Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ತಾಯಿಯನ್ನು ಕೊಂದು 3 ತಿಂಗಳು ಮೃತದೇಹದೊಂದಿಗೆ ವಾಸ : ವಾಸನೆ ಮರೆಮಾಚಲು 200 ಪರ್ಫ್ಯೂಮ್​ ಬಳಕೆ..!

ಮಂಜುನಾಥ ಬಿ

ಮಂಜುನಾಥ ಬಿ

March 16, 2023
Share on FacebookShare on Twitter

ಮಹಾರಾಷ್ಟ್ರ : ತಾಯಿ ಪ್ರತ್ಯಕ್ಷ ದೇವರು ಅಂತಾರೆ. ಆದರೆ ಮಹಾರಾಷ್ಟ್ರದ ಕಲಾಚೌಕಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪುತ್ರಿ ಆಕೆಯ ಮೃತದೇಹದೊಂದಿಗೆ ಮೂರು ತಿಂಗಳು ವಾಸ ಮಾಡಿದ್ದಾಳೆ. ತಾಯಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಕಬ್ಬಿಣದ ಕಪಾಟಿನಲ್ಲಿ ಸಂಗ್ರಹಿಸಿ ಇಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ : ಸಿಎಂ ಬೊಮ್ಮಾಯಿ


ಕೊಲೆಯಾದ ಮಹಿಳೆಯನ್ನು ವೀಣಾ(55) ಎಂದು ಗುರುತಿಸಲಾಗಿದೆ. ಪುತ್ರಿ ರಿಂಪಲ್​ ಜೈನ್​(24)ಳನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈಕೆ ಡಿಸೆಂಬರ್​ ತಿಂಗಳಲ್ಲಿ ತಾಯಿಯನ್ನು ಕೊಲೆ ಮಾಡಿ ಚೂರಿಯಿಂದ ಆಕೆಯ ದೇಹವನ್ನು ತುಂಡು ತುಂಡು ಮಾಡಿದ್ದಳು ಎನ್ನಲಾಗಿದೆ. ನೆರೆಹೊರೆಯವರು ತಾಯಿ ಎಲ್ಲಿ ಎಂದು ಕೇಳಿದರೆ ಅವರು ಕಾನ್ಪುರಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಳು ಎನ್ನಲಾಗಿದೆ.


ತಾಯಿಯ ಮೃತದೇಹದಿಂದ ಕೆಟ್ಟ ವಾಸನೆ ಬರಲು ಆರಂಭಿಸಿದ ಬಳಿಕ ನೆರೆಹೊರೆಯವರು ಈ ಬಗ್ಗೆ ರಿಂಪಲ್​ ಬಳಿಯಲ್ಲಿ ಅನೇಕ ಬಾರಿ ತಗಾದೆ ತೆಗೆದಿದ್ದರು ಎನ್ನಲಾಗಿದೆ. ಮೃತದೇಹದ ವಾಸನೆಯನ್ನು ಮರೆ ಮಾಚಲು ಈಕೆ 200ಕ್ಕೂ ಅಧಿಕ ಪರ್ಫ್ಯೂಮ್​ ಬಾಟಲಿ ಹಾಗೂ ರೂಮ್​ ಫ್ರೆಶ್ನರ್​ ಬಳಕೆ ಮಾಡಿದ್ದಳು ಎನ್ನಲಾಗಿದೆ. ಆದರೂ ವಾಸನೆ ಬಗ್ಗೆ ಅಕ್ಕ ಪಕ್ಕದ ಮನೆಯವರು ದೂರುತ್ತಲೇ ಇದ್ದ ಹಿನ್ನೆಲೆಯಲ್ಲಿ ಈಕೆ ಎಲ್ಲರೊಂದಿಗೆ ಸಂಪರ್ಕ ಕಡಿದುಕೊಂಡು ಮನೆಯ ಒಳಗೆ ವಾಸವಿದ್ದಳು ಎನ್ನಲಾಗಿದೆ.


ಮಂಗಳವಾರ ರಾತ್ರಿ ಎಂದಿನಂತೆ ಹಣ ನೀಡಲು ಬಂದ ಸೋದರ ಸಂಬಂಧಿಗೆ ರಿಂಪಲ್​ ಮನೆ ಒಳಗೆ ಬರಲು ಅವಕಾಶ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ಈತ ತನ್ನ ತಾಯಿ ಹಾಗೂ ಸಹೋದರನನ್ನು ರಿಂಪಲ್​ ಮನೆಗೆ ಕರೆಯಿಸಿದ್ದಾನೆ. ಆಗಲೂ ಮನೆ ಒಳಗೆ ಪ್ರವೇಶಿಸಲು ಈಕೆ ಅವಕಾಶ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ರಿಂಪಲ್​ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆಯ ತಪಾಸಣೆ ನಡೆಸಿದ ವೇಳೆಯಲ್ಲಿ ಕಪಾಟಿನ ಒಳಗೆ ಪ್ಲಾಸ್ಟಿಕ್​ ಚೀಲಗಳಲ್ಲಿ ಮೃತದೇಹದ ಕೊಳೆತ ತುಂಡುಗಳು ಪತ್ತೆಯಾಗಿದೆ. ಮಾನಸಿಕ ಸ್ಥಿಮಿತ ಸರಿಯಿಲ್ಲದೇ ರಿಂಪಲ್​ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02
Top Story

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

by ಕೃಷ್ಣ ಮಣಿ
March 24, 2023
ಶ್ರೀ ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿಯವರ ನಿಧನಕ್ಕೆ  ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಹೆಚ್‌ ಡಿಕೆ ಸೇರಿ ಗಣ್ಯರಿಂದ ಸಂತಾಪ..
Top Story

ಶ್ರೀ ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿಯವರ ನಿಧನಕ್ಕೆ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಹೆಚ್‌ ಡಿಕೆ ಸೇರಿ ಗಣ್ಯರಿಂದ ಸಂತಾಪ..

by ಪ್ರತಿಧ್ವನಿ
March 23, 2023
ದೇಶದಲ್ಲಿ ಬಿಜೆಪಿಗೊಂದು ಕಾನೂನು ಉಳಿದವರಿಗೆ ಇನ್ನೊಂದು ಕಾನೂನು : ಬಿ.ಕೆ ಹರಿಪ್ರಸಾದ್​ ಕಿಡಿ
Top Story

ದೇಶದಲ್ಲಿ ಬಿಜೆಪಿಗೊಂದು ಕಾನೂನು ಉಳಿದವರಿಗೆ ಇನ್ನೊಂದು ಕಾನೂನು : ಬಿ.ಕೆ ಹರಿಪ್ರಸಾದ್​ ಕಿಡಿ

by ಮಂಜುನಾಥ ಬಿ
March 25, 2023
NIRMALANANDA SWAMIJI | ನೈಜತೆ ತಿಳಿಯದೆ ಉರಿಗೌಡ, ನಂಜೇಗೌಡ ವಿಚಾರದಲ್ಲಿ ಗೊಂದಲ ಸೃಷ್ಟಿಸಬೇಡಿ #PRATIDHVANI
ಇದೀಗ

NIRMALANANDA SWAMIJI | ನೈಜತೆ ತಿಳಿಯದೆ ಉರಿಗೌಡ, ನಂಜೇಗೌಡ ವಿಚಾರದಲ್ಲಿ ಗೊಂದಲ ಸೃಷ್ಟಿಸಬೇಡಿ #PRATIDHVANI

by ಪ್ರತಿಧ್ವನಿ
March 20, 2023
BANGALORE HUBBA | ಬೆಂಗಳೂರು ಹಬ್ಬ ಸಂಭ್ರಮ,, ಆರ್ ಅಶೋಕ್ ಹಾಡಿ ಹೊಗಳಿದ ಗಣ್ಯರು #PRATIDHVANI
ಇದೀಗ

BANGALORE HUBBA | ಬೆಂಗಳೂರು ಹಬ್ಬ ಸಂಭ್ರಮ,, ಆರ್ ಅಶೋಕ್ ಹಾಡಿ ಹೊಗಳಿದ ಗಣ್ಯರು #PRATIDHVANI

by ಪ್ರತಿಧ್ವನಿ
March 25, 2023
Next Post
Minister R.Ashok v/s H.D.Kumaraswamy : ಸಚಿವ ಆರ್.ಅಶೋಕ್ ಗಿಣಿಭವಿಷ್ಯ.. ಸಂಖ್ಯಾಸಾಸ್ತ್ರ ಹೇಳ್ತಾರಾ..? : ಹೆಚ್.ಡಿಕೆ ಟಾಂಗ್

Minister R.Ashok v/s H.D.Kumaraswamy : ಸಚಿವ ಆರ್.ಅಶೋಕ್ ಗಿಣಿಭವಿಷ್ಯ.. ಸಂಖ್ಯಾಸಾಸ್ತ್ರ ಹೇಳ್ತಾರಾ..? : ಹೆಚ್.ಡಿಕೆ ಟಾಂಗ್

Rahul Gandhi : ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ : ರಾಹುಲ್ ಗಾಂಧಿ ಸ್ಪಷ್ಟನೆ..!

Rahul Gandhi : ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ : ರಾಹುಲ್ ಗಾಂಧಿ ಸ್ಪಷ್ಟನೆ..!

Unfinished Akkamahadevi Putthali : ಪೂರ್ಣಗೊಳ್ಳದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟನೆಗೆ ಸಿಎಂ ಆಗಮನ : ಕಾಂಗ್ರೆಸ್ ಆಕ್ರೋಶ

Unfinished Akkamahadevi Putthali : ಪೂರ್ಣಗೊಳ್ಳದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟನೆಗೆ ಸಿಎಂ ಆಗಮನ : ಕಾಂಗ್ರೆಸ್ ಆಕ್ರೋಶ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist