ಮುಡಾ ಬಹುಕೋಟಿ ಹಗರಣದಲ್ಲಿ (MUDA scam) ಮಹತ್ವದ ಬೆಳವಣಿಗೆ ಆಗಿದೆ. ಇಂದು ಮೈಸೂರಿನ ಮುಡಾ ಕಚೇರಿ ಮೇಲೆ ಇಡಿ (ED) ಅಧಿಕಾರಿಗಳು ರೇಡ್ ಮಾಡಿದ್ದಾರೆ. ಶುಕ್ರವಾರ ಧಿಡೀರ್ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ 1 ಗಂಟೆಯಿಂದ ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ (Cm siddaramaiah) ವಿರುದ್ದದ ಕೇಸ್ ನಲ್ಲಿ ಇದೊಂದು ದೊಡ್ಡ ಬೆಳವಣಿಗೆ ಎಂದು ಬಣ್ಣಿಸಲಾಗಿದೆ.ಮೈಸೂರು ಮುಡಾ ಕಚೇರಿಯ ವಿವಿಧ ಕೊಠಡಿಯಲ್ಲಿ 5 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಹಳೆಯ ದಾಖಲೆಗಳನ್ನ ಇಂಚಿಂಚೂ ಪರಿಶೀಲಿಸಿದ್ದಾರೆ. ಸ್ನೇಹಮಯಿ ಕೃಷ್ಣ (Snehamayi krishna) ದೂರು ಆಧರಿಸಿ ರೇಡ್ ನಡೆದಿದೆ.
ಮತ್ತೊಂದೆಡೆ ದೇವರಾಜು ನಿವಾಸದ ಮೇಲೂ ED ರೇಡ್ ಆಗಿದ್ದು ಭೂ ಮಾಲೀಕ ದೇವರಾಜು ನಿವಾಸದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.ಬೆಂಗಳೂರಿನ ಕೆಂಗೇರಿಯಲ್ಲಿರುವ ದೇವರಾಜು ನಿವಾಸ ಮಹತ್ವದ ಪರಿಶೀಲನೆ ನಡೆಯುತ್ತಿದೆ .