
ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ಅಟ್ಯಾಕ್ ನಡೆದಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಮುಂದೆಯೇ ಆಘಾಂತುಕರಿಂದ ಗುಂಡಿನ ದಾಳಿ ನಡೆದಿದೆ.
ತಡರಾತ್ರಿ 12.50ರ ಸುಮಾರಿಗೆ ಘಟನೆ ನಡೆದಿದ್ದು, ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಆಗಿದೆ. ತಡರಾತ್ರಿ ಬಿಡದಿಯಿಂದ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ರೈ ಮನೆಯಿಂದ ಆಚೆ ಬರ್ತಿದ್ದಂತೆ ಮನೆಯ ಮುಖ್ಯ ದ್ವಾರದ ಕೂಗಳತೆ ದೂರದಲ್ಲೆ ದಾಳಿ ಮಾಡಿದ್ದಾರೆ.

ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್ ಮಾಡಲಾಗಿದೆ. ಪ್ರತಿ ಬಾರಿ ತನ್ನ ಕಾರನ್ನ ತಾನೇ ಡ್ರೈವಿಂಗ್ ಮಾಡ್ತಿದ್ದ ರಿಕ್ಕಿ ರೈ, ಇಂದು ಕೂಡ ಡ್ರೈವರ್ ಸೀಟ್ನಲ್ಲೇ ಇರುವುದಾಗಿ ದುಷ್ಕರ್ಮಿಗಳು ಟಾರ್ಗೆಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಗುಂಡಿನ ದಾಳಿ ಮಾಡಲಾಗಿದೆ.

ಗುಂಡಿನ ದಾಳಿ ಆಗುತ್ತಿದ್ದಂತೆ ಚಾಲಕ ರಾಜು ಮುಂದೆ ಬಾಗಿದ್ದು, ಪಕ್ಕದ ಸೀಟ್ನಲ್ಲಿದ್ಸ ರಿಕ್ಕಿ ರೈ ಮೂಗು ಮತ್ತು ಕೈಗೆ ಗುಂಡು ತಾಗಿದೆ. ಕೂದಳೆಲೆ ಅಂತರದಲ್ಲಿ ಪ್ರಾಣಪಾಯದಿಂದ ಚಾಲಕ ರಾಜು ಬಚಾವ್ ಆಗಿದ್ದಾನೆ. ಮನೆ ಮುಂಭಾಗದ ಮುಖ್ಯ ರಸ್ತೆಗೆ ಎಂಟ್ರಿ ಆಗುತ್ತಿದ್ದಂತೆ ಏಕಾಏಕಿ ಗುಂಡಿನ ದಾಳಿ ನಡೆದಿದೆ.
ಎರಡು ದಿನದ ಹಿಂದಷ್ಟೇ ರಷ್ಯಾದಿಂದ ವಾಪಸ್ ಆಗಿದ್ದ ರಿಕ್ಕಿ ರೈ, ರಿಯಲ್ ಎಸ್ಟೇಟ್ ಬಿಸಿನೆಸ್ನಲ್ಲಿ ಆಕ್ಟಿವ್ ಆಗಿದ್ದ ಎನ್ನಲಾಗಿದೆ. ಪೊಲೀಸರು ಕಾರು ಚಾಲಕ ರಾಜುನಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಸದ್ಯ ಘಟನಾ ಸ್ಥಳದಲ್ಲೇ ಸೀನ್ ಆಫ್ ಕ್ರೈಂ ಆಫೀಸರ್ಸ್ (SOCO) ಹಾಗೂ ಎಫ್ಎಸ್ಎಲ್ ತಂಡದಿಂದ ಪರಿಶೀಲನೆ ನಡೆದಿದೆ. ಸದ್ಯ ರಿಕ್ಕಿ ರೈ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮುತ್ತಪ್ಪ ರೈ ಭೂಗತ ಲೋಕದಲ್ಲಿ ಕೆಲ ಕಾಲ ಸಕ್ರೀಯವಾಗಿದ್ದು, ಕಡೆಯ ದಿನಗಳಲ್ಲಿ ಭೂಗತ ಲೋಕದ ನಂಟಿನಿಂದ ಹೊರಬಂದಿದ್ದರು.