
ತುಮಕೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೆಸರಲ್ಲಿ ವಚನೆ ಬಳಿಕ, ಕೇಂದ್ರ ಸಚಿವ ವಿ ಸೋಮಣ್ಣ ಹೆಸರಲ್ಲಿ ವಂಚನೆ ಮಾಡಲು ಯತ್ನಿಸಿದ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ. ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಅಧಿಕಾರಿಗಳ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದ ಎನ್ನಲಾಗಿದೆ.

ನಕಲಿ ಲೆಟರ್ ಹೆಡ್ ಹಾಗೂ ಸಹಿ ಹಾಕಿ ವಂಚನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಓರ್ವನ ಬಂಧನ ಮಾಡಲಾಗಿದೆ. ಸಚಿವ ಸೋಮಣ್ಣ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ ವಂಚಿಸಲು ಹೋಗಿ ಪೊಲೀಸರ ಅಥಿತಿಯಾಗಿದ್ದಾನೆ ವಂಚಕ. ಕೇಂದ್ರ ಸಚಿವ ಆಗಿರುವ ತುಮಕೂರು ಸಂಸದ ಸೋಮಣ್ಣರ ಸಹಿ ಮತ್ತು ಲೆಟರ್ ಹೆಡ್ ನಕಲು ಮಾಡಿದ್ದಾನೆ.
ಮಧುಗಿರಿ ತಾಲೂಕಿನ ಮಿಡಿಗೆಶಿ ಮೂಲದ ಗೋವರ್ಧನ್ ಎಂಬಾತನ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಶಾಲಿನಿ ರಜನಿಶ್ ಸಹಿ ಮತ್ತು ಲೆಟರ್ ಹೆಡ್ ನಕಲು ಮಾಡಿದ್ದ. ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ ನಕಲಿ ಆದೇಶ ಪ್ರತಿ ನೀಡಿದ್ದ ಆರೋಪಿ, ಸಚಿವ ಸೋಮಣ್ಣನವರ ಆಪ್ತ ಸಹಾಯಕನ ದೂರಿನ ಮೇರೆಗೆ ಆರೋಪಿ ಗೋವರ್ಧನನ್ನು ಬಂಧನ ಮಾಡಲಾಗಿದೆ.

ಸೋಮಣ್ಣ ಅವರ ಕಚೇರಿ ಆಪ್ತ ಸಹಾಯಕ ಮಹೇಶ್ ದೂರಿನ ಮೇರೆಗೆ ಪೊಲೀಸರಿಂದ ಕ್ರಮ ಜರುಗಿಸಲಾಗಿದೆ. ಪ್ರಭಾವಿಗಳ ಹೆಸರಲ್ಲಿ ನಕಲಿ ಸಹಿ, ದಾಖಲೆ ಸೃಷ್ಟಿಸಿ ಹಲವರಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಹೆಸರಲ್ಲಿಯೂ ಹಲವರಿಗೆ ವಂಚನೆ ಮಾಡಿದ್ದ ಎನ್ನುವುದು ಗೊತ್ತಾಗಿದೆ.

ಸೋಮಣ್ಣ ಆಪ್ತನಿಂದ ದೂರು ಪಡೆದುಕೊಂಡ NEPS ಪೊಲೀಸರಿಂದ ಆರೋಪಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಫಲಾನುಭವಿಗಳ ಹೆಸರು ಹಾಕಿ, ಬೋರ್ ವೆಲ್ ಕೊರೆಸಿ ಕೊಡಿ, ಪಂಪ್ ಸೆಟ್ ಮೋಟರು ನೀಡುವಂತೆ ನಕಲಿ ಆದೇಶ ಪ್ರತಿ ನೀಡಿ ವಂಚನೆ ಮಾಡ್ತಿದ್ದ ಆರೋಪಿ ಗೋವರ್ಧನ್, ಸದ್ಯ ತುಮಕೂರು ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.