ಚನ್ನಪಟ್ಟಣ ಉಪ ಚುನಾಚಣಾ ಕಣದಲ್ಲಿ (Channapattana bi election) ಕೊನೆ ಕ್ಷಣದವರೆಗೂ ಬಿಜೆಪಿ ಟಿಕೆಟ್ (Bjp ticket) ನಿರೀಕ್ಷೆಯಲ್ಲಿದ್ದ ಸಿಪಿ ಯೋಗೇಶ್ವರ್ಗೆ (Cp yogeshwar) ಅಂತಿಮವಾಗಿ ನಿರಾಸೆಯಾಗಿದೆ. ಹೀಗಾಗಿ ತಮ್ಮ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡೋದಕ್ಕೆ ಸಿ.ಪಿ ಯೋಗೇಶ್ವರ್ ಮುಂದಾಗಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ (Hubli) ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ (Basavaraj horatti)ಸಿ.ಪಿಯೋಗೇಶ್ವರ್ ತಮ್ಮ ರಾಜೀನಾಮೆ ಪತ್ರ ನೀಡಲಿದ್ದಾರೆ. ಈಗಾಗಲೇ ಕೆಂಪೇಗೌಡ ಏರ್ ಪೋರ್ಟ್ನಿಂದ ಸಿಪಿ ಯೋಗೇಶ್ವರ್ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಿಪಿ ಯೋಗೇಶ್ವರ್ ಬೇಕಿದ್ದರೆ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡಲಿ ಎಂದು ನಿನ್ನೆಯಷ್ಟೆ ಕುಮಾರಸ್ವಾಮಿ (HD kumaraswamy) ಓಪನ್ ಆಫರ್ ನೀಡಿದ್ದರು. ಆದ್ರೆ ಈ ಆಫರ್ನ್ನು ಯೋಗೇಶ್ವರ್ ತಳ್ಳಿ ಹಾಕಿದ್ದರು. ಇದೀಗ ಅವರು ತಮ್ಮ ಇದಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷದಿಂದ ಚುನಾಣೆಗೆ ನಿಲ್ಲಲಿದ್ದಾರೆ ಎಂಬ ಮಾಹಿತಿ ಲಭ್ಯಾಗಿದೆ.