• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಹಾನಗಲ್ ಗೆದ್ದ ಕಾಂಗ್ರೆಸ್ಗೆ ಸಿಂದಗಿಯಲ್ಲಿ ಸೋಲು; ಒಂದು ಕಡೆ ವರ್ಕೌಟ್ ಆದ ಸಿದ್ದು-ಡಿಕೆಶಿ ಪ್ಲಾನ್ ಮತ್ತೊಂದು ಕಡೆ ಆಗಲಿಲ್ಲ ಯಾಕೆ?

ನಚಿಕೇತು by ನಚಿಕೇತು
November 5, 2021
in ಕರ್ನಾಟಕ, ರಾಜಕೀಯ
0
2023ರ ವಿಧಾನಸಭೆ ಚುನಾವಣೆ ಟಾರ್ಗೆಟ್ ; ಕಾಂಗ್ರೆಸ್‌ನಲ್ಲಿ ಕಿಡಿ ಹೊತ್ತಿಸಿದ ನಾಯಕತ್ವದ ವಿವಾದ!
Share on WhatsAppShare on FacebookShare on Telegram

ಸಿಎಂ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ, ಕಮಲ ಪಾಳಯಕ್ಕೆ ಠಕ್ಕರ್ ಕೊಟ್ಟಿದೆ. ಆದ್ರೆ ಗೆಲುವಿನ ನಿರೀಕ್ಷೆಯಿದ್ದ ಸಿಂದಗಿಯಲ್ಲೇ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಹಾಗಾದ್ರೆ ಹಾನಗಲ್ನಲ್ಲಿ ಕಾಂಗ್ರೆಸ್ಗೆ ವರ್ಕ್ಔಟ್ ಆಗಿದ್ದೇನು? ಸಿಂದಗಿಯಲ್ಲಿ ಕೈ ಪಾಳಯದ ಕೈ ಸುಡಲು ಕಾರಣಗಳೇನು? ಇಲ್ಲಿದೆ ಇದರ ಕಂಪ್ಲೀಟ್ ರಿಪೋರ್ಟ್.

ADVERTISEMENT

ಹಾನಗಲ್, ಸಿಎಂ ಬಸವರಾಜ್ ಬೊಮ್ಮಾಯಿಯ ತವರು ಜಿಲ್ಲೆಯ ಕ್ಷೇತ್ರ. ಸಿಎಂಗೆ ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರ. ಹೇಳಿ ಕೇಳಿ ಕೇಸರಿ ಪಾಳಯದ ಹಿಡಿತದಲ್ಲಿದ್ದ ಕ್ಷೇತ್ರ. ಆದ್ರೆ ಇಂತಹ ಕೇಸರಿ ಪಾಳಯದ ಕೋಟೆಗೆ ನುಗ್ಗಿ ಕಾಂಗ್ರೆಸ್ ತನ್ನ ಧ್ವಜ ಹಾರಿಸಿದೆ. ಸಿಎಂ ತವರು ಜಿಲ್ಲೆಯಲ್ಲೇ ಜಯ ಭೇರಿ ಬಾರಿಸಿ ಬಿಜೆಪಿಗೆ ಠಕ್ಕರ್ ಕೊಟ್ಟಿದೆ.

ಈಗ ಹಾನಗಲ್ನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು, ಬಿಜೆಪಿ ವಿರುದ್ಧ ಶ್ರೀನಿವಾಸ್ ಮಾನೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬರೊಬ್ಬರಿ 87,113 ಮತಗಳನ್ನ ಪಡೆದ ಶ್ರೀನಿವಾಸ್ ಮಾನೆ, 7,598 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಬಿಜೆಪಿ ಕೈನಲ್ಲಿದ್ದ ಕ್ಷೇತ್ರವನ್ನ ತನ್ನ ವಶಕ್ಕೆ ಪಡೆದುಕೊಂಡಿರುವ ಕಾಂಗ್ರೆಸ್ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ಸಾಬೀತು ಪಡಿಸಿದೆ.

ಫಲಿಸಿದ ಸಂಧಾನ ಸೂತ್ರ!

  • ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾನೆ ಭರ್ಜರಿ ಗೆಲುವು
  • ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾಬೀತು ಮಾಡಿದ ಕಾಂಗ್ರೆಸ್
  • ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ಮನೋಹರ ತಹಶೀಲ್ದಾರ
  • ಮನೋಹರ ತಹಶೀಲ್ದಾರನ್ನ ಶಾಂತಗೊಳಿಸಿದ್ದ ‘ಕೈ’ ನಾಯಕರು
  • ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದ ಡಿಕೆಶಿ, ಸಿದ್ದರಾಮಯ್ಯ
  • ಮಾನೆ ಗೆಲುವಿಗೆ ಪೂರಕವಾಗಿದ್ದ ಮನೋಹರ ಯಶಸ್ವಿ ಸಂಧಾನ

ಮಾನೆ ಗೆಲುವಿನ ಮೂಲಕ ಸಂಧಾನದ ಫಲ ಪಡೆದ ನಾಯಕರು

ಇನ್ನು, ಹಾನಗಲ್ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ಸಾಬೀತು ಮಾಡಿದೆ. ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ಮನೋಹರ ತಹಶೀಲ್ದಾರರನ್ನ ಕಾಂಗ್ರೆಸ್ ನಾಯಕರು ಶಾಂತಗೊಳಿಸಿದ್ದರು. ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಇದೇ ಸಂಧಾನ ಮಾನೆ ಗೆಲುವಿಗೆ ಪೂರಕವಾಗಿದ್ದು, ಈ ಮೂಲಕ ಕಾಂಗ್ರೆಸ್ ನಾಯಕರು ಸಂಧಾನದ ಫಲ ಪಡೆದಿದ್ದಾರೆ.

ಸದ್ಯ ಹಾನಗಲ್ನಲ್ಲಿ ಕಾಂಗ್ರೆಸ್ನ ಶ್ರೀನಿವಾಸ ಮಾನೆ ಗೆಲುವಿನಿಂದ ಯುವ ಶಾಸಕರ ಪವರ್ ಸೆಂಟರ್ ಉದಯವಾಗಿದೆ. ಮಾನೆ ಗೆಲುವಿಗೆ ಸಮಾನ ಮನಸ್ಕರ ಯುವಕರು ಟೊಂಕ ಕಟ್ಟಿ ಶ್ರಮಿಸಿದ್ದರಿಂದ, ಡಿಕೆಶಿ, ಸಿದ್ದು ಹೊರತಾಗಿ ಯುವ ಶಾಸಕರ ಪವರ್ ಸೆಂಟರ್ವೊಂದು ಉದಯವಾಗಿದೆ.

ಯುವ ಶಾಸಕರ ‘ಪವರ್’

  • ಹಾನಗಲ್ ಗೆಲುವಿನಿಂದ ಯುವ ಶಾಸಕರ ಪವರ್ ಸೆಂಟರ್ ಉದಯ
  • ಪವರ್ ಸೆಂಟರ್ನಲ್ಲಿ ಒಕ್ಕಲಿಗ, ಬ್ರಾಹ್ಮಣ, ಅಲ್ವ ಸಂಖ್ಯಾತ ಶಾಸಕರು
  • ಸಮಾನ ಮನಸ್ಕರ ಯುವ ಶಾಸಕರ ಜಂಟಿ ಪ್ರಚಾರದಿಂದಾಗಿ ಗೆಲುವು
  • ಯುವ ಶಾಸಕರ ಪವರ್ ಸೆಂಟರ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ

ಹಾನಗಲ್ ಗೆಲುವು ಸದ್ಯ ರಾಜ್ಯ ಕಾಂಗ್ರೆಸ್ನಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದು ಹೊರತಾದ ಯುವ ಶಾಸಕರ ಪವರ್ ಸೆಂಟರ್ ಉದಯಕ್ಕೆ ಕಾರಣವಾಗಿದೆ. ಈ ಪವರ್ ಸೆಂಟರ್ನಲ್ಲಿ ಒಕ್ಕಲಿಗ, ಬ್ರಾಹ್ಮಣ, ಅಲ್ವ ಸಂಖ್ಯಾತ, ಮರಾಠ ಹಾಗೂ ದಲಿತ ಶಾಸಕರು ಸೇರಿದಂತೆ ಸಮಾನ ಮನಸ್ಕರರ ಯುವ ಶಾಸಕರು ಒಳಗೊಂಡಿದ್ದಾರೆ. ಈ ಎಲ್ಲಾ ಸಮಾನ ಮನಸ್ಕ ಯುವ ಶಾಸಕರ ಜಂಟಿ ಪ್ರಚಾರದಿಂದಾಗಿ ಮಾನೆ ಗೆಲುವಿನ ನಗೆ ಬೀರೋದಕ್ಕೆ ಕಾರಣ ಅಂತಾ ಹೇಳಲಾಗ್ತಿದೆ. ಸದ್ಯ ಯುವ ಶಾಸಕರ ಪವರ್ ಸೆಂಟರ್ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಲೂ ಪೂರಕವಾಗಿದೆ.

ಸದ್ಯ ಸಿಎಂ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಗೆಲುವಿನ ನಗೆ ಏನೋ ಬೀರಿದೆ ಆದ್ರೆ ಭಾರೀ ನಿರೀಕ್ಷೆ ಇದ್ದ ಸಿಂದಗಿಯಲ್ಲೇ ಕಾಂಗ್ರೆಸ್ ಸೋಲುಂಡಿದೆ. ರಮೇಶ್ ಬೂಸನೂರು ವಿರುದ್ಧ ಕೈ ಅಭ್ಯರ್ಥಿ ಅಶೋಕ್ ಮನಗುಳಿ ಪರಾಭವಗೊಂಡಿದ್ದಾರೆ. ಅಷ್ಟಕ್ಕೂ ಸಿಂದಗಿಯಲ್ಲಿ ಕಾಂಗ್ರೆಸ್ ಎಡವಿದ್ದೆಲ್ಲಿ ಅಂತಾ ನೋಡೋದಾದ್ರೆ…

ಸಿಂದಗಿಯಲ್ಲಿ ಕಾಂಗ್ರೆಸ್ ಎಡವಿದ್ದೆಲ್ಲಿ?

  • ಸ್ಥಳೀಯವಾಗಿ ಟಿಕೆಟ್ ಆಕಾಂಕ್ಷಿಗಳ ಒಳೇಟನ್ನು ತಡೆಯುವಲ್ಲಿ ವಿಫಲ
  • ಅಶೋಕ್ ಬಗ್ಗೆ ಸ್ಥಳೀಯವಾಗಿದ್ದ ಅಸಮಾಧಾನ ಅರಿಯದೆ ಅಭ್ಯರ್ಥಿ ಮಾಡಿದ್ದು
  • ಎಂಬಿಪಿ, ಶಿವಾನಂದ, ಯಶವಂತರಾಯ ಗೌಡ ಪಾಟೀಲ್ ಬಣಗಳ ಸಂಧಾನ ವಿಫಲ
  • ಅಲ್ಪಸಂಖ್ಯಾತ ಮತಗಳು ಜೆಡಿಎಸ್ ತೆಕ್ಕೆಗೆ ಹೋಗದಂತೆ ತಡೆಯುವಲ್ಲಿ ವಿಫಲ

ಸ್ಥಳೀಯವಾಗಿ ಟಿಕೆಟ್ ಆಕಾಂಕ್ಷಿಗಳ ಒಳೇಟನ್ನು ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಅಂತಾ ಹೇಳಲಾಗ್ತಿದೆ. ಅಲ್ಲದೆ ಅಶೋಕ್ ಬಗ್ಗೆ ಸ್ಥಳೀಯವಾಗಿದ್ದ ಅಸಮಾಧಾನ ಅರಿಯದೆ ಅವರನ್ನ ಅಭ್ಯರ್ಥಿ ಮಾಡಿದ್ದು ಕೂಡ ಕಾಂಗ್ರೆಸ್ನ ಕೈ ಸುಡಲು ಕಾರಣವಾಗಿರಬಹುದು. ಇನ್ನು ಎಂಬಿಪಿ, ಶಿವಾನಂದ ಹಾಗೂ ಯಶವಂತರಾಯ ಗೌಡ ಪಾಟೀಲ್ ಬಣಗಳ ಸಂಧಾನದಲ್ಲಿ ವಿಫಲವಾಗಿದ್ದು ಕೂಡ ಕಾಂಗ್ರೆಸ್ ಸೋಲಿಗೆ ಕಾರಣವಾಗಿರಬಹುದು. ಇದಿಷ್ಟೇ ಅಲ್ಲ, ಅಲ್ಪಸಂಖ್ಯಾತ ಮತಗಳು ಜೆಡಿಎಸ್ ತೆಕ್ಕೆಗೆ ಹೋಗದಂತೆ ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿರೋದು ಕೂಡ ಸೋಲಿನ ಹಿಂದಿರುವ ಕಾರಣ ಅಂತಾ ಹೇಳಲಾಗ್ತಿದೆ.

ಒಟ್ಟಾರೆ ಹಾನಗಲ್ನಲ್ಲಿ ಕಾಂಗ್ರೆಸ್ ನಾಯಕರ ಅಬ್ಬರದ ಪ್ರಚಾರಕ್ಕೆ ಮತದಾರರು ಅಸ್ತು ಎಂದಿದ್ದಾರೆ. ನಾಯಕರ ಒಗ್ಗಟ್ಟಿನ ಮಂತ್ರದಿಂದ ಹಾನಗಲ್ನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಸದ್ಯ ಹಾನಗಲ್ನ ಈ ಗೆಲುವು 2023ರ ಚುನಾವಣೆ ಎದುರಿಸಲು ಕಾಂಗ್ರೆಸ್ಗೆ ಹೊಸದೊಂದು ಭರವಸೆ ಮೂಡಿಸಿದೆ.

Tags: BJPCongress PartyCovid 19DK Shivakumarಬಿಜೆಪಿಸಿಂದಗಿಸಿದ್ದರಾಮಯ್ಯಸಿದ್ದು-ಡಿಕೆಶಿಹಾನಗಲ್
Previous Post

ಕೋವಿಡ್-19 ಚಿಕಿತ್ಸೆಗಾಗಿ ಮಾತ್ರೆ, ಬ್ರಿಟನ್ ನಿಂದ ಅನುಮೋದನೆ!

Next Post

ಬಿಟ್ ಕಾಯಿನ್ ಪ್ರಕರಣ ಕೇಂದ್ರ ತನಿಖಾ ಸಂಸ್ಥೆಗೆ : ಈ ಬಗ್ಗೆ ಮಾಹಿತಿ ಕೋರಿ RTI ಅರ್ಜಿ – ಡಿಕೆಶಿ

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಹಾನಗಲ್‌ ಉಪಚುನಾವಣೆ  ಗೆಲುವಿಗೆ, ಕ್ಷೇತ್ರದ ಮತದಾರರಿಗೆ ಸಲ್ಯೂಟ್‌ ಮಾಡಿದ : DK Shivakumar

ಬಿಟ್ ಕಾಯಿನ್ ಪ್ರಕರಣ ಕೇಂದ್ರ ತನಿಖಾ ಸಂಸ್ಥೆಗೆ : ಈ ಬಗ್ಗೆ ಮಾಹಿತಿ ಕೋರಿ RTI ಅರ್ಜಿ - ಡಿಕೆಶಿ

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada