• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪುತ್ತೂರಿನ ಇತಿಹಾಸಕ್ಕಿದ್ದ ನಂಟು ಇನ್ನು ನೆನೆಪು ಮಾತ್ರ : ಶಿವರಾಮ ಕಾರಂತರು ರೂಪಿಸಿದ ಶಾಲೆ ನೆಲಸಮ

ಫಾತಿಮಾ by ಫಾತಿಮಾ
December 25, 2021
in ಕರ್ನಾಟಕ
0
ಪುತ್ತೂರಿನ ಇತಿಹಾಸಕ್ಕಿದ್ದ ನಂಟು ಇನ್ನು ನೆನೆಪು ಮಾತ್ರ : ಶಿವರಾಮ ಕಾರಂತರು ರೂಪಿಸಿದ ಶಾಲೆ ನೆಲಸಮ
Share on WhatsAppShare on FacebookShare on Telegram

ಶಿವರಾಮ ಕಾರಂತರೆಂದರೆ ನಡೆದಾಡುವ ವಿಶ್ವಕೋಶ. ಕನ್ನಡಕ್ಕೆ ಎರಡನೇ ಜ್ಞಾನಪೀಠ ತಂದುಕೊಟ್ಟವರು. ಶಿಶುಸಾಹಿತ್ಯದಿಂದ ಹಿಡಿದು ರಂಗಭೂಮಿಯವರೆಗೆ ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲವೆನ್ನಬಹುದು. ಅವರೊಬ್ಬ ಸಾಹಿತಿ, ಪರಿಸರ ತಜ್ಞ, ಕೃಷಿಕ, ರಾಜಕಾರಣಿ, ರಂಗ ಕರ್ಮಿ, ಯಕ್ಷಗಾನ ಕಲಾವಿದ ಎಲ್ಲವೂ ಹೌದು. ಇಂತಹ ಕಾರಂತರು ಕಲೆ ಮತ್ತು ಕಲಿಕೆಯ ಕೇಂದ್ರವನ್ನಾಗಿ ರೂಪಿಸಿದ ಪುತ್ತೂರಿನ ಶಾಲೆಯನ್ನು ಅದರ ಆಡಳಿತ ಮಂಡಳಿಯೇ ನೆಲಸಮ ಮಾಡಿದೆ, ಅದೂ ಸರ್ಕಾರದ ಅನುಮತಿಯಿಲ್ಲದೆ!

ADVERTISEMENT

ಕಳೆದ 10 ವರ್ಷಗಳಿಂದ ಈ ಶಾಲೆ ಮುಚ್ಚಿದ್ದರೂ ಊರಿನ ಜನರ ಹೃದಯಲ್ಲಿ ‘ನಮ್ಮ ಕಾರಂತರು’ ಮೆಟ್ಟಿದ ಶಾಲೆಯಿದು ಎನ್ನುವ ಮಾಂತ್ರಿಕ ಭಾವವೊಂದು ಆ ಶಾಲೆಯನ್ನು ನೋಡಿದಾಗೆಲ್ಲಾ ಹುಟ್ಟುತ್ತಿತ್ತು. ಈಗ ಆಡಳಿತ ಮಂಡಳಿ ಕೊಡಲಿಯೇಟು ಕೊಟ್ಟಿದ್ದೂ ಅದೇ ಭಾವಕ್ಕೆ. ಇಡೀ ಪುತ್ತೂರು ಪಟ್ಟಣಕ್ಕೆ ಇತಿಹಾಸದ ಕಿಟಕಿಯಂತಿದ್ದ ಶಾಲೆ ಈಗ ಧರಾಶಾಹಿಯಾಗಿದೆ.

ಪುತ್ತೂರಿನ ಶಾಸಕ ಸಂಜೀವ್ ಮಠಂದೂರು ಅವರ ಸೂಚನೆ ಮೇರೆಗೆ ಶಾಲಾ ಕಟ್ಟಡದ ಮೇಲ್ಛಾವಣಿಯ ಕೆಲವು ಹೆಂಚುಗಳನ್ನು ನಿರ್ವಹಣಾ ಕಾಮಗಾರಿಗಾಗಿ ತೆಗೆಯುತ್ತಿದ್ದಾಗ ಒಂದು ಹೆಂಚು ಬಿದ್ದು, ಕಟ್ಟಡದ ಮಣ್ಣಿನ ಗೋಡೆಯೊಂದು ಶಿಥಿಲಾವಸ್ಥೆಗೆ ತಲುಪಿರುವುದು ಗಮನಕ್ಕೆ ಬಂದಾಗ ಶಾಲೆಯನ್ನು ಕೆಡವುವ ನಿರ್ಧಾರಕ್ಕೆ ಬರಲಾಯಿತು ಎನ್ನುತ್ತಾರೆ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ಪಂಚಾಕ್ಷರಿ.

ಆದರೆ ಶಾಲೆಯನ್ನು ಪಾರಂಪರಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, 2020ರ ಡಿಸೆಂಬರ್ನಲ್ಲಿ ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಕಚೇರಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬರೆದ ಪತ್ರದಲ್ಲಿ ಕಟ್ಟಡ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಹೀಗಿದ್ದರೂ ಡಿಸೆಂಬರ್ 12ರ ಭಾನುವಾರದಂದು ಯಾವುದೇ ಸೂಚನೆ ನೀಡದೆ ಕಟ್ಟಡವನ್ನು ಕೆಡವಲಾಗಿದೆ.

ಮಾಜಿ ವಕೀಲರು ಮತ್ತು ಶಿವರಾಮ ಕಾರಂತರ ಸಹವರ್ತಿಯಾಗಿರುವ 81 ವರ್ಷದ ಪುರಂದರ ಭಟ್ ಅವರು ಶಿವರಾಮ ಕಾರಂತರು ಶಾಲೆಯ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ನಾಟಕಗಳನ್ನು ಬರೆದು ಅವರಿಗೆ ಅಭಿನಯ ತರಬೇತಿ ನೀಡುತ್ತಿದ್ದರು. 1934 ರಿಂದ 1944 ರ ನಡುವೆ ಪುತ್ತೂರು ದಸರಾ ಹಬ್ಬದ ಅಂಗವಾಗಿ ಶಾಲಾ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಗಳು ಸಹ ನಡೆಯುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. “ಬರೆಯಲು ಓದಲು ಬಾರದವರೂ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸಲು ಚಾಪೆಯನ್ನು ತರುತ್ತಿದ್ದರು” ಎಂದು ಅವರು ‘ದಿ ನ್ಯೂಸ್ ಮಿನಿಟ್’ ಜೊತೆ ಮಾತಾಡುತ್ತಾ ಹೇಳಿದ್ದಾರೆ.

ಪುತ್ತೂರಿನಲ್ಲೇ ಇರುವ ಶಿವರಾಮ ಕಾರಂತರ ಬಾಲವನವನ್ನು ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಮೂಲಕ ಕಾರಂತರು ಬಳಸಿದ ವಸ್ತುಗಳನ್ನು ಬಳಸಿ ಪುನಃಸ್ಥಾಪಿಸಲಾಗಿದೆ. ಇದು 40 ವರ್ಷಗಳಿಗೂ ಹೆಚ್ಚು ಕಾಲ ಅವರ ಮನೆಯಾಗಿತ್ತು. ಆದರೆ, ಈ ಶಾಲೆ ಪುತ್ತೂರಿನಲ್ಲಿ ಅವರ ಎರಡನೇ ಮನೆಯಾಗಿತ್ತು, ಅದನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪುತ್ತೂರಿನ ಹಿರಿಯರು ವಿಷಾದ ವ್ಯಕ್ತಪಡಿಸುತ್ತಾರೆ. ಈ ಬಗ್ಗೆಯೂ ಮಾತನಾಡಿರುವ ಪುರಂದರ ಅವರು “ಅವರು ಮನೆಯಲ್ಲಿ ಇಲ್ಲದಿದ್ದಾಗ ತಮ್ಮ ವಿದ್ಯಾರ್ಥಿಗಳೊಂದಿಗೆ ಶಾಲೆಯಲ್ಲಿರುತ್ತಿದ್ದರು” ಎಂದು ಹೇಳುತ್ತಾರೆ. ಶಿವರಾಮ ಕಾರಂತರ ಪ್ರಭಾವದಿಂದ ಕುವೆಂಪು ಅವರಂತಹ ಕನ್ನಡದ ದಿಗ್ಗಜರು ಶಾಲೆಯಲ್ಲಿ ಮಾತುಕತೆ ನಡೆಸಿದ್ದನ್ನೂ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ನಿಜಕ್ಕೂ ಬಾಲವನದಷ್ಟೇ ಆದ್ಯತೆಯನ್ನು ಈ ಶಾಲೆಗೆ ಕೊಡಬೇಕಾಗಿತ್ತು. ಆದರೆ ಶಾಲೆ ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ಕೆಲವು ವರ್ಷಗಳಿಂದಲೇ ಗೋಡೆಗಳ ಬಣ್ಣ ಎದ್ದು ಬರಲು ಪ್ರಾರಂಭಿಸಿತ್ತು ಮತ್ತು ಛಾವಣಿಯ ಮಾಡು ಬೀಳಲು ಪ್ರಾರಂಭಿಸಿದ್ದವು. ಮಣ್ಣಿನ ಗೋಡೆಗಳು ದುರ್ಬಲಗೊಂಡಿದ್ದವು. ಸ್ಥಳೀಯರ ತೀವ್ರ ಪ್ರಯತ್ನದ ಹೊರತಾಗಿಯೂ ಶಾಲೆಯನ್ನು ಸಂರಕ್ಷಿಸಲು ಯಾವುದೇ ಪುನಶ್ಚೇತನ ಕಾರ್ಯ ನಡೆಯಲಿಲ್ಲ, ಸ್ಥಳೀಯರ ಭಾವನೆಗಳಿಗೆ ಕಿಂಚಿತ್ತು ಬೆಲೆಯೂ ದೊರೆತಿಲ್ಲ. ಸ್ಥಳೀಯ ಶಿಕ್ಷಣ ಇಲಾಖೆ, ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರಿನಲ್ಲಿರುವ ರಾಜ್ಯ ಶಿಕ್ಷಣ ಇಲಾಖೆ ಹಾಗೂ ಪ್ರಧಾನಮಂತ್ರಿಗಳ ಕಚೇರಿಗೂ ಈ ಬಗ್ಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಸ್ಥಳೀಯರಾದ ಅಮೃತ್.

ಮುಂದುವರೆದು, “ಇದೊಂದು ಸಾಂಸ್ಕೃತಿಕ ನಿಧಿಯಾಗಿತ್ತು. ಅದನ್ನು ಸಾಧ್ಯವಾದಷ್ಟು ಮೂಲ ರಚನೆಗೆ ಹತ್ತಿರವಾಗಿ ಮರುನಿರ್ಮಾಣ ಮಾಡಬೇಕೆಂದು ನಾವು ಬಯಸುತ್ತೇವೆ. ಶಿವರಾಮ ಕಾರಂತರ ಗೌರವಾರ್ಥ ವಸ್ತುಸಂಗ್ರಹಾಲಯ ಅಥವಾ ಪರಂಪರೆಯ ಕೇಂದ್ರವಾಗಿ ಸಾರ್ವಜನಿಕ ಬಳಕೆಗೆ ಇದು ಅತ್ಯಗತ್ಯ ಎಂದು ನಾವು ನಂಬುತ್ತೇವೆ”’ ಎಂದು ವಿವರಿಸಿದ್ದಾರೆ.

ಶಾಲೆಯ ತರಗತಿ ಕೊಠಡಿಗಳನ್ನು ರೋಮ್ ಮತ್ತು ಲಂಡನ್ನಲ್ಲಿರುವಂತೆ ಒಳಾಂಗಣ ಆಂಫಿಥಿಯೇಟರ್ಗಳಂತೆ ವಿನ್ಯಾಸಗೊಳಿಸಲಾಗಿದ್ದ, 156 ವರ್ಷ ಹಳೆಯ, ಕಾರಂತರ ಅಭಿಲಾಷೆಯಂತೆ ಸುಂದರ ವಿನ್ಯಾಸ ಮತ್ತು ನಲಿಕೆಯೊಂದಿಗೆ ಕಲಿಯಬಹುದಾಗಿದ್ದಂತಹ ಪಾರಂಪರಿಕ ಕಟ್ಟಡವೊಂದನ್ನು ಸಂರಕ್ಷಿಸುವ ಎಲ್ಲಾ ಅವಕಾಶವಿದ್ದೂ ಅದನ್ನು ಪಾಳು ಬೀಳಲು ಬಿಟ್ಟು ನಿರ್ಲಕ್ಷಿಸಿದ್ದು ಸರ್ಕಾರದ ತಪ್ಪು. ಕೊನೆಪಕ್ಷ, ಕಾರಂತರ ಕೊಡುಗೆಗಳನ್ನು ಮುಂದಿನ ಪೀಳಿಗೆಯೂ ಅರಿಯಲು ಸಾಧ್ಯವಾಗುವಂತೆ ಅದನ್ನು ಪುನರ್ನಿರ್ಮಾಣ ಮಾಡುವ ಕನಿಷ್ಠ ಜವಾಬ್ದಾರಿಯನ್ನಾದರೂ ಸರ್ಕಾರ ಹೊತ್ತುಕೊಳ್ಳಬೇಕು. ಆ ಮೂಲಕ ಕಾರಂತರಂತಹ ಧೀಮಂತ ವ್ಯಕ್ತಿತ್ವಕ್ಕೆ ಸಲ್ಲಬೇಕಾದ ಗೌರವ, ಆದರಗಳು ಸಲ್ಲಲಿ.

Tags: ಪುತ್ತೂರಿನ ಇತಿಹಾಸಶಾಲೆ ನೆಲಸಮಶಿವರಾಮ ಕಾರಂತ
Previous Post

ಜನಾಂಗೀಯ ಹತ್ಯೆಗೆ ಕರೆಕೊಟ್ಟ ಧರ್ಮ ಸಂಸತ್ ಮತ್ತು ಬಿಜೆಪಿಯ ಪ್ರಜಾಪ್ರಭುತ್ವದ ಆದರ್ಶ!

Next Post

ಏಷ್ಯಾ ಕರೆನ್ಸಿಗಳ ಸಾಧನೆ ಮುಂದೆ ಮಕಾಡೆ ಮಲಗಿದ ಭಾರತೀಯ ರೂಪಾಯಿ!

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ಏಷ್ಯಾ ಕರೆನ್ಸಿಗಳ ಸಾಧನೆ ಮುಂದೆ ಮಕಾಡೆ ಮಲಗಿದ ಭಾರತೀಯ ರೂಪಾಯಿ!

ಏಷ್ಯಾ ಕರೆನ್ಸಿಗಳ ಸಾಧನೆ ಮುಂದೆ ಮಕಾಡೆ ಮಲಗಿದ ಭಾರತೀಯ ರೂಪಾಯಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada