ಮರ್ಡರ್ ಕೇಸ್ ನಲ್ಲಿ D BOSS ಅರೆಸ್ಟ್ ಆಗಿದ್ದಾರೆ. ಅಭಿಮಾನಿಯನ್ನ ಕೊಂದ ಕೇಸ್ನಲ್ಲಿ ಗೆಳತಿ ಪವಿತ್ರಾ ಗೌಡ ಜೊತೆ ಚಾಲೆಂಜಿಂಗ್ ಸ್ಟಾರ್ ಡಿ ಅಂದರ್ ಆಗಿದ್ದಾರೆ.
![](https://pratidhvani.com/wp-content/uploads/2024/06/IMG_8184-1.jpeg)
ದರ್ಶನ್ ಅಂಡ್ ಗ್ಯಾಂಗ್ನ 13 ಮಂದಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡ A1 ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ A2 ಆರೋಪಿಗಳಾಗಿದ್ದಾರೆ. ಎಲ್ರಿಗೂ ಜೈಲುವಾಸ ಕಟ್ಟಿಟ್ಟಬುತ್ತಿ ಎನ್ನಲಾಗ್ತಿದೆ. ಇಂತಹ ದರ್ಶನ್ ಸ್ಯಾಂಡಲ್ವುಡ್ನಲ್ಲಿ ಕಳೆದ 15-18 ವರ್ಷಗಳಿಂದ ವಿಜಯಯಾತ್ರೆ ನಡೆಸಿದ್ದ ಸ್ಟಾರ್ ನಟ. ಗ್ರೌಂಡ್ ಲೆವೆಲ್ನಿಂದ ಮೇಲೆ ಬಂದು ಅಪಾರ ಸಂಖ್ಯೆಯ ಫ್ಯಾನ್ ಫಾಲೋಯಿಂಗ್ ಇದ್ದಂತಹ ಸ್ಟಾರ್ ನಟ. ಬಹುಶಃ ದರ್ಶನ್ಗೆ ಇರೋ ಅಭಿಮಾನಿಗಳು ಕನ್ನಡದ ಯಾವ ಸ್ಟಾರ್ ನಟನಿಗೂ ಇಲ್ಲ ಅನ್ಸತ್ತೆ.
![](https://pratidhvani.com/wp-content/uploads/2024/06/11.jpg)
ದರ್ಶನ್ ಹೆಸರಾಂತ ನಟ ತೂಗುದೀಪ ಶ್ರೀನಿವಾಸ್ ಅವರ ಹಿರಿಯ ಮಗ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ, 1943ರಲ್ಲಿ ಮುನಿಸ್ವಾಮಿ ಮತ್ತು ಪಾರ್ವತಮ್ಮ ದಂಪತಿಗಳ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದ ಇವರು, ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡರು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಮುಂಚೂಣಿಯಿಂದ ಕಾಣಿಸಿಕೊಳ್ಳುತ್ತಿದ್ದ ಶ್ರೀನಿವಾಸ್, ಮುಂದೆ ಖ್ಯಾತ ನಿರ್ಮಾಪಕ ಎಂ.ಪಿ.ಶಂಕರ್ ತಂಡ ಸೇರಿದರು.
![](https://pratidhvani.com/wp-content/uploads/2024/06/4.jpg)
ಮೈಸೂರಿನವರೇ ಆದ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿಯವರು ಇವರ ನಾಟಕ ನೋಡಿ ಮೆಚ್ಚಿಕೊಂಡು ತಮ್ಮ ಚಿತ್ರ `ತೂಗುದೀಪ’ದಲ್ಲಿ ಅವಕಾಶ ನೀಡಿದರು.
![](https://pratidhvani.com/wp-content/uploads/2024/06/download-19.jpeg)
ಆ ಚಿತ್ರದ ಹಾಡುಗಳಿಗೆ ಗಾಯಕ ಪಿ.ಬಿ.ಶ್ರೀನಿವಾಸ ಧ್ವನಿ ನೀಡಿದ್ದರು. ಚಿತ್ರದ ಟೈಟಲ್ ಕಾರ್ಡ್ನಲ್ಲಿ ಇಬ್ಬರು ಶ್ರೀನಿವಾಸ ಹೆಸರುಗಳು ಬೇಡವೆಂದು ಸ್ವಾಮಿಯವರು ಶ್ರೀನಿವಾಸರಿಗೆ ತೂಗುದೀಪ ಶ್ರೀನಿವಾಸ ಎಂದು ಹೆಸರು ನೀಡಿದರು. ಆಗಿನಿಂದ ಶ್ರೀನಿವಾಸ್ ಆಗಿದ್ದ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಆದರು. ನಂತರ ದಿನಗಳಲ್ಲಿ ದರ್ಶನ್ ಸಿನಿಮಾರಂಗಕ್ಕೆ ಬಂದ ನಂತ್ರ ತಮ್ಮ ಹೆಸರಿನ ಮುಂದೆ ತೂಗುದೀಪ ಸೇರಿಕೊಂಡು ದರ್ಶನ್ ತೂಗುದೀಪ ಆದರು. ಕಷ್ಟಪಟ್ಟು ಮೇಲೆ ಬಂದ ದರ್ಶನ್ ಈಗ ಗೆಳತಿ ಪವಿತ್ರಾ ಗೌಡ ಜೊತೆ ಸೇರಿ ಮರ್ಡರ್ ಕೇಸ್ ನಲ್ಲಿ ಫಿಟ್ ಆಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸ್ಯಾಂಡಲ್ ವುಡ್ ಸುಲ್ತಾನನಾಗಿ ಮೆರೆದ ದರ್ಶನ್ ಸಿನಿ ಬದುಕಿನ ಮೇಲೆ ಆತಂಕದ ಕಾರ್ಮೋಡ ಕವಿದಿದೆ.