Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮಹಾರಾಷ್ಟ್ರದಲ್ಲಿ ನೀರಿಗಾಗಿ ಬರ, ಬಾವಿಯೊಳಗೆ ಇಳಿಯುತ್ತಿರುವ ಜನ..!

Prathidhvani

Prathidhvani

May 25, 2023
Share on FacebookShare on Twitter

ಇತ್ತೀಚೆಗೆ ದೇಶದಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ, ಕಳೆದ ಒಂದು ದಶಕಗಳ ಅವಧಿಯಲ್ಲಿ ಇಷ್ಟೊಂದು ವಿಪರೀತವಾದ ತಾಪಮಾನವನ್ನ ಕಂಡಿಲ್ಲ ಅಂತ ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿಯೇ ಹವಮಾನ ಇಲಾಖೆಯ ವರದಿಗಳು ಕೂಡ ಇವೆ.

ಹೆಚ್ಚು ಓದಿದ ಸ್ಟೋರಿಗಳು

Save Government Schools : ಸರ್ಕಾರಿ ಶಾಲೆಗಳನ್ನು ಉಳಿಸಿ.. ದಾಖಲಾತಿ ಹೆಚ್ಚಿಸಿ‌ :‌ ನಟ ಡಾಲಿ ಧನಂಜಯ್

BREAKING ; We will throw our medals in the river Ganga | ನಮ್ಮ ಪದಕಗಳನ್ನ ನಾವು ಗಂಗಾ ನದಿಗೆ ಎಸೆಯುತ್ತೇವೆ, ಕುಸ್ತಿಪಟುಗಳ ಹೇಳಿಕೆ..!

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

ಇದು ತಾಪಮಾನ ಏರಿಕೆಯ ಕತೆಯಾದ್ರೆ, ವಿಪರೀತ ಧಗೆಯಿಂದಾಗಿ ಅಂತರ್ಜಲದ ಮಟ್ಟವೂ ಕೂಡ ದೇಶದಲ್ಲಿ ಕಡಿಮೆಯಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಗಳು ಕೂಡ ಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ದೇಶದ ಹಲವೆಡೆ ನೀರಿಗೆ ಹಾಹಾಕಾರ ಎದ್ದದೆ‌ಅದರಲ್ಲೂ ಮಹಾರಾಷ್ಟ್ರದ ಕೆಲವೊಂದು ಹಳ್ಳಿಗಳಲ್ಲಿ ನೀರಿಗಾಗಿ ಎದ್ದಿರುವ ಹಾಹಾಕಾರ ಅಷ್ಟಿಷ್ಟಲ್ಲ.

ಆದ್ರೆ ಈ ಬಾರಿ ಇದೇ ಮಹಾರಾಷ್ಟ್ರದಲ್ಲಿ ನೀರಿ‌ಗಾಗಿ ವಿಪರೀತ ಸಮಸ್ಯೆಗಳು ತಲೆದೂರಿವೆ ಅದರಲ್ಲೂ ಕೆಲವೊಂದು ಹಳ್ಳಿಗಳಲ್ಲಿ ನೀರಿಗಾಗಿ ಎದ್ದಿರುವ ಹಾಹಾಕಾರದಿಂದ ಮುಂದೆ ನಮ್ಮ ಜೀವನ ಹೇಗಪ್ಪ‌ ಅಂತ ಪರದಾಡುವ ಹಾಗಾಗಿದೆ. ಮಹಾರಾಷ್ಟ್ರದ ಇನ್ನೂ ಕೆಲವೊಂದು ಹಳ್ಳಿಗಳಲ್ಲಿ ಮಹಿಳೆಯರು ಬೃಹತ್ ಬಾವಿಗಳ ಒಳಗೆ ಇಳಿದು ನೀರನ್ನ ಶೇಖರಿಸುತ್ತಿರುವ ದೃಶ್ಯಗಳು ಕಂಡು ಬಂದಿದ್ದವು.

ಇನ್ನು ಇದು ಮಹಾರಾಷ್ಟ್ರದ ಸಮಸ್ಯೆ ಆದ್ರೆ ಕರ್ನಾಟಕದಲ್ಲೂ ಬಿಸಿಲಿನ ಝಳದಿಂದ ಜನರು ಪರದಾಡುವ ಹಾಗಾಗಿದೆ. ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯ ದರ್ಶನವಾಗುತ್ತಿದೆ. ಹಾಗಂತ ಬಿಸಿಲಿನ ಝಳ‌ ಕಡಿಮೆಯಾಗಿಲ್ಲ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ತಪಾಮಾನ ಬಾಗಲಕೋಟೆಯಲ್ಲಿ ದಾಖಲಾಗಿದೆ.

ಇನ್ನು ಕರ್ನಾಟಕದ‌ ಕಾಶ್ಮೀರ ಅಂತ ಕರೆಯಿಸಿಕೊಳ್ಳುವ ಕೊಡಗಿನಲ್ಲೂ ತಪಮಾನದ ಏರಿಕೆ ಕಂಡಿದೆ. ಅಷ್ಟು ಮಾತ್ರವಲ್ಲದೆ ಕಳೆದ ಒಂದು ತಿಂಗಳ ಹಿಂದೆ ಕೊಡಗಿನಲ್ಲಿ ಕೂಡ ಅಂತರ್ಜಲದ ಮಟ್ಟ ಕುಸಿಯುತ್ತಿದೆ ಅನ್ನೋ ವರದಿಗಳು ಬಂದಿದ್ದವು. ಇನ್ನು ಕೊಡಗಿ‌ನ ಗೋಣಿಕೊಪ್ಪ ಹಾಗೂ ಮೈಸೂರಿನ ತಾಪಮಾನ ಕಳೆದ ಎರಡು – ಮೂರು ವರ್ಷಗಳಿಂದ ಒಂದೇ ರೀತಿಯಾಗಿದೆ. ಸದ್ಯದ ಮಟ್ಟಿಗೆ ಕೊಡಗಿನಲ್ಲಿ ಮಳೆರಾಯನ ದರ್ಶನದಿಂದ ಈ ಸಮಸ್ಯೆ ಬಗೆ ಹರಿದಿದೆ.

ಒಟ್ಟಾರೆಯಾಗಿ ಮಹಾರಾಷ್ಟ್ರದಲ್ಲಿ ಮಾತ್ರ ಈಗ ನೀರಿಗೆ ಅಕ್ಷರಶಃ ಬರ ಉಂಟಾಗಿದ್ದು ನೀರಿಗಾಗಿ‌ ಅಲ್ಲಿನ ಜನ ಬೃಹತ್ ಬಾವಿಯ ಒಳಗೆ ಇಳಿಯುತ್ತಿರೋದು ನಿಜಕ್ಕೂ ಬೇಸರದ ಸಂಗತಿ.

RS 500
RS 1500

SCAN HERE

Pratidhvani Youtube

«
Prev
1
/
4511
Next
»
loading
play
Siddaramaiah | ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಸಚಿವರ ಜೊತೆ ಸಭೆ ನಡೆಸಿದ ಸಿಎಂ #Pratidhvani
play
Live : ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ #congress #dcmdkshivakumar
«
Prev
1
/
4511
Next
»
loading

don't miss it !

ಸಬ್ಕಾ ಸಾಥ್ˌ ಸಿರ್ಫ್ ದೋ ಕಾ ವಿಕಾಸ್
ಅಂಕಣ

ಸಬ್ಕಾ ಸಾಥ್ˌ ಸಿರ್ಫ್ ದೋ ಕಾ ವಿಕಾಸ್

by ಡಾ | ಜೆ.ಎಸ್ ಪಾಟೀಲ
May 26, 2023
ನೂತನ ಸರ್ಕಾರದಲ್ಲಿ ಸಚಿವರಿಗೆ ಯಾವ ಖಾತೆ ಹಂಚಿಕೆ..?
ಅಂಕಣ

ನೂತನ ಸರ್ಕಾರದಲ್ಲಿ ಸಚಿವರಿಗೆ ಯಾವ ಖಾತೆ ಹಂಚಿಕೆ..?

by ಕೃಷ್ಣ ಮಣಿ
May 27, 2023
BJP is Defeated And Disappointed : ಬಿಜೆಪಿಯವರು ಸೋತು ಹತಾಶರಾಗಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ : ಸಚಿವ ಹೆಚ್.ಸಿ. ಮಹದೇವಪ್ಪ
Top Story

BJP is Defeated And Disappointed : ಬಿಜೆಪಿಯವರು ಸೋತು ಹತಾಶರಾಗಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ : ಸಚಿವ ಹೆಚ್.ಸಿ. ಮಹದೇವಪ್ಪ

by ಪ್ರತಿಧ್ವನಿ
May 29, 2023
New Ministers of the State | ರಾಜ್ಯದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ
Top Story

New Ministers of the State | ರಾಜ್ಯದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ

by ಪ್ರತಿಧ್ವನಿ
May 29, 2023
ನೀರಿನ ದಾಹ ನೀಗಿಸಲು ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿದ ಆಂಧ್ರ ರೈತ- ಸ್ಥಳೀಯರ ಮೆಚ್ಚುಗೆ
ಕರ್ನಾಟಕ

ನೀರಿನ ದಾಹ ನೀಗಿಸಲು ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿದ ಆಂಧ್ರ ರೈತ- ಸ್ಥಳೀಯರ ಮೆಚ್ಚುಗೆ

by Prathidhvani
May 26, 2023
Next Post
ಟೇಕಾಫ್​​ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಅವಘಡ

ಟೇಕಾಫ್​​ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಅವಘಡ

ರಾಜಕೀಯ ನಿವೃತ್ತಿ ಘೋಷಣೆಗೆ ಮುಂದಾಗಿದ್ದರಾ ಎನ್​. ಚಲುವರಾಯಸ್ವಾಮಿ..?

ರಾಜಕೀಯ ನಿವೃತ್ತಿ ಘೋಷಣೆಗೆ ಮುಂದಾಗಿದ್ದರಾ ಎನ್​. ಚಲುವರಾಯಸ್ವಾಮಿ..?

ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾ.ಪಂ ಕಾರ್ಯದರ್ಶಿ

ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾ.ಪಂ ಕಾರ್ಯದರ್ಶಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist