ಅಟ್ರಾಸಿಟಿ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (SC-ST) ದಾಖಲಿಸುವ ಎಲ್ಲ ಕೇಸ್ಗಳಲ್ಲೂ ಅಟ್ರಾಸಿಟಿ ಕಾಯ್ದೆ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸುವುದು ಬೇಡ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಎಸ್ ಸಿ/ಎಸ್ ಟಿ ಗೆ ಸೇರಿದವರು ದಾಖಲಿಸುವ ಎಲ್ಲ ಪ್ರಕರಣಗಳಲ್ಲೂ ಪ್ರಕರಣದ ಸತ್ಯಾಸತ್ಯತೆಯ ಆಧಾರದ ಮೇಲೆ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಬೇಕು. ಎಸ್ ಸಿ/ಎಸ್ ಟಿ ಗೆ ಸೇರಿದವರು ಸಂತ್ರಸ್ತರಾಗಿರುವ ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಆರೋಪಿಯ ವಿರುದ್ಧ ಎಸ್ ಸಿ, ಎಸ್ ಟಿ ಕಾಯ್ದೆ ಹೇರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಆದೇಶ ನೀಡಿದೆ.
ಜಾತಿಯ ದಾಳಿ ನಡೆಸುವ ಉದ್ದೇಶವಿಲ್ಲದ ಕೃತ್ಯಗಳು ಸಂಭವಿಸಿದಾಗ ಆರೋಪಿಯ ವಿರುದ್ಧ ಆ ಘಟನೆಯ ಹಿನ್ನೆಲೆ ಆಧರಿಸಿಯಷ್ಟೇ ಐಪಿಸಿ ಸೆಕ್ಷನ್ ಗಳ ಅನುಸಾರ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
