ಬೆಂಗಳೂರು ಗ್ರಾಮಾಂತರ (Bangalore rural) ಲೋಕಸಭಾ ಕ್ಷೇತ್ರದ ರಾಮನಗರ ಜಿಲ್ಲೆಯ (ramnagar district) ದ್ಯಾವರಸೇಗೌಡನ ದೊಡ್ಡಿ ಗೋಡೌನ್ನಲ್ಲಿ ಕಾಂಗ್ರೆಸ್ನವರು (congress) ಅಕ್ರಮವಾಗಿ ಮತದಾರರಿಗೆ ಹಂಚಲು ಸೀರೆ, ಡ್ರೆಸ್ಗನ್ನು (saree,dress) ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಜೆಡಿಎಸ್ (jds) ಕಾರ್ಯಕರ್ತರು ವ್ಯಾಪಕವಾದ ಆಕ್ರೋಶ ಹೊರಹಾಕಿದ್ದಾರೆ. Dr.ಮಂಜುನಾಥ್ (Dr.manjunath) ಅವರ ಸ್ಪರ್ಧೆಯಿಂದ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ (congress) , ಮತದಾರರಿಗೆ ಆಮಿಷ ಒಡ್ಡಲು ಮುಂದಾಗಿದೆ ಎಂದು ಜೆಡಿಎಸ್ (jds) ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ.

ಗೋಡೌನ್ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀರೆ ಹಾಗೂ ಡ್ರೆಸ್ ಪೀಸ್ಗಳನ್ನ ಸಂಗ್ರಹಿಸಿರೋ ಬಗ್ಗೆ ಮಾಹಿತಿ ಗೊತ್ತಾದ ಕೂಡಲೆ ಜೆಡಿಎಸ್ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ ಸೀರೆ, ಡ್ರೆಸ್ ಸಾಗಿಸುತ್ತಿದ್ದ ವಾಹನವನ್ನ ತಡೆದಿದ್ದಾರೆ. ಈ ವೇಳೆ ಗೋಡೌನ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದೇ ವೇಳೆ ಗೋಡೌನ್ ಬಳಿ ಜೆಡಿಎಸ್-ಕಾಂಗ್ರೆಸ್ (jds- congress) ಕಾರ್ಯಕರ್ತರ ದೊಡ್ಡ ಹೈಡ್ರಾಮಾವೇ (Highdrama)ನಡೆದೋಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ DySP ದಿನಕರ್ ಶೆಟ್ಟಿ ( Dinakar shetty) ನೇತೃತ್ವದ ಪೊಲೀಸರ ತಂಡ,ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾದ ಸೀರೆಗಳ ದಾಸ್ತಾನು ಬಗ್ಗೆ ಮಾಹಿತಿ ಪಡೆದು, ಸಿಸಿ ಕ್ಯಾಮರಾ ( cc camera) ದೃಶ್ಯಗಳನ್ನು ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದೆ. ಈ ಮಧ್ಯೆ ಇದೇ ರೀತಿ ಚುನಾವಣಾ ಅಕ್ರಮಗಳು ಮುಂದುವರೆದ್ರೆ ಬಚ್ಚಿಟಿರುವ ಸೀರೆ ಕುಕ್ಕರ್ ಗಳನ್ನ ಹುಡುಕಿ ಬೆಂಕಿ ಹಚ್ಚಲು ಕಾರ್ಯಕರ್ತರಿಗೆ ಕರೆ ನೀಡಬೇಕಾಗುತ್ತದೆ ಎಂದು ಹೆಚ್.ಡಿ.ಕೆ (HDK)ಎಚ್ಚರಿಕೆ ನೀಡಿದ್ದಾರೆ.