ಬೆಂಗಳೂರಿನಲ್ಲಿ ವಿಚಿತ್ರ ಲವ್ ಸ್ಟೋರಿಯೊಂದು ಬೆಂಕಿಗೆ ಬಂದಿದೆ. ಏಕಲವ್ಯನ ರೀತಿಯಲ್ಲಿ ಬೆರಳು ಕತ್ತರಿಸಲಾಗಿದೆ. ಏಕಲವ್ಯ ತನ್ನ ಗುರುಗಳು ಕೇಳಿದ ಗುರುದಕ್ಷಿಣೆಯಾಗಿ ತೋರು ಬೆರಳನ್ನು ಕತ್ತರಿಸಿ ನೀಡಿದ್ದ. ಆದರೆ ಈ ಪ್ರಕರಣದಲ್ಲಿ ತನ್ನ ಲವರ್ ಜೊತೆಗೆ ಚಾಟ್ Chat ಮಾಡಬಾರದು ಅನ್ನೋ ಕಾರಣಕ್ಕೆ ಸ್ನೇಹಿತನ ಜೊತೆಗೆ ಸೇರಿಕೊಂಡು ಹೆಬ್ಬೆರಳನ್ನು ಕತ್ತರಿಸಿರುವ ಘಟನೆ ಬಸವನಗುಡಿಯಲ್ಲಿ Basavanagudi ನಡೆದಿದೆ.
ಪ್ರಿಯತಮೆ ಜೊತೆ ಗೆಳತನ ಬೆಳೆಸಿದ್ದಕ್ಕೆ ಯುವಕನ ಮೇಲೆ ಅಟ್ಟಹಾಸ ಮೆರೆದಿದ್ದಾರೆ ಸ್ನೇಹಿತರು. ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿ, ಬಲಗೈನ ಹೆಬ್ಬೆರಳು ಕಟ್ ಮಾಡಿದ್ದಾರೆ. ಬಸವನಗುಡಿ ಬುಲ್ ಟೆಂಬಲ್ Bull Temple ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ ಬಳಿ ಏಪ್ರಿಲ್ 28 ರಂದು ರಾತ್ರಿ 8.30ರ ಸಮಯದಲ್ಲಿ ಈ ಘಟನೆ ನಡೆದಿದೆ. ಯುವಕನ ಮೇಲೆ ಲಾಂಗು ಬೀಸಿ ಹಲ್ಲೆ ಮಾಡಿದ ಸ್ನೇಹಿತರಾದ ಶಶಾಂಕ್ ಹಾಗೂ ಚಂದನ್ ಎಂಬುವರನ್ನು ಶಂಕರಪುರ ಪೊಲೀಸರು Arreste ಬಂಧಿಸಿದ್ದಾರೆ.
ಬಿ.ಕಾಂ ಮುಗಿಸಿದ್ದ ಹರ್ಷಿತ್ ಕೆಲಸಕ್ಕೆ ಹೋಗ್ತಿರ್ಲಿಲ್ಲ, ತಂದೆ ನಡೆಸುತ್ತಿದ್ದ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲೇ ಕೆಲಸ ಮಾಡ್ತಿದ್ದ. ತಮ್ಮ ಅಂಗಡಿ ಇದ್ದ ಕಟ್ಟಡದಲ್ಲಿ ಒಂದು ಡಯೋಗ್ನೋಸ್ಟಿಕ್ ಸೆಂಟರ್ ಇತ್ತು. ಡಗೋಗ್ನೋಸ್ಟಿಕ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದ ಓರ್ವ ಯುವತಿ, ಚಿಲ್ಲರೆ ಕೇಳಲು ಆಗಿದ್ದಾಂಗೆ ಫ್ಲವರ್ ಡೆಕೊರೇಟ್ ಅಂಗಡಿಗೆ ಹೋಗಿ ಬರುವಾಗ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿತ್ತು. ಫೋನ್ ನಂಬರ್ ಕೂಡ ಎಕ್ಸ್ಚೇಂಜ್ ಆಗಿತ್ತು. ಮೆಸೇಜ್, ಕಾಲ್ ಮಾಡುವ ಹಂತಕ್ಕೆ ಗೆಳತನ ತಲುಪಿತ್ತು.