ಬೆಂಗಳೂರು: ಇತ್ತೀಚೆಗೆ ಬೆಳಕಿಗೆ ಬಂದ ಡಾ.ಕೃತಿಕಾ ರೆಡ್ಡಿ(Krithika Reddy) ಕೊಲೆ ಪ್ರಕರಣ ಸಂಬಂಧ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪಿ.ಪ್ರಸನ್ನ ಕುಮಾರ್ (P Prasanna Kumar) ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಿರಿಯ ವಕೀಲರಾದ ಪ್ರಸನ್ ಕುಮಾರ್ಗೆ ಈ ಜವಾಬ್ದಾರಿ ನೀಡಿದೆ.
SPP ಪ್ರಸನ್ನ ಕುಮಾರ್ ED, NIA, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸೇರಿದಂತೆ ಹಲವು ಕೇಸ್ ಗಳಲ್ಲಿ ವಿಶೇಷ ಅಭಿಯೋಜಕರಾಗಿದ್ದಾರೆ.

ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣ ದೊಡ್ಡ ಸದ್ದು ಮಾಡಿತ್ತು. ಡಾ.ಕೃತಿಕಾ ರೆಡ್ಡಿಯನ್ನು ಪತಿ ಡಾ.ಮಹೇಂದ್ರ ರೆಡ್ಡಿಯೇ ಕೊಲೆ ಮಾಡಿದ್ದಾಗಿ ಆರೋಪ ಮಾಡಲಾಗಿದೆ.
ಡಾ.ಕೃತಿಕಾ ರೆಡ್ಡಿ ಒಬ್ಬ ಚರ್ಮರೋಗ ತಜ್ಞರಾಗಿದ್ದು, ಬೆಂಗಳೂರಿನಲ್ಲಿ ತಮ್ಮ ಪತಿ ಡಾ.ಮಹೇಂದ್ರ ರೆಡ್ಡಿ ಜತೆ ಮಾರತ್ ಹಳ್ಳಿಯಲ್ಲಿ ವಾಸವಿದ್ದರು ಪ್ರಕರಣದ ತನಿಖೆಯ ಪ್ರಕಾರ, ಮಹೇಂದ್ರ ರೆಡ್ಡಿ ಅತಿಯಾದ ಅರಿವಳಿಕೆ ಔಷಧ ನೀಡಿ ಪತ್ನಿಯನ್ನು ಕೊಂದು, ಅದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಘಟನೆ ನಡೆದ 6 ತಿಂಗಳ ಬಳಿಕ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂಬುದು ದೃಢಪಟ್ಟಿತ್ತು. ನಂತರ ಮಹೇಂದ್ರನನ್ನು ಬಂಧಿಸಲಾಯಿತು.













