ಕರ್ನಾಟಕ-ಕೇರಳ ಹೆದ್ದಾರಿಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಲಾರಿ ಹೆಣ್ಣಾನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಲಾರಿ ಚಾಲಕ ಅಯ್ಯಸ್ವಾಮಿ ಹಾಗೂ ಕ್ಲೀನರ್ ಆನಂದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ರಾತ್ರಿ ಸುಮಾರು 8:30ಕ್ಕೆ ಮದ್ದೂರು ವಲಯದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![](https://pratidhvani.com/wp-content/uploads/2022/12/whatsapp-image-2022-12-14-at-0937261670993810-1024x576.jpg)
ಕೇರಳದಿಂದ ಗುಂಡ್ಲುಪೇಟೆಯಿಂದ ಬರುತ್ತಿದ್ದ ತಮಿಳುನಾಡು ನೋಂದಣಿಯ ಲಾರಿಯು 25-30 ವರ್ಷದ ಪ್ರಾಯದ ಹೆಣ್ಣಾನೆಗೆ ಡಿಕ್ಕಿ ಹೊಡೆದಿದೆ. ರಾತ್ರಿ 9ರಿಂದ ಬೆಳ್ಳಗ್ಗೆ 6ರವರೆಗೆ ವಾಹನ ಸಂಚಾರಕ್ಕೆ ಸರ್ಕಾರ ನಿರ್ಬಂಧ ಹೇರಿದೆ.
ಕೊಯಮತ್ತೂರು ಮೂಲದ ಲಾರಿಯೂ ರಾತ್ರಿ ಸುಮಾರು 8 ಘಂಟೆಗೆ ಮೂಲೆಹೊಳೆ ಚೆಕ್ಪೋಸ್ಟ್ ದಾಟಿದ್ದು ಅತಿ ವೇಗ ಚಾಲನೆ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.