ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ, (Pahalgam terror attack) ಪ್ರತಿಯೊಬ್ಬ ಪ್ರವಾಸಿಗರ ಧರ್ಮ ಕೇಳಿ ಕೇವಲ ಹಿಂದೂಗಳನ್ನು (Hindus) ಮಾತ್ರ ಕೊಲ್ಲಲಾಗಿದೆ.ಇದು ಹಿಂದೂಗಳನ್ನು ಭಯಪಡಿಸುವ ಹುನ್ನಾರ ಎಂಬುದು ಸ್ಪಷ್ಟವಾಗಿದೆ.ಆದ್ರೆ ರಣ ಹೇಡಿ ಉಗ್ರರ ಈ ಕೃತ್ಯಕ್ಕೆ ಯಾವ ಹಿಂದೂ ಕೂಡ ಎದೆ ಗುಂದಿಲ್ಲ.

ಹೌದು ಕಾಶ್ಮೀರದ ಪಹಲ್ಗಾಮ್ ನಲ್ಲಿ ರಕ್ತಪಾತ (Bloodshed) ನಡೆದರೂ ಈಗ ಮತ್ತೆ ಅದೇ ಸ್ಥಳಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಪಹಲ್ಗಾಮ್ ಗೆ ಭೇಟಿ ನೀಡುತ್ತಿದ್ದಾರೆ. ಆ ಮೊಲಕ ಈ ಉಗ್ರರ ರಣ ಹೇಡಿ ಕೃತ್ಯಗಳಿಗೆ ನಾವು ಹೆದರಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ.

ನಿನ್ನೆ ಮತ್ತು ಇಂದು ಪಹಲ್ಗಾಮ್ ಗೆ ಭೇಟಿ ನೀಡುತ್ತಿರುವ ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪಹಲ್ಗಾಮ್ ನೋಡಲು ಬಹಳ ಚೆನ್ನಾಗಿದೆ ಎಂದು ಭಾರತದ ಪ್ರವಾಸಿಗರು ಹೇಳುತ್ತಿದ್ದು, ಎಂದಿಗಿಂತ ಅಧಿಕ ಉತ್ಸಾಹದಲ್ಲೇ ಮತ್ತೆ ಕಾಶ್ಮೀರದ ಕಡೆ ಹೆಚ್ಚಾಗಿ ಬರುತ್ತಿದ್ದಾರೆ.