ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಮತ್ತೆ 14 ದಿನಗಳವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ.ನ್ಯಾಯಾಂಗ ಬಂಧನದ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರನ್ನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಇದೀಗ ಆಗಸ್ಟ್ 1ರವರೆಗೆ ನಟ ದರ್ಶನ್ ಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ನಟ ದರ್ಶನ್ ಮತ್ತೆ ಜೈಲುವಾಸ ಅನುಭವಿಸಬೇಕಿದೆ.
ಇನ್ನು ಮನೆಯಿಂದ ಊಟ, ಪುಸ್ತಕ, ಹಾಸಿಗೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ನಾಳೆ ಮಧ್ಯಾಹ್ನಕ್ಕೆ ಮುಂದೂಡಿದೆ
ಕೋವಿಡ್ ಸೋಂಕಿಗೆ ಒಳಲಾಗಿದ್ದಾಗ ಆಯುರ್ವೇದದ ಔಷಧಿ ಬಳಸಿ ಗುಣಮುಖರಾದ ಮುಖ್ಯ ನ್ಯಾಯ ಮೂರ್ತಿ
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಆಯುಷ್ ಜೊತೆಗಿನ ತಮ್ಮ ಒಡನಾಟವು COVID-19 ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭವಾಯಿತು ಎಂದು ಗುರುವಾರ ಹೇಳಿದ್ದಾರೆ. ಸಾಂಕ್ರಾಮಿಕ...
Read more