2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election 2023) ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾಜ್ಯದಲ್ಲಿ ಚುನಾವಣಾ(election) ರಣಕಹಳೆ ಮೊಳಗಿದ್ದು, ಪಕ್ಷದ ನಾಯಕರು , ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕೀಯ ನಾಯಕರ(political leaders) ನಡುವೆ ವಾಕ್ಸಮರವೂ ಮುಂದುವರಿದಿದೆ. ವರುಣ ಕ್ಷೇತ್ರದ ಅಭಿವೃದ್ಧಿ ನನ್ನಿಂದ ಮಾತ್ರ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಹೇಳಿಕೆ ವಿಚಾರವಾಗಿ, ವರುಣದಲ್ಲಿ ಪ್ರಚಾರದ ವೇಳೆ ವಿ.ಸೋಮಣ್ಣನವರು(v somanna) ಪ್ರತಿಕ್ರಿಯಿಸಿದ್ದಾರೆ.
![](https://pratidhvani.com/wp-content/uploads/2023/05/New-Project-49-1-1024x768.webp)
ʻತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತೆ ಎಂಬಂತೆ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಮನಸ್ಸು ಮಾಡಿದ್ದರೆ ವರುಣ ಅಭಿವೃದ್ಧಿ ಮಾಡಬಹುದಿತ್ತುʼ ಅಂತ ಬಿಜೆಪಿ ಅಭ್ಯರ್ಥಿ(BJP candidate) ವಿ.ಸೋಮಣ್ಣ(V somanna) ತಿರುಗೇಟು ನೀಡಿದ್ರು. ʻವರುಣದಲ್ಲಿ 1 ಕಾಲೇಜು ಇಲ್ಲ, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಬಾದಾಮಿಯಲ್ಲೂ ಸಿದ್ದರಾಮಯ್ಯ(siddaramaiah) ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕೆಂದು ಸೋಮಣ್ಣ ಸಿದ್ದಾರಾಮಯ್ಯಗೆ ಟಾಂಗ್ ಕೊಟ್ಟರು.
![](https://pratidhvani.com/wp-content/uploads/2023/05/WhatsApp-Image-2023-05-02-at-8.36.24-PM-1024x143.jpeg)