ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಮಂಜುನಾಥ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಡಿ.ಕೆ ಸುರೇಶ್ ಸೋಲಿನ ಸುಳಿಗೆ ಸಿಲುಕಿದ್ದಾರೆ. 8ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಆದಾಗ 88 ಸಾವಿರ ಮತಗಳಿಂದ ಡಾ ಮಂಜುನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸಹೋದರನ ಕ್ಷೇತ್ರದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಟೆನ್ಷನ್ ಶುರುವಾಗಿದ್ದು, ಸಹೋದರ ಡಿಕೆ ಸುರೇಶ್ಗೆ ಹಿನ್ನಡೆ ವರದಿ ಬರ್ತಿದ್ದಂತೆ, ಆಪ್ತರಿಗೆ ಕರೆ ಮಾಡುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್, ಮತ ಎಣಿಕೆ ಕೇಂದ್ರದಲ್ಲಿರುವ ಆಪ್ತರ ಜೊತೆಗೆ ಮಾತನಾಡಿ ಯಾವ ಕ್ಷೇತ್ರದಲ್ಲಿ ಮತ ಎಣಿಕೆ ಆಗಿದೆ, ಯಾವುದು ಮುಗಿದಿದೆ..? ಮುಂದೆ ಯಾವ ಕ್ಷೇತ್ರ ಇದೆ..? ಇನ್ನೂ ಎಷ್ಟು ರೌಂಡ್ಸ್ಗಳಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಸದಾಶಿವನಗರ ಮನೆಯಲ್ಲಿ ಇದ್ದುಕೊಂಡೇ ಆಪ್ತರಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಣ್ಣನ ಜೊತೆಯಲ್ಲೇ ಇರುವ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್, ಮನೆಯಲ್ಲೇ ಕೂತು ಫಲಿತಾಂಶ ವೀಕ್ಷಣೆ ಮಾಡ್ತಿದ್ದಾರೆ. ಸದ್ಯ ಯಾರೊಬ್ಬರಿಗೂ ಮನೆಗೆ ಒಳಗೆ ಬಿಡದಂತೆ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದಾರೆ. ಕೆಲ ಕಾರ್ಯಕರ್ತರು ಮನೆ ಬಳಿಗೆ ಬಂದರೂ ವಾಪಸ್ ಕಳಿಸ್ತಿದ್ದಾರೆ.
ಸದ್ಯ ಮನೆಯಲ್ಲೇ ಡಿ.ಕೆ ಸುರೇಶ್ ಜೊತೆ ಕುಳಿತು ಫಲಿತಾಂಶ ವೀಕ್ಷಣೆ ಮಾಡ್ತಾ ಇರೋ ಡಿ.ಕೆ ಶಿವಕುಮಾರ್ಗೆ ಕ್ಷಣಕ್ಷಣಕ್ಕೂ ಟೆನ್ಷನ್ ಹೆಚ್ಚುತ್ತಿದೆ. ಸೋಲಿನ ಭೀತಿಯಲ್ಲಿ ಯಾರೊಂದಿಗೂ ಮಾತನಾಡದೆ, ಕೇವಲ ಎಣಿಕಾ ಕೇಂದ್ರದಲ್ಲಿರುವ ತನ್ನ ಆಪ್ತರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ.