ಡಿ ಬಾಸ್ ಗ್ಯಾಂಗ್ (Darshan & gang) ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ(Renukaswamy murder case), ಇದೀಗ ಮೊದಲ ಜಾಮೀನು ಅರ್ಜಿಯ ಸಲ್ಲಿಕೆಯಾಗಿದೆ. ಸಿಸಿಎಚ್ 57 ನೇ ಕೋರ್ಟ್ ಗೆ ಜಾಮೀನು ಅರ್ಜಿಯ ಸಲ್ಲಿಕೆ ಮಾಡಲಾಗಿದೆ. ಆದ್ರೆ ಇದು ದರ್ಶನ್ ರ ಜಾಮೀನು ಅರ್ಜಿಯಲ್ಲ.
![](https://pratidhvani.com/wp-content/uploads/2024/06/197bfd40-b63e-449f-b3c2-4c34e91f640e.jpeg)
ಇದೇ ಪ್ರಕರಣದ ಎ17 ಆಗಿರುವ ನಿಖಿಲ್ ನಾಯಕ್ (Nikhil nayak) ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಇದೇ ಜೂನ್ 25 ನೇ ತಾರೀಕು ವಕೀಲ ರಘುನಾಥ ರೆಡ್ಡಿ ಮೂಲಕ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು,ಸಿಆರ್ಪಿಸಿ ಸೆಕ್ಷನ್ 439 ಅಡಿಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅರೇಸ್ಟ್ ಆಗಿದ್ದ ನಿಖಿಲ್, ಬನ್ನೇರುಘಟ್ಟ ರಸ್ತೆ ಕೆಂಬತ್ತಹಳ್ಳಿ ನಿವಾಸಿಯಾದ ನಿಖಿಲ್ ನಾಯಕ್,ಈ ಕೃತ್ಯದಲ್ಲಿ ಸಾಕ್ಷಿ ನಾಶದ ಗಂಭೀರ ಆರೋಪ ಹೊತ್ತಿದ್ದಾನೆ ಮತ್ತು ರೇಣುಕಾಸ್ವಾಮಿ ಕೊಲೆ ಬಳಿಕ ಮೃತದೇಹ ಸಾಗಿಸಿದ್ದ ಆರೋಪ ಕೂಡ ಇದೆ.ಆತನಂತರ ಹಣದ ವ್ಯವಹಾರಕ್ಕೆ ಕೊಲೆ ಮಾಡಿದ್ದಾಗಿ ಸರಂಡರ್ ಆಗಿದ್ದ ಮೂವರ ಪೈಕಿ ಈತ ಕೂಡ ಒಬ್ಬ.