• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗೃಹ ಸಚಿವರಿಗೇ ಇಲ್ಲದ ನಂಬಿಕೆ ಮುಗ್ಧ ರೈತನಿಗಿದೆ: ಹಾಲು ಕೊಡದ ಹಸು ವಿರುದ್ಧ ಪೊಲೀಸರಿಗೆ ದೂರು ನೀಡಿದ ರೈತ!

Any Mind by Any Mind
December 5, 2021
in ಕರ್ನಾಟಕ
0
ಗೃಹ ಸಚಿವರಿಗೇ ಇಲ್ಲದ ನಂಬಿಕೆ ಮುಗ್ಧ ರೈತನಿಗಿದೆ: ಹಾಲು ಕೊಡದ ಹಸು ವಿರುದ್ಧ ಪೊಲೀಸರಿಗೆ ದೂರು ನೀಡಿದ ರೈತ!
Share on WhatsAppShare on FacebookShare on Telegram

ಹಾಲು ಕರೆಯಲು ಹೋದರೆ ಜಾಡಿಸಿ ಒದೆಯುತ್ತಿವೆ. ಅವನ್ನು ಅರೆಸ್ಟ್ ಮಾಡಿ ಬೆಂಡೆತ್ತಿ ಬುದ್ದಿಹೇಳಿ ಎಂದು ಶಿವಮೊಗ್ಗದ ರೈತನೊಬ್ಬ ತನ್ನದೇ ಹಸುಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ!. ಒಂದು ಕಡೆ ಶಿವಮೊಗ್ಗದವರೇ ಆದ ಗೃಹ ಸಚಿವರು, ತಮ್ಮದೇ ಪೊಲೀಸರ ಬಗ್ಗೆ ಅವಹೇಳನಕಾರಿ ಮಾತನಾಡಿ ವಿವಾದಕ್ಕೀಡಾಗಿದ್ದರೆ, ಈ ಬಡ ರೈತ ತನ್ನ ಮೂಕ ಹಸುಗಳಿಗೂ ಬುದ್ಧಿಹೇಳುವ ಛಾತಿ ಪೊಲೀಸರಿಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೇಲಿನ ರೈತನ ಆ ವಿಶ್ವಾಸ, ಭರವಸೆ ಇದೀಗ ಸ್ವಾರಸ್ಯಕರ ಸುದ್ದಿಯಾಗಿದೆ.

ADVERTISEMENT

ನಿತ್ಯ ಹುಲ್ಲು ಮೇಯಿಸಿ, ಕಾಳಜಿ ವಹಿಸಿ ಆರೈಕೆ ಮಾಡಿದ ಹಸುಗಳು ಹಾಲು ಕರೆಯಲು ಹೋದರೆ ತನಗೇ ಜಾಡಿಸಿ ಒದೆಯುತ್ತಿವೆ. ಸಾಕಿ ಸಲಹಿದ ತನಗೇ ಮೋಸ ಮಾಡುತ್ತಿವೆ. ಇದು ನ್ಯಾಯವೇ ? ಎಂಬುದು ಮುಗ್ಧ ರೈತನ ಪ್ರಶ್ನೆ. ಈ ಅನ್ಯಾಯವನ್ನು ಪ್ರಶ್ನಿಸಿ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ತನ್ನ ಹಸುಗಳನ್ನು ಬಂಧಿಸಿ, ವಿಚಾರಣೆ ನಡೆಸಿ ಬುದ್ದಿಹೇಳಬೇಕು. ಸಾಕಿ ಸಲಹಿ ಆರೈಕೆ ಮಾಡಿದ ತನಗೆ ಅನ್ಯಾಯ ಮಾಡದೆ ಹಾಲು ಕೊಡುವಂತೆ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಲಕ್ಷಣ ದೂರು ಪ್ರಕರಣ ನಡೆದಿದ್ದು, ರೈತನ ದೂರು ಸ್ವೀಕರಿಸಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!

ಏನದು ರೈತನ ದೂರು?:

“ನನ್ನ ಕೊಟ್ಟಿಗೆಯಲ್ಲಿ ನಾಲ್ಕು ಹಸುಗಳಿವೆ. ಅವುಗಳನ್ನು ಪ್ರತಿದಿನ ಬೆಳಗ್ಗೆ 8ಗಂಟೆಯಿಂದ 11 ರವರೆಗೆ ಮತ್ತು ಸಂಜೆ 4ಗಂಟೆಯಿಂದ 6 ಗಂಟೆಯವರೆಗೂ ಮೇಯಿಸುತ್ತೇನೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ನಾಲ್ಕೂ ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿಬಿಟ್ಟಿವೆ. ಹಾಲು ಕರೆಯಲು ಹೋದರೆ ನನಗೆ ಹಾಗೂ ನನ್ನ ಪತ್ನಿಗೆ ಜಾಡಿಸಿ ಒದೆಯುತ್ತಿವೆ. ಹೀಗಾಗಿ ಆ ನಾಲ್ಕೂ ಹಸುಗಳನ್ನು ನಿಮ್ಮ ಸ್ಟೇಷನ್​ಗೆ ಕರೆಸಿ ನಾಲ್ಕು ಬುದ್ದಿ ಮಾತು ಹೇಳಿ,  ಹಾಲು ಕೊಡುವಂತೆ ಕ್ರಮ ಕೈಗೊಳ್ಳಿ” ಎಂದು ಹಸುವಿನ ಮುನಿಸಿನಿಂದ ನೊಂದ ರೈತ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
ಆದರೆ, ಒಂದು ಕಡೆ ತಮ್ಮದೇ ಇಲಾಖೆಯ ಹೊಣೆ ಹೊತ್ತ ಗೃಹ ಸಚಿವರು ಇಡೀ ಪೊಲೀಸ್ ವ್ಯವಸ್ಥೆಯ ಬಗ್ಗೆ ತೀರಾ ಬಾಲಿಶಃವಾಗಿ ಮಾತನಾಡಿ, ಪೊಲೀಸರ ಬಗೆಗಿನ ಜನರ ವಿಶ್ವಾಸವನ್ನು ಕುಂದಿಸುವ ಮಾತನಾಡಿರುವಾಗ ಮುಗ್ಧ ರೈತ, ಪೊಲೀಸರ ಮೇಲೆ ಇಟ್ಟಿರುವ ನಂಬಿಕೆ ಪೊಲೀಸರ ನಡುವೆಯೇ ಚರ್ಚೆಗೆ ಗ್ರಾಸವಾಗಿದೆ. ಆದರೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ, ದೂರು ನೀಡಿದ ರೈತನನ್ನು ಕೂರಿಸಿಕೊಂಡು ಸಮಾಧಾನ ಮಾಡಿ, ಬುದ್ದಿಮಾತು ಹೇಳಿ ಕಳಿಸಿದ್ದಾರೆ!

Tags: ಆರಗ ಜ್ಞಾನೇಂದ್ರಆರ್ ಎಸ್ ಎಸ್ಕರ್ನಾಟಕಕರ್ನಾಟಕ ಪೊಲೀಸ್ಗೃಹ ಖಾತೆಗೋ ಹತ್ಯೆ ನಿಷೇಧ ಕಾಯ್ದೆಗೋರಕ್ಷಕರುತೀರ್ಥಹಳ್ಳಿಬಿಜೆಪಿಮೈಸೂರು ಗ್ಯಾಂಗ್ ರೇಪ್ಸಂಘಪರಿವಾರ
Previous Post

ನಿರ್ಗಮಿಸಿದ ಮತ್ತೋರ್ವ ಕಲಾತಪಸ್ವಿ- ‘ಶಿವರಾಂ’

Next Post

ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆ ಸ್ಕೆಚ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಕುಳ್ಳ ದೇವರಾಜ್

Related Posts

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..
Top Story

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ನಗರದ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

May 1, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
Next Post
ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆ ಸ್ಕೆಚ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಕುಳ್ಳ ದೇವರಾಜ್

ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆ ಸ್ಕೆಚ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಕುಳ್ಳ ದೇವರಾಜ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada