ಸಾಲು ಸಾಲು ಮಿಸ್ಟೇಕ್ ಮಾಡಿ ಮಕ್ಕಳ ಬದುಕಲ್ಲಿ ಚೆಲ್ಲಾಟ ಆಡ್ತಾ ಇರೋ ಇಲಾಖೆ ವಿರುದ್ಧ ಇಷ್ಟು ದಿನ ಸಂಘಟನೆಗಳು ದೂರುತ್ತಾ ಇದ್ವು ಆದ್ರೀಗ ಖುದ್ದು ಮಕ್ಕಳೇ ಮುಂದೆ ಬಂದು ಇಲಾಖೆಯ ಮೌಲ್ಯಮಾಪನದ ಕರ್ಮ ಕಾಂಡವನ್ನು ರಿವೀಲ್ ಮಾಡಿದ್ದಾರೆ.. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ..
ಒಬ್ಬರಲ್ಲ ಇಬ್ಬರಲ್ಲ ಇಲ್ಲಿ ಕೂತಿರೋ ಪ್ರತಿಯೊಬ್ಬರದ್ದು ಇದೇ ಪರಿಸ್ಥಿತಿ… ಇದೇ ಪ್ರಾಬ್ಲಂ.. ಈ ಸಮಸ್ಯೆಯ ಸೃಷ್ಟಿಕರ್ತ ನಮ್ಮ ರಾಜ್ಯದ ಶಿಕ್ಷಣ ಇಲಾಖೆ.. ಇಲಾಖೆಯ ಬೇಜವಾಬ್ದಾರಿತನದಿಂದ ಈ SSLC ಮಕ್ಕಳ ಭವಿಷ್ಯ ಮೂರಾ ಬಟ್ಟೆಯಾಗಿದೆ.. ಈ ವರ್ಷ ಮೌಲ್ಯಮಾಪನದಲ್ಲಿ ಮಾಡಿರುವ ಬೇಜವಬ್ದಾರಿತನ ಮಕ್ಕಳ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.. ಪಾಸ್ ಆಗುವವರು ಫೈಲ್ , ಫೈಲ್ ಆಗುವವರು ಪಾಸ್ ಆದಂತಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳೇ ಪ್ರೆಸ್ ಕ್ಲಬ್ ಅಲ್ಲಿ ಸುದ್ದಿಗೋಷ್ಠಿ ನಡೆಸಿ ಸಮಸ್ಯೆಗಳ ಬಿಚ್ಚಿಟ್ಟಿದ್ದಾರೆ..
ಪರೀಕ್ಷೆ ತಂದ ಸಂಕಷ್ಟ
ರಿಸಲ್ಟ್ ಶೀಟ್ ಅಲ್ಲಿ ಇದ್ದಿದ್ದು 5 ಅಂಕ, ಉತ್ತರ ಪತ್ರಿಕೆಯಲ್ಲಿ ಬಂದದ್ದು 70ಅಂಕ ಸರಿ ಬರೆದ ಉತ್ತರಕ್ಕೆ ತಪ್ಪು ಅಂಕ , ತಪ್ಪು ಬರೆದ ಉತ್ತರಕ್ಕೆ ಸರಿ ಅಂಕ ಎಲ್ಲಾ ಸಬ್ಜೆಕ್ಟ್ ಅಲ್ಲಿ ಡಿಸ್ಟಿನ್ಷನ್ ಒಂದು ಸಬ್ಜೆಕ್ಟ್ ಅಲ್ಲಿ ಕಡಿಮೆ ಅಂಕ..
ಇಡೀ ಉತ್ತರ ಪತ್ರಿಕೆ ಟೋಟಲ್ ಮಾಡಿದ್ರೆ ವಿದ್ಯಾರ್ಥಿಯೊಬ್ಬನಿಗೆ 70ಅಂಕ ಬಂದ್ರೆ ರಿಸಲ್ಟ್ ಶೀಟ್ ಅಲ್ಲಿ ಆತನಿಗೆ ಕೊಟ್ಟಿರುವುದು 5 ಅಂಕ, ಕೀ ಉತ್ತರದಲ್ಲಿ ಇರುವಂತೆ ಬರೆದರು ವಿದ್ಯಾರ್ಥಿನಿಗೆ ಅಂಕ ಕೊಟ್ಟಿಲ್ಲ, ತಪ್ಪು ಬರೆದ ಅದೇ ವಿದ್ಯಾರ್ಥಿನಿಗೆ ಅಂಕ ಕೊಟ್ಟಿರುವ ಮೌಲ್ಯಮಾಪಕರು.. ಡಿಸ್ಟಿಂಗ್ಶನ್ ಬರಬೇಕಿದ್ದ ವಿದ್ಯಾರ್ಥಿನಿಗೆ 20 ಅಂಕಗಳ ಕಡಿತವು ಆಗಿದ್ಯಂತೆ.. ಇದೆಲ್ಲಾ ಇವತ್ತು ಬೇರೆ ಬೇರೆ ಶಾಲೆಯ SSLC ಪರೀಕ್ಷೆ ಬರೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೇಳಿಕೊಂಡ ಸಮಸ್ಯೆಯ ಸಾರಾಂಶ.
ಮೌಲ್ಯಮಾಪನದ ಹೆಸರಲ್ಲಿ ಶಿಕ್ಷಣ
ಇಲಾಖೆ ದುಡ್ಡು ಮಾಡ್ತಿದೆಯಾ..?ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಮೌಲ್ಯಾಂಕನ ಮಾರ್ಕ್ಸ್ ನೀಡಿ ಶಿಕ್ಷಣ ಇಲಾಖೆ ಸಾರ್ವಜನಿಕರಾದಿಯಾಗಿ ಸಿಎಂ ಸಿದ್ದರಾಮಯ್ಯ ವರೆಗೂ ಛೀಮಾರಿ ಹಾಕಿಸಿ ಕೊಂಡಿತ್ತು
ಈಗ ಅಹರ್ತೆ ಪಡೆಯದೆ ಇರೋ ಪ್ರಾಥಮಿಕ ಶಾಲಾ ತರಗತಿಯ ಶಿಕ್ಷಕರನ್ನ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನಕ್ಕೆ ಮಾಡಿಕೊಂಡಿತ್ತು.. ಹೀಗಾಗಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬರ್ತಿದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗ್ತೀದೆ ಅಂತಾ ವಿದ್ಯಾರ್ಥಿಗಳು ಹಾಗೂ ಪೋಷಕರು ಉತ್ತರ ಪತ್ರಿಕೆಯ ಪ್ರತಿಯೊಂದಿಗೆ ಶಾಲಾ ಶಿಕ್ಷಣ ಇಲಾಖೆ ವಿರುದ್ಧ ತಿರುಗಿ ಬಿದ್ದಿದ್ದಾರೆ
ಸಾಲು ಸಾಲು ಸಮಸ್ಯೆಗಳು ಸೃಷ್ಟಿಯಾಗಿ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದರು ಶಿಕ್ಷಣ ಇಲಾಖೆ ಮಾತ್ರ ಇತ್ತ ಕಡೆ ಗಮನ ಕೊಟ್ಟ ಹಾಗೇ ಕಾಣಿಸ್ತಾಯಿಲ್ಲ.. ಈ ಕಳಪೆ ಮೌಲ್ಯಮಾಪನ , ಇಲಾಖೆಯ ಪರೀಕ್ಷಾ ಗೊಂದಲದಿಂದ ಬೇಸತ್ತ ಪೋಷಕರು ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ.. ಆದ್ರೆ ಈ ಪೋಷಕರ, ವಿದ್ಯಾರ್ಥಿಗಳ ವ್ಯಥೆ ಶಿಕ್ಷಣ ಇಲಾಖೆಯ ಕಣ್ಣು ತೆರಸುತ್ತಾ? ಈ ಬಗ್ಗೆ ಏನಾದ್ರೂ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕು.