
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮೊದಲು ಸೆಕ್ಯುರಿಟಿ ಟೈಟ್ ಮಾಡಿ ಅಂತ ಹೇಳಿದ್ದಾರೆ. ಆದರೆ ಆರ್.ಅಶೋಕ್, ವಿಜಯೇಂದ್ರ ಬಾಯಿಗೆ ಬಂದಂತೆ ಮಾತನಾಡ್ತಾರೆ. ಮೃತ ಕುಟುಂಬಸ್ಥರೇ ಹೇಳ್ತಾರೆ, ಅಲ್ಲಿ ಸೆಕ್ಯುರಿಟಿ ಯಾರೂ ಇರಲಿಲ್ಲ ಅಂತ. ಇಂತಹ ಪ್ರಕರಣಗಳನ್ನ ಹಗುರವಾಗಿ ಪರಿಣಿಸಬಾರದು. ಸಿಎಂ ಸಿದ್ದರಾಮಯ್ಯ ವಿರುದ್ದದ ಹೇಳಿಕೆಗಳನ್ನ ವಿಜಯೇಂದ್ರ, ಅಶೋಕ್ ವಾಪಾಸ್ ಪಡೆಯಬೇಕು ಎಂದು ಆಗ್ರಹ ಮಾಡಿದ್ದಾರೆ.
ಸಿಎಂ ಸಿದ್ದರಾಮುಯ್ಯ ಎಂದೂ ಯುದ್ದ ಮಾಡುವುದು ಬೇಡ ಅಂತ ಹೇಳಿಲ್ಲ, ಮೊದಲು ಭದ್ರತೆ ಟೈಟ್ ಮಾಡಿ ಅಂತ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂತೋಷ್ ಲಾಡ್ ಕಳುಹಿಸಿ ತ್ವರಿತವಾಗಿ ಅಲ್ಲಿದ್ದ ಕನ್ನಡಿಗರನ್ನ ಕರೆತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾರ್ಯಕ್ಕೆ ಒಂದು ಶ್ಲಾಘನೀಯ ಮಾತುಗಳನ್ನಾಡಲಿಲ್ಲ, ಇದು ವಿಪರ್ಯಾಸ ಎಂದಿದ್ದಾರೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ. ಪ್ರಧಾನಿ ಮೋದಿ ಕೂಡಲೇ ಕಾಶ್ಮೀರಗೆ ಹೋಗಬೇಕು. ಅವರು ತಮ್ಮ ಜವಾಬ್ದಾರಿ ತೋರಿಸಬೇಕು. ಈ ಹಿಂದೆ ಮನಮಹೋನ್ ಸಿಂಗ್ ಅಲ್ಲೋಗಿ ಮೃತ ಕುಟುಂಬಗಳನ್ನೆಲ್ಲಾ ಭೇಟಿಯಾಗಿದ್ರು ಎಂದು ನೆನಪಿಸಿದ್ದಾರೆ.

ಜೊತೆಗೆ ಕೂಡಲೇ ವಿಶೇಷ ಸಂಸತ್ ಅಧಿವೇಶನ ಕರೆದು ಖಂಡನಾ ನಿರ್ಣಯ ಕೈಗೊಳ್ಳಬೇಕು. ಪಾಕಿಸ್ತಾನ ಭಯೋತ್ಪಾಧಕ ರಾಷ್ಟ್ರ ಎಂದು ಹೇಳಲು ಅಂತರಾಷ್ಟ್ರೀಯ ಜಸ್ಟೀಸ್ಗೆ ಒತ್ತಾಯಿಸಬೇಕು. ಇದನ್ನ ಮಾಡಿದ್ರೆ ಪ್ರಧಾನಿ ನರೇಂದ್ರ ಮೋದಿಗೆ ಒಂದು ತೂಕ ಬರುತ್ತದೆ. ಯುದ್ದವನ್ನ ನಾಳೆ ಆರಂಭಿಸಿ, ಯಾರು ಬೇಡ ಅಂದೋರು..! ಭಯೋತ್ಪಾಧಕರು ಬರುವ ಜಾಗದಿಂದ ಆರಂಭಿಸಿ. ಭಯೋತ್ಪಾಧಕರು ಇರುವ ಸ್ಥಳಗಳಿಗೆ ಬಾಂಬ್ ಹಾಕಿ ಎಂದು ಶಾಸಕ ಬಸವರಾಜ ರಾಯರೆಡ್ಡಿ ಆಗ್ರಹ ಮಾಡಿದ್ದಾರೆ.

ಯುದ್ದ ಮಾಡಲು ಸುಮಾರು 12 ಲಕ್ಷ ಕೋಟಿ ಬೇಕು. ಇದಕ್ಕೆ ಅನುಮೋದನೆ ಪಡೆಯಲು ವಿಶೇಷ ಅಧಿವೇಶನ ಕರೆಯಬೇಕು. ನಮ್ಮ ಮುಖ್ಯಮಂತ್ರಿಗಳು ಯಾವ ವಿಭಿನ್ನ ಹೇಳಿಕೆ ನೀಡಿಲ್ಲ. 1.45 ಲಕ್ಷ ಹುದ್ದೆಗಳು ಆರ್ಮಿಯಲ್ಲಿ ಖಾಲಿ ಇವೆ. ಕೂಡಲೇ ಆ ಹುದ್ದೆಗಳನ್ನ ತುಂಬಿ, ಯಾಕಂದ್ರೆ ಪಾಕಿಸ್ತಾನ ಯಾವಾಗ ಅಟ್ಯಾಕ್ ಮಾಡುತ್ತೋ ಗೊತ್ತಿಲ್ಲ. ನೀರು ಬಂದ್ ಮಾಡಿದ್ದೀರ ಅದನ್ನು ಸ್ವಾಗತ ಮಾಡ್ತೀನಿ. ಆದರೆ ನೀರು ನಿಲ್ಲಲ್ಲ, ಸಿಂಧೂ ನದಿ ನೀರು ಹರಿದುಹೋಗುತ್ತದೆ. ನೀರು ನಿಲ್ಲಿಸೋದು ಪರಿಹಾರವಲ್ಲ. ಡ್ಯಾಂ ಕಟ್ಟಿ ನೀರನ್ನ ಟರ್ನ್ ಮಾಡಲು ಆಗಲ್ಲ. ಅಲ್ಲಿ ಆರು ಉಪ ನದಿಗಳು ಇವೆ. ಇದು ಪ್ರಚಾರಕ್ಕೆ ಸೀಮಿತವಾಗಬಾರದು ಎಂದಿದ್ದಾರೆ.
ಅಗತ್ಯ ಅನುದಾನ ರೆಡಿ ಮಾಡಿಕೊಂಡು ನ್ಯೂಕ್ಲಿಯರ್ ಬಾಂಬ್ ರೆಡಿಮಾಡಿಕೊಳ್ಳಿ. ಈ ಹಿಂದೆ ಇಂದಿರಾಗಾಂಧಿ ಯುದ್ಧ ಸಾರಿ ಬಾಂಗ್ಲಾದೇಶದ ಸಮಸ್ಯೆ ಬಗೆಹರಿಸಿದ್ರು. ನೀವು ಕೂಡ ಆ ರೀತಿಯ ನಿರ್ಧಾರ ಕೈಗೊಳ್ಳಿ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬಸವರಾಜ ರಾಯರೆಡ್ಡಿ ಸಲಹೆ ನೀಡಿದ್ದಾರೆ.