಸಾಹತು ದಾಳಿಕೋರರು ವಸಾಹತೀಕರಣಗೊಳಿಸಿದ ಭೌಗೋಳಿಕ ರಾಷ್ಟ್ರಗಳಲ್ಲಿನ ಜನತೆಯ ನಂಬಿಕೆ ಮತ್ತು ಶ್ರದ್ಧೆಯನ್ನು ವಿಗ್ರಹಾರಾಧನೆ ಎಂದೋ ಅಥವಾ ಅಧಾರ್ಮಿಕ ಅಥವಾ ನಾಸ್ತಿಕತೆ ಎಂದೇ ಪರಿಗಣಿಸುತ್ತಿದ್ದರು. ಹಾಗಾಗಿ ಈ ಶ್ರದ್ಧಾನಂಬಿಕೆಗಳಿಗೆ ಮಾನ್ಯತೆಯನ್ನೇ ನೀಡದೆ, ಮೂಢನಂಬಿಕೆಗಳೆಂದು ಪರಿಗಣಿಸುತ್ತಿದ್ದರೇ ಹೊರತು ಮತ ಅಥವಾ ಧರ್ಮ ಎಂದು ಪರಿಗಣಿಸುತ್ತಿರಲಿಲ್ಲ.

ಆದರೆ ಈ ಸಂದರ್ಭದಲ್ಲಿ ಜಪಾನಿನ ಮಾರುಕಟ್ಟೆಗಳು ಮಿಷನರಿ ಚಟುವಟಿಕೆಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿರಲಿಲ್ಲವಾಗಿ ಈ ಮಾರುಕಟ್ಟೆಗಳನ್ನು ತಲುಪುವುದು ವಸಾಹತು ಶಕ್ತಿಗಳಿಗೆ ಕಷ್ಟವಾಗತೊಡಗಿತ್ತು. ಈ ಸಂದರ್ಭದಲ್ಲೇ “ ಇತರ ಜನಸಮುದಾಯಗಳ ಮತಗಳನ್ನು ಗೌರವಿಸುವ ” ಚಿಂತನೆಯೂ ರಾಜಕೀಯವಾಗಿ ಪ್ರಚಲಿತವಾಗಿ ಮಾನ್ಯತೆ ಪಡೆದಿತ್ತು. ಅಂದರೆ, 19ನೆಯ ಶತಮಾನದಲ್ಲಿ ಮಾರುಕಟ್ಟೆಯ ಅನಿವಾರ್ಯತೆಗಳ ಕಾರಣದಿಂದಲೇ ಯೂರೋಪಿನ ವಸಾಹತುಶಾಹಿಗಳು ಬಹುವಿಧದ ಮತಗಳ ಔಚಿತ್ಯವನ್ನು ಮಾನ್ಯ ಮಾಡಬೇಕಾಗಿತ್ತು.

ಭಾರತದ ಅಸ್ಮಿತೆ

ಹಾಗಾಗಿ, ಇದೇ ಕಾಲಘಟ್ಟದಲ್ಲಿ ಯೂರೋಪ್ ಖಂಡವು ಬುದ್ಧನನ್ನು ಶೋಧಿಸಿದ್ದೇ ಅಲ್ಲದೆ ವ್ಯಾಪಕವಾಗಿ ಸ್ವೀಕರಿಸಿದ್ದು ಕಾಕತಾಳೀಯ ಎನಿಸುವುದಿಲ್ಲ. ಭಾರತದಲ್ಲಿನ ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಸಮರ್ಥವಾಗಿ ಎದುರಿಸಲು ಭಾರತದಲ್ಲೇ ಉಗಮಿಸಿದ ಒಂದು ಅದ್ಭುತ ಪ್ರತಿ ಚಿಂತನೆ ಬೌದ್ಧ ಧಮ್ಮ ಎಂದು ಭಾರತೀಯರಿಗೆ ಅರ್ಥಮಾಡಿಸಲಾಯಿತು. ಈ ಸಂದರ್ಭದಲ್ಲೇ ಹಿಂದೂ ಧರ್ಮ ಮತ್ತು ಹಿಂದುತ್ವ ಎಂಬ ಪದಗಳೂ ಉದ್ಭವಿಸಿದವು. ಹಿಂದೂ ಧರ್ಮ ಪದವನ್ನು ಸಮಾಜ ಸುಧಾರಣೆಯಲ್ಲಿ ವಿಶ್ವಾಸ ಹೊಂದಿದ್ದ ರಾಜಾರಾಮ್ ಮೋಹನ್ ರಾಯ್ 19ನೆಯ ಶತಮಾನದ ಆರಂಭದಲ್ಲೇ ಬಳಸಲಾರಂಭಿಸಿದ್ದರು. ಹಿಂದುತ್ವ ಪದವನ್ನು 19ನೆಯ ಶತಮಾನದ ಅಂತ್ಯದ ವೇಳೆಗೆ , ಸಮಾಜ ಸುಧಾರಣೆಯನ್ನು ವಿರೋಧಿಸುತ್ತಿದ್ದ ಚಂದ್ರನಾಥ ಬಸು ಬಳಸಲಾರಂಭಿಸಿದ್ದರು.

ಈ ಅವಧಿಗೂ ಮುನ್ನ ಭಾರತದಲ್ಲಿ ಅಸ್ಮಿತೆಗಳು ಜಾತಿ, ಬುಡಕಟ್ಟು ಮತ್ತು ಪ್ರಾಂತ್ಯಗಳನ್ನು ಆಧರಿಸಿದ್ದವು. ಮೀನುಗಾರರನ್ನು ಮೀನುಗಾರ ಜಾತಿಗೆ ಸೇರಿದವರೆಂದೇ ಗುರುತಿಸಲಾಗುತ್ತಿತ್ತು. ಈ ಜಾತಿಯ ಜನರು ಯಾರನ್ನು ಆರಾಧಿಸುತ್ತಿದ್ದರು ಎನ್ನುವುದು ಅಪ್ರಸ್ತುತವಾಗಿತ್ತು. ಭೂಮಾಲೀಕರನ್ನು ಮುಸ್ಲಿಮರು, ರಜಪೂತರು, ಬ್ರಾಹ್ಮಣರು, ಠಾಕೂರರು, ಕಾಯಸ್ಥರು ಹೀಗೆ ಜಾತಿ ಆಧಾರಿತ ಭೂಮಾಲೀಕರಾಗಿಯೇ ಕಾಣಲಾಗುತ್ತಿತ್ತು. ಈ ಸಂದರ್ಭದಲ್ಲೇ ಬ್ರಿಟೀಷರು ಜನಗಣತಿಯ ಸಾಧನವನ್ನು ಬಳಸಿಕೊಳ್ಳುವ ಮೂಲಕ ಮತ ಅಥವಾ ಧರ್ಮವನ್ನು ವಿಧ್ಯುಕ್ತವಾಗಿ ವರ್ಗೀಕರಿಸುವುದರಲ್ಲಿ ಯಶಸ್ವಿಯಾಗಿದ್ದರು. ಬ್ರಿಟೀಷರು ಹೇಳುವವರೆಗೂ ಹಿಂದೂಗಳಿಗೆ ಒಂದು ಕೇಂದ್ರೀಕೃತ ಸಾಂಸ್ಥಿಕ ಮತ ಎನ್ನುವುದು ಇರಲಿಲ್ಲ.

ಕ್ರೈಸ್ತ ಮತದಲ್ಲಿ ಪಾದ್ರಿಗಳು ಮತ್ತು ಪ್ರವಾದಿಗಳು ದೈವೀಕ ನಿಯಮಗಳನ್ನು ಹೇರಿದಂತೆಯೇ ಬ್ರಾಹ್ಮಣರು ಜಾತಿ ಶ್ರೇಣೀಕರಣವನ್ನು ಹೇರಲು ಹಿಂದೂ ಧರ್ಮವನ್ನು ಬಳಸಿಕೊಂಡರು ಎಂದು ಅರ್ಥಮಾಡಿಸಲಾಯಿತು. ಮತ ಅಥವಾ ಧರ್ಮದ ಬಗ್ಗೆ ಬ್ರಿಟೀಷರು ಬಳಸಿದ ಈ ಪರಿಭಾಷೆಯೇ ಅವರಿಗೆ ಭಾರತದಲ್ಲಿ ವಸಾಹತು ಆಳ್ವಿಕೆಯನ್ನು ಸಮರ್ಥಿಸಿಕೊಳ್ಳಲು ನೆರವಾಯಿತು. ಹಾಗೆಯೇ ಹಿಂದೂಗಳನ್ನು ಮುಸಲ್ಮಾನರಿಂದ ರಕ್ಷಿಸುವ, ಕೆಳಜಾತಿಯ ಹಿಂದೂಗಳನ್ನು ಮೇಲ್ಜಾತಿಯ ಹಿಂದೂಗಳಿಂದ ರಕ್ಷಿಸುವ ಒಂದು ಸಾಧನವಾಗಿ ಈ ಪರಿಭಾಷೆಯನ್ನು ಬಳಸಲಾಯಿತು. ನಂತರದ ಕಾಲಘಟ್ಟದಲ್ಲಿ ಮುಸ್ಲಿಮರನ್ನು ಬಲಿಷ್ಠ ಹಿಂದೂ ಮೇಲ್ಪದರದ ಗಣ್ಯರಿಂದ ಸಂರಕ್ಷಿಸುವ ಸಲುವಾಗಿ ಮೇಲ್ಪದರದ ಗಣ್ಯ ಮುಸಲ್ಮಾನರು ಭಾರತವನ್ನು ವಿಭಜಿಸಲೂ ಇದು ನೆರವಾಯಿತು. ಇದೇ ಪರಿಭಾಷೆಯನ್ನು ಬಳಸುವ ಮೂಲಕವೇ ಇಂದು ಮಾರ್ಕ್ಸ್ ವಾದಿಗಳು ಮತ್ತು ಜಾತಿ ವಿರೋಧಿ ಗುಂಪುಗಳು ಹಿಂದೂಗಳನ್ನು ವಿಭಜಿಸಲು ಅಥವಾ ಭಾರತವನ್ನೇ ವಿಭಜಿಸಲು ಯತ್ನಿಸುತ್ತಿದ್ದಾರೆ, ಇವರಿಂದ ಭಾರತವನ್ನು ರಕ್ಷಿಸಿ ಐಕ್ಯತೆಯನ್ನು ಸಾಧಿಸಬೇಕು ಎಂದು ಹೇಳಲಾಗುತ್ತಿದೆ.
(ಮೂಲ : From cult to culture- Hindutva’s caste masterstroke ದೇವ್ದತ್ ಪಟ್ಟನಾಯಕ್- ದ ಹಿಂದೂ)

Tags: BJPCongress PartyFrom cult to culture- Hindutva’s caste masterstrokeHindutvaನರೇಂದ್ರ ಮೋದಿಬಿಜೆಪಿ
Previous Post

ವಿಜಯಪುರ ಜಿಲ್ಲೆಯ ನಿಂಬೆಗೆ ಜಿಐ ಟ್ಯಾಗ್ ಸಿಗೋದು ಬಹುತೇಕ ಖಚಿತ : ಬೆಳಗಾರರ ಮುಖದಲ್ಲಿ ಮಂದಹಾಸ

Next Post

ಪಂಜಾಬಿನಲ್ಲಿ ಆಪ್‌ ಪಕ್ಷವು ಅರವಿಂದ ಕೇಜ್ರಿವಾಲ್ ಬಿಟ್ಟು ಭಗವಂತ್ ಮಾನ್ ಮೇಲೆ ಅವಲಂಬನೆ ಆಗಿದ್ದೇಕೆ?

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಪಂಜಾಬ್ ಚುನಾವಣೆ: ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಗೊತ್ತೇ?

ಪಂಜಾಬಿನಲ್ಲಿ ಆಪ್‌ ಪಕ್ಷವು ಅರವಿಂದ ಕೇಜ್ರಿವಾಲ್ ಬಿಟ್ಟು ಭಗವಂತ್ ಮಾನ್ ಮೇಲೆ ಅವಲಂಬನೆ ಆಗಿದ್ದೇಕೆ?

Please login to join discussion

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada