• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೆಪ್ಟೆಂಬರ್‌ ಅಂತ್ಯದೊಳಗೆ ಮಕ್ಕಳಿಗೂ ಕರೋನಾ ಲಸಿಕೆ: ಭಾರತ್‌ ಬಯೋಟೆಕ್‌ ಭರವಸೆ !

ಪ್ರತಿಧ್ವನಿ by ಪ್ರತಿಧ್ವನಿ
August 20, 2021
in ದೇಶ
0
ಸೆಪ್ಟೆಂಬರ್‌ ಅಂತ್ಯದೊಳಗೆ ಮಕ್ಕಳಿಗೂ ಕರೋನಾ ಲಸಿಕೆ: ಭಾರತ್‌ ಬಯೋಟೆಕ್‌ ಭರವಸೆ !
Share on WhatsAppShare on FacebookShare on Telegram

ಕರೋನಾ ಮೂರನೇ ಅಲೆಗೂ ಮುಂಚಿತವಾಗಿಯೇ ದೇಶದಲ್ಲಿ ಮಕ್ಕಳಿಗೂ ಕರೋನಾ ಲಸಿಕೆ ಸಿಗುವ ಸಂಭವವಿದೆ. ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಂಚಿಕೆಯಾಗುತ್ತಿದ್ದು, ಮುಂದಿನ ಸೆಪ್ಟೆಂಬರ್‌ ಅಂತ್ಯದೊಳಗಡೆ  18 ವರ್ಷ ಕೆಳಗಿರುವ ಮಕ್ಕಳಿಗೂ ಕರೋನಾ ವ್ಯಾಕ್ಸಿನ್‌ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ್‌ ಬಯೋಟೆಕ್‌ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ರಾಷ್ಟ್ರೀಯ ಸುದ್ದಿ ಮಾಧ್ಯಮಕ್ಕೆ ಕೊಟ್ಟಿರುವ ಒಂದು ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ADVERTISEMENT

ʻʻಮಕ್ಕಳ ಲಸಿಕೆ ಮೇಲಿನ ನಮ್ಮ ವೈದ್ಯಕೀಯ ಪ್ರಯೋಗ ಮುಕ್ತಾಯಗೊಂಡಿದೆ. ಮುಂದಿನ ಸೆಪ್ಟೆಂಬರ್‌ ಆರಂಭ ಅಥವಾ ಕೊನೆಯ ವೇಳೆಗೆ ನಮ್ಮ ಪ್ರಯೋಗದ ವರದಿ ಸಿದ್ಧಗೊಳ್ಳಲಿದೆ. ಅದಾದ ಬಳಿಕ ಮಕ್ಕಳ ಲಸಿಕೆಗೆ ಪರವಾನಗೆ ಪಡೆದುಕೊಳ್ಳಬೇಕಿದೆ. ವಿಶೇಷ ಎಂದರೆ ಇಡೀ ಜಗತ್ತಿನಲ್ಲಿ 2-18 ವರ್ಷದೊಳಗಿನ ಮಕ್ಕಳಿಗೆ ಕೊಡಬಲ್ಲ ಏಕೈಕ ಲಸಿಕೆ ಇದಾಗಿರಲಿದೆʼʼ ಎಂದು ಭಾರತ್‌ ಬಯೋಟೆಕ್‌ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ಎರಡೂ ಡೋಸ್‌ ಲಸಿಕೆ ಪಡೆದುಕೊಂಡ ಮೇಲೂ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅಂಥವರಿಗಾಗಿ ಬೂಸ್ಟರ್‌ ಡೋಸ್‌ (Third Dose) ನೀಡುವ ಬಗ್ಗೆಯೂ ಚರ್ಚೆಗಳಾಗುತ್ತಿದೆ. ಸದ್ಯ ಕರೋನಾ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಲು ಸ್ವತಃ ಸರ್ಕಾರವೇ ನಿರ್ಧರಿಸಿದ್ದು, ಅಗತ್ಯವಿರುವ ಕಾರ್ಯಕರ್ತರು ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬಹುದಾಗಿದೆ. ಆದರೆ ಸಾರ್ವಜನಿಕರಿಗೆ ಬೂಸ್ಟರ್‌ ಡೋಸ್‌ ಪಡೆಯಲು ಸಾಧ್ಯವಿಲ್ಲ. 

ಈ ಬಗ್ಗೆಯೂ ಪ್ರತಿಕ್ರಯಿಸಿದ ಡಾ. ಕೃಷ್ಣ ಎಲ್ಲಾ, ಮೊದಲು ಎಲ್ಲರಿಗೂ ಎರಡು ಡೋಸ್‌ ಲಸಿಕೆ ಸಂಪೂರ್ಣವಾಗಿ ನೀಡಿಕೆಯಾಗ ಬೇಕಿದೆ. ಅದಾದ ಬಳಿಕ ಸಾರ್ವತ್ರಿಕ ಬೂಸ್ಟರ್‌ ಡೋಸ್‌ ಒಳಿತು. ಸದ್ಯಕ್ಕೆ ಭಾರತ್‌ ಬಯೋಟೆಕ್‌ ಮಕ್ಕಳ ಲಸಿಕೆ ಜೊತೆಯಲ್ಲೇ ಮೂಗಿನ ರಂಧ್ರದ ಮೂಲಕ ನೀಡಲಾಗುವ Nasal Vaccine ಅನ್ನೂ ಬಳಕೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಬಳಕೆಯಲ್ಲಿರುವ ಚುಚ್ಚು ಲಸಿಕೆ ಸೋಂಕಿನಿಂದಾಗುವ ತೀವ್ರತೆಯನ್ನು ಕಡಿಮೆ ಮಾಡಬಲ್ಲದೆ ಹೊರತು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವಿಕೆಗೆ ಕಡಿವಾಣ ಹಾಕಲಾರದು. ಆದರೆ ಈ ನಸಲ್‌ ವ್ಯಾಕ್ಸಿನ್‌, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಿಕೆಗೆ ತಡೆಗೋಡೆಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅಂದಹಾಗೆ, ಭಾರತ್‌ ಬಯೋಟೆಕ್‌ ಮಕ್ಕಳ ಲಸಿಕೆಯನ್ನು ವೈದ್ಯಕೀಯ ಪ್ರಯೋಗಕ್ಕೆ ಕಳೆದ ಜೂನ್‌ ತಿಂಗಳಿನಲ್ಲಿ ಒಳಪಡಿಸಿತ್ತು. ಸದ್ಯ ಪ್ರಯೋಗದ ವರದಿಗಾಗಿ ಭಾರತ್‌ ಬಯೋಟೆಕ್‌ ಕಾಯುತ್ತಿದೆ.

ಇನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (National Institute of Virology) ಕೂಡ ಮಕ್ಕಳ ಲಸಿಕೆ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಇದೂ ಕೂಡ ಮುಂದಿನ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಬಳಕೆಗೆ ಸಿಗುವ ಸಾಧ್ಯತೆ ಇದೆ. ರಾಷ್ಟ್ರೀಯ ವೈರಾಲಜಿ ಸಂಸ್ಥೆ ಪುಣೆ ವಿಭಾಗದ ನಿರ್ದೇಶಕಿ ಡಾ. ಪ್ರಿಯ ಅಬ್ರಹಾಂ ಈ ಬಗ್ಗೆ ಮಾತನಾಡಿ 2-18 ವರ್ಷದೊಳಗಿನ ಮಕ್ಕಳ ಲಸಿಕೆ ಎರಡು ಮತ್ತು ಮೂರನೇ ಹಂತದ ಪ್ರಯೋಗಗಳು ಚಾಲ್ತಿಯಲ್ಲಿದೆ. ಮುಂದಿನ ಸೆಪ್ಟೆಂಬರ್‌ ವೇಳೆಗೆ ಮಕ್ಕಳ ಲಸಿಕೆ ಬಳಕೆಗೆ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ. ಇದೇ ವೇಳೆ, ಝೈಡಸ್‌ ಕ್ಯಾಡಿಲ ಎಂಬ ಹೊಸ ಕಂಪೆನಿಯ ಲಸಿಕೆಯೂ ಮಾರ್ಕೆಟ್‌ಗೆ ಬರುವ ಸಂಭವವಿದೆ ಎಂದು ಹೇಳಿದ್ದಾರೆ.

ಕರೋನಾ ನಡುವೆ ಮತ್ತಷ್ಟು ಆತಂಕ ಹುಟ್ಟಿಸಿದ್ದು ಕರೋನಾ ರೂಪಾಂತರಗಳು. ಅದ್ರಲ್ಲೂ ಪ್ರಮುಖವಾದದ್ದು ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ರೂಪಾಂತರಿಗಳು. ಸದ್ಯಕ್ಕೆ ಜಗತ್ತಿನ 130 ದೇಶಗಳಲ್ಲಿ ಈ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರಿಗಳು ಪತ್ತೆಯಾಗಿವೆ. ಈ ತಳಿಗಳೂ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ತಾಕತ್ತು ಹೊಂದಿದೆ. ಈ ಬಗ್ಗೆ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಪುಣೆ ವಿಭಾಗ ನಡೆಸಿದ ಅಧ್ಯಯನದಲ್ಲಿ, ಸದ್ಯಕ್ಕೆ ಚಾಲ್ತಿಯಲ್ಲಿರುವ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ಸೇರಿದಂತೆ ಎಲ್ಲಾ ರೂಪಾಂತರಿ ವೈರಾಣುಗಳ ವಿರುದ್ಧ ಹೋರಾಟ ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಝೈಡಸ್‌ ಕ್ಯಾಡಿಲ ಲಸಿಕೆ ಕೂಡ ಇದೇ ರೀತಿಯಾದ ಕಿಮ್ಮತ್ತು ಹೊಂದಿರಲಿದೆ. ಈ ಲಸಿಕೆ ಸಂಪೂರ್ಣವಾಗಿ ಸೋಂಕು ತಡೆಯಲಿದೆ ಎನ್ನುವುದಕ್ಕಿಂತ ಸೋಂಕಿನ ತೀವ್ರತೆ ಕಡಿಮೆ ಮಾಡಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ. ಈ ಮೂಲಕ ಸಾವು ಅಥವಾ ಮಾರಣಾಂತಿಕ ಸಮಸ್ಯೆಗಳಿಂದ ಈ ಲಸಿಕೆ ಜನರನ್ನು ರಕ್ಷಿಸಲಿದೆ.

Tags: (Third Dose Nasal Vaccinebharat biotechCovid 19Covid vaccinesNational Institute of Virologyಕರೋನಾ ಮೂರನೇ ಅಲೆಕರೋನಾ ಲಸಿಕೆಕೋವಿಡ್-19ಬೂಸ್ಟರ್‌ ಡೋಸ್ಭಾರತ್‌ ಬಯೋಟೆಕ್‌ಮಕ್ಕಳ ಲಸಿಕೆರಾಷ್ಟ್ರೀಯ ವೈರಾಲಜಿ ಸಂಸ್ಥೆ
Previous Post

ಕಾಂಗ್ರೆಸ್ ಒಳಜಗಳ: ಸಿದ್ದರಾಮಯ್ಯ ಮತ್ತು ಎಚ್.ಸಿ ಮಹದೇವಪ್ಪ ನಡುವೆ ಮುಂದುವರಿದ ಮುಸುಕಿನ ಗುದ್ದಾಟ

Next Post

ಆನೆಗಳನ್ನು ಪೂಜೆ ಕಾರ್ಯಕ್ಕೆ ಬಳಸುವುದು ತಪ್ಪು; ಆನೆ ಕಾಡಿನಲ್ಲಿ ಇರಬೇಕು, ದೇವಸ್ಥಾನದಲ್ಲಿ ಅಲ್ಲ: ಕರ್ನಾಟಕ ಹೈಕೋರ್ಟ್

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
Next Post
ಬೋಧಕ, ಬೋಧಕೇತರರನ್ನು ಕರೋನಾ ಫ್ರಂಟ್ ಲೈನ್ ಕಾರ್ಯಕರ್ತರೆಂದು ಪರಿಗಣಿಸಿ: ಬೊಮ್ಮಾಯಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಆನೆಗಳನ್ನು ಪೂಜೆ ಕಾರ್ಯಕ್ಕೆ ಬಳಸುವುದು ತಪ್ಪು; ಆನೆ ಕಾಡಿನಲ್ಲಿ ಇರಬೇಕು, ದೇವಸ್ಥಾನದಲ್ಲಿ ಅಲ್ಲ: ಕರ್ನಾಟಕ ಹೈಕೋರ್ಟ್

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada