ಸೋಮವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿದೆ. ಅಷ್ಟೇ ಅಲ್ಲದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.8 ರಷ್ಟಿತ್ತು.ಬೆಳಿಗ್ಗೆ 5.35 ಕ್ಕೆ ಭೂಕಂಪ ಸಂಭವಿಸಿದ್ದು,ಪುಲ್ವಾಮಾ ಹಾಗೂ 21 ಕಿಲೋಮೀಟರ್ ದೂರದಲ್ಲಿರುವ ಶ್ರೀನಗರ ಮತ್ತು ಶೋಪಿಯಾನ್ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಕಂಪನಗಳು ಕಂಡುಬಂದಿವೆ.

ಅಂಡಮಾನ್ ನಿಕೋಬಾರ್ ನಲ್ಲಿ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯೊಂದಿಗೆ ಬೆಳಗಿನ ಜಾವ 3.31 ಕ್ಕೆ ಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ದ್ವೀಪಗಳಿಂದ ದೂರದಲ್ಲಿದೆ, ಆದ್ದರಿಂದ ಯಾವುದೇ ಹಾನಿಯಾಗಿಲ್ಲ ಮತ್ತು ತೀವ್ರತೆ ಕಡಿಮೆ ಇತ್ತು ಎಂದು ಎನ್ಸಿಎಸ್ ತಿಳಿಸಿದೆ.

ಇದು ದೊಡ್ಡ ಭೂಕಂಪನ ಸೂಚನೆಯೇ ಎಂದು ಜನರು ಭಯ ಭೀತರಾಗಿದ್ದಾರೆ. ಅಂಡಮಾನ್ನಲ್ಲಿ ಸಣ್ಣ ಭೂಕಂಪ ಸಂಭವಿಸಿದರೂ, ಆಂಧ್ರಪ್ರದೇಶ ಮತ್ತು ಇತರ ಕರಾವಳಿ ರಾಜ್ಯಗಳು ಜಾಗರೂಕರಾಗಿರುವುದು ಒಳ್ಳೆಯದು. ಏಕೆಂದರೆ ಕರಾವಳಿ ಪ್ರದೇಶಗಳಲ್ಲಿನ ಭೂಮಿ ತೆಳುವಾಗಿರುತ್ತದೆ. ಆದ್ದರಿಂದ, ಭೂಕಂಪನ ಕಂಪನಗಳು ಭೂಮಿಯ ಮೂಲಕ ಸುಲಭವಾಗಿ ಚಲಿಸಬಹುದು.












