ದೇಶದಲ್ಲಿ ಲೋಕಸಭಾ ಚುನಾವಣೆ ಸಂಪೂರ್ಣವಾಗಿದೆ. ಭಾರತೀಯ ಜನತಾ ಪಾರ್ಟಿ (BJP) ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚನೆ ಮಾಡುವಷ್ಟು ಸಂಖ್ಯೆಯನ್ನು ತಲುಪಲು ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ (Narendra modi) ನಾಯಕತ್ವ ಚಾರ್ಮ್ ಕಳೆದುಕೊಳ್ಳುತ್ತಿರುವ ಮುನ್ಸೂಚನೆ ಎನ್ನುವಂತಾಗಿದೆ.
![](https://pratidhvani.com/wp-content/uploads/2024/06/IMG_8099-1.jpeg)
ಉತ್ತರ ಪ್ರದೇಶದ (Uttar pradesh) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ram mandir) ನಿರ್ಮಾಣ ಮಾಡಿದ್ದ ಬಿಜೆಪಿ ನೇತೃತ್ವದ ಸರ್ಕಾರ, ಇಡೀ ದೇಶದಲ್ಲಿ ಶ್ರೀರಾಮ ಮಂದಿರದ ವಿಚಾರದಲ್ಲೇ ಚುನಾವಣೆ ಗೆಲ್ಲಬೇಕು ಎನ್ನುವ ಯೋಜನೆ ಆಗಿತ್ತು. ಆದರೆ ಸ್ವತಃ ಅಯೋಧ್ಯೆ (ಫೈಜಾಬಾದ್)ನಲ್ಲಿ Samajavadi Party ಅಭ್ಯರ್ಥಿ ಗೆಲುವು ಸಾಧಿಸಿದ್ದು, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಸೋಲುಂಡಿದ್ದಾರೆ.
![](https://pratidhvani.com/wp-content/uploads/2024/06/IMG_8098-1.jpeg)
ಇಷ್ಟು ಮಾತ್ರವಲ್ಲದೆ ಶ್ರೀರಾಮ ಮಂದಿರ ನಿರ್ಮಾಣದ ವಿಚಾರ ದೇಶದಲ್ಲಿ ಗೆಲುವು ತಂದುಕೊಡುವುದು ದೂರದ ಮಾತು. ಆದರೆ ಉತ್ತರ ಪ್ರದೇಶದಲ್ಲೇ ಬಿಜೆಪಿಗೆ ಸಹಕಾರಿ ಆಗಿಲ್ಲ. 80 ಕ್ಷೇತ್ರವಿರುವ ಉತ್ತರ ಪ್ರದೇಶಲ್ಲಿ ಬಿಜೆಪಿ ಕೇವಲ 33 ಸ್ಥಾನಗಳನ್ನು ಜಯಗಳಿಸಲು ಸಾಧ್ಯವಾಗಿದೆ. ಉಳಿದ ಕ್ಷೇತ್ರಗಳು ಎಸ್ಪಿ (Sp), ಕಾಂಗ್ರೆಸ್ (Congress), ಆರ್ಜೆಡಿ (RJD) ಪಾಲಾಗಿದೆ. ಇದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪ ಎಂಬಂತಾಗಿದೆ.
ನಿನ್ನೆ ರಾತ್ರಿ 7 ಗಂಟೆಗೆ ಬೃಹತ್ ರೋಡ್ ಶೋ (Road show) ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಳಪೆ ಸಾಧನೆ ಬಳಿಕ ರೋಡ್ ಶೋ ಕ್ಯಾನ್ಸಲ್ ಮಾಡಲಾಯ್ತು. ಆ ಬಳಿಕ ರಾತ್ರಿ 8 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ಆರಂಭದಲ್ಲಿ ಭಾರತ್ ಮಾತಾ ಕೀ ಘೋಷಣೆ ಮಾಡಿದ ಮೋದಿ ಜೈ ಜಗನ್ನಾಥ್.. ಜೈ ಜಗನ್ನಾಥ್ ಎನ್ನುವ ಮೂಲಕ ಶ್ರೀರಾಮನನ್ನೇ ಮರೆತರು. ಕಾರ್ಯಕರ್ತರು ಜೈಶ್ರೀರಾಮ್ ಎಂದರೂ ಶ್ರೀರಾಮನ ಜಪ ಮಾಡಲಿಲ್ಲ. ಇದು ರಾಮನ ಮೇಲೆ ಮೋದಿ ಕೋಪ ಎನ್ನುವುದನ್ನು ಸಾಬೀತು ಮಾಡಿದಂತಿತ್ತು.