ನಾವು ಮನೆ ಮನೆ ಮೇಲೆ ಹನುಮ ಧ್ವಜ (Hanuma Dwaja) ಹಾರಿಸುತ್ತೇವೆ, ತಾಕತ್ ಇದ್ದರೆ ಇದನ್ನು ತಡೆಯಿರಿ.ನಮ್ಮ ಹೋರಾಟ ಹಿಂದೂ ವಿರೋಧಿಗಳ ಮೇಲೆ. ಧ್ವಜ ತೆಗೆದ ಕಾಂಗ್ರೆಸ್ ಸರ್ಕಾರ (Congress government) ರಾಜಕೀಯವಾಗಿ ಭಸ್ಮ ಆಗಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ (CTRavi) ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.

ಹನುಮನ ಬಾಲಕ್ಕೆ ಬೆಂಕಿ ಹಾಕಿದ್ದರಿಂದ ಲಂಕೆ ಭಸ್ಮ ಆಯ್ತು.ಲಂಕೆಗೆ ಆದ ಪರಿಸ್ಥಿತಿ ಈ ಸರ್ಕಾರಕ್ಕೂ ಆಗುತ್ತೆ.ಯಾರನ್ನು ತೃಪ್ತಿ ಪಡಿಸಲು ಬಾವುಟ ತೆಗೆದ್ರಿ.
ನಮ್ಮ ಹೆಸರಿನಲ್ಲಿ ರಾಮ ಇದ್ದಾನೆ, ತಂದೆ ಹೆಸರಲ್ಲೂ ರಾಮ ಇದ್ದಾನೆ ಆಂದ್ರಿ.ನಿಮಗೆ ರಾಮ ಭಕ್ತಿ ಇಲ್ಲ ಎಂದು ನಿಮ್ಮ ಕೃತ್ಯ ತೋರಿಸಿದೆ ಸಿದ್ದರಾಮಯ್ಯ.
ಯಾವುದಾದರೂ ಭೂತ ಪ್ರೇತ ಮೆಟ್ಟಿದವರು ಹೀಗೆ ಆಡುತ್ತಾರೆ.ಕಾಂಗ್ರೆಸ್ಗೆ ಮೆಟ್ಟಿರೋ ದೆವ್ವ ಟಿಪ್ಪು ಸುಲ್ತಾನ್ ದೆವ್ವ. ಕಾಂಗ್ರೆಸ್ ಗೆ ಭೂತ ಪ್ರೇತ, ದೆವ್ವ ಮೆಟ್ಟಿದೆ. ಟಿಪ್ಪು ಸುಲ್ತಾನ್ ನಾ ದೆವ್ವವೇ ಕಾಂಗ್ರೆಸ್ ಗೆ ಮೆಟ್ಟಿದೆ. ಟಿಪ್ಪು ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ತೆಗೆದು ಅವನತಿ ತೆಗೆದುಕೊಂಡ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅಧುನಿಕ ಟಿಪ್ಪು ಸುಲ್ತಾನ್.
28 ಕ್ಷೇತ್ರವೂ ಕಾಂಗ್ರೆಸ್ ಸೋಲುತ್ತೆ.
ಆಧುನಿಕ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಹನುಮ ಧ್ವಜ ತೆಗೆದು ಅವನತಿಗೆ ತೆಗದುಕೊಂಡಿದ್ದಾರೆ
ಸಿಎಂ ಸಾರ್ವಜನಿಕರ ಕ್ಷಮೆ ಕೇಳಬೇಕು.
ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಸಿದ್ದರಾಮಯ್ಯ. ಮತ್ತೆ ಕೆರಗೋಡಿನಲ್ಲಿ ಹನುಮ ಧ್ವಜ ಹಾಕಿಸಿ ಎಂದು ಆಗ್ರಹಿಸಿದರು.