ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಂಗಾಪುರ್ ಪ್ರವಾಸ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸೆಕ್ಸೇನಾ ತಿರಸ್ಕರಿಸಿದ್ದಾರೆ.
ಸಿಂಗಾಪುರದಲ್ಲಿ ನಡೆಯುವ Eight World Cities ಸಮಿಟ್ಗೆ ತೆರಳುವ ಸಲುವಾಗಿ ಗವರ್ನರ್ಗೆ ಕೇಜ್ರಿವಾಲ್ ಮನವಿ ಸಲ್ಲಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಗವರ್ನರ್ ಮುಖ್ಯಮಂತ್ರಿಗಳ ಹಾಜರಾತಿಗೆ ಯೋಗ್ಯವಲ್ಲದ ಮೇಯರ್ಗಳ ಸಮ್ಮೇಳನದಲ್ಲಿ ಭಾಗವಹಿಸದಂತೆ ಸಲಹೆಯನ್ನು ಸಹ ನೀಡಿದ್ದಾರೆ.
ಸಮ್ಮೇಳನದ ವಿಷಯಕ್ಕೆ ಅನುಗುಣವಾದ ವಿಷಯಗಳ ಬಗ್ಗೆ GNCTD ವಿಶೇಷ ಡೊಮೇನ್ ಹೊಂದಿಲ್ಲ ಮತ್ತು ಆದ್ದರಿಂದ ಮುಖ್ಯಮಂತ್ರಿಯೊಬ್ಬರು ಹಾಜರಾಗುವುದು ಸೂಕ್ತವಲ್ಲ ಎಂಬ ಅಂಶವನ್ನು ಉಲ್ಲೇಖಸಿದ್ದಾರೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿದೆ.