ರಾತ್ರೋ ರಾತ್ರಿ ಭಾರತ ಆಪರೇಷನ್ ಸಿಂಧೂರ್ (operation sindhur) ಮೂಲಕ 9 ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ (Air strike) ನಡೆಸಿ ಬರೋಬ್ಬರಿ 90ಕ್ಕೂ ಹೆಚ್ಚು ಉಗ್ರರ ಸಂಹಾರ ಮಾಡಲಾಗಿದೆ. ಈ ದಾಳಿಯಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ (Pakistan), ತನ್ನ ಭಾಗದ ಕೆಲವು ನಗರಗಳಲ್ಲಿ ತುರ್ತ ಪರಿಸ್ಥಿತಿ ಘೋಷಣೆ ಮಾಡಿದೆ.

ಹೌದು ಭಾರತ ನಡೆಸಿದ ಈ ಆಕ್ರಮಣಕಾರಿ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನ ಅಕ್ಷರಶಃ ಪತರಗುಟ್ಟಿದ್ದು, ಇಡೀ ಪಾಕಿಸ್ತಾನ ತೀವ್ರ ಆಘಾತಕ್ಕೊಳಗಾಗಿದೆ. ಹೀಗಾಗಿ ಪಾಕ್ ಸರ್ಕಾರ ರಾವಲ್ಪಿಂಡಿ, ಇಸ್ಲಾಮಾಬಾದ್ ಮತ್ತು ಬಹವಾಲ್ಪುರ್ ನಗರಗಳಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ (Health emergency) ಮಾಡಿದೆ.
ಈ ಪ್ರದೇಶಗಳಲ್ಲಿ ಪ್ರಸ್ತುತ ವೈದ್ಯಕೀಯ ಸಿಬ್ಬಂದಿಗೆ ಎಲ್ಲಾ ರಜೆಗಳನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಎಲ್ಲಾ ಎಮರ್ಜೆನ್ಸಿ ಸೇವೆಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.

ಇನ್ನು ಭಾರತದ ಈ ದಾಳಿಯ ನಂತರ ಪಾಕಿಸ್ತಾನ ಲೈನ್ ಆಫ್ ಕಂಟ್ರೋಲ್ ಬಳಿ ಮಧ್ಯರಾತ್ರಿ ಗುಂಡಿನ ದಾಳಿ ನಡೆಸಿದ್ದು, ಸದ್ಯದಲ್ಲೇ ಪಾಕಿಸ್ತಾನ ಕೂಡ ಭಾರತದ ಮೇಲೆ ದಾಳಿಗೆ ಮುಂದಾಗಬಹುದು. ಭಾರತ ಇದಕ್ಕೆ ಸಂಪೂರ್ಣ ಸನ್ನದ್ಧವಾಗಿದೆ.
ಇನ್ನು ಮತ್ತೊಂದೆಡೆ ಭಾರತ ಕೂಡ ಇಂದು ಸಹ ದಾಳಿ ಮುಂದುವರಿಸಬಹುದು ಎಂಬ ಭಯ ಪಾಕಿಸ್ತಾನಕ್ಕೆ ಕಾಡುತ್ತಿದ್ದು, ಪಾಪಿ ಪಾಕಿಸ್ತಾನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದ್ದು, ಒಂದುವೇಳೆ ಪಾಕಿಸ್ತಾನ ಭಾರತದ ಮೇಲೆ ಅಸ್ತ್ರ ಎತ್ತುವ ವ್ಯರ್ಥ ಪ್ರಲಾಪ ಮಾಡಿದ್ರೆ, ತಕ್ಕ ಉತ್ತರ ಸಿಗೋದು ನಿಶ್ಚಿತ.