ಮಾಜಿ ಸಂಸದ ಹಾಗೂ ಬಿಜೆಪಿ(BJP)ಯಲ್ಲಿ ತುಮಕೂರು(Tumkur) ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.ಪಿ. ಮುದ್ದುಹನುಮೇಗೌಡ(Mudduhanumegowda) ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಈವರೆಗೂ ಯಾವುದೇ ನಾಯಕರು ಸ್ಪಷ್ಟವಾಗಿ ಟಿಕೆಟ್ ಬಗ್ಗೆ ಆಶ್ವಾಸನೆ ನೀಡದ ಕಾರಣ, ಜೊತೆಗೆ ಇತ್ತೀಚೆಗೆ ಮಾಜಿ ಸಚಿವ ವಿ.ಸೋಮಣ್ಣ(VSomanna) ಅವರು ತುಮಕೂರು ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನನಗೆ ಈ ಬಾರಿಯ ಬಿಜೆಪಿ ಟಿಕೆಟ್(Ticket) ಎಂದು ಬಿಂಬಿಸುತ್ತಿದ್ದು, ಮುದ್ದುಹನುಮೇಗೌಡ ಕಾಂಗ್ರೆಸ್(Congress) ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಸದ್ಯದಲ್ಲೇ ಮುದ್ದುಹನುಮೇಗೌಡ ಕಾಂಗ್ರೆಸ್ ಸೇರ್ಪಡೆ ಕೂಡ ಆಗಲಿದ್ದು, ಇದರ ಬಗ್ಗೆ ಈಗಾಗಲೇ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್(DKShivakumar) ಜೊತೆಗೆ ಮಾತುಕತೆಗಳು ಕೂಡ ನಡೆದಿದೆ ಎನ್ನಲಾಗಿದೆ.
#bjpkarnataka #Congress #Tumkur #DKShivakumar #Vsomanna