• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

Karnataka Lock-down: ಪೊಲೀಸರೇ ಲಾಠಿ ಸಂಭಾಷಣೆ ನಿಲ್ಲಿಸಿ, ನಿಯಮ ಮೀರಿದ್ರೆ ದಂಡ ವಿಧಿಸಿ -ರವಿ ಕೃಷ್ಣಾ ರೆಡ್ಡಿ

Any Mind by Any Mind
May 11, 2021
in ಕರ್ನಾಟಕ
0
Karnataka Lock-down: ಪೊಲೀಸರೇ ಲಾಠಿ ಸಂಭಾಷಣೆ  ನಿಲ್ಲಿಸಿ, ನಿಯಮ ಮೀರಿದ್ರೆ ದಂಡ ವಿಧಿಸಿ -ರವಿ ಕೃಷ್ಣಾ ರೆಡ್ಡಿ
Share on WhatsAppShare on FacebookShare on Telegram

ಲಾಕ್‌ಡೌನ್‌ ಸಮಯದಲ್ಲಿ ರಸ್ತೆಗಿಳಿದರೆ ಪೊಲೀಸರಿಂದ ಪೆಟ್ಟು ಗ್ಯಾರಂಟಿ ಅನ್ನೋದು ಜನಸಾಮಾನ್ಯರ ಮನಸಲಿ ಅಚ್ಚೂರಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಗೆ ಹಾಗು ರಾಜ್ಯದ ಜನತೆಗೆ ಕೆಆರ್‌ಎಸ್‌ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ಸಲಹೆ ಕೊಟ್ಟಿದ್ದಾರೆ.

ADVERTISEMENT

ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ. ಈ ಎರಡನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನಿಯಮ ಮೀರಿ ಹೊರಗೆ ಓಡಾಡುವ ಸಂದರ್ಭದಲ್ಲಿ ಕರ್ನಾಟಕದ ಪೊಲೀಸರು ಅವರನ್ನು ಸೌಜನ್ಯದಿಂದ ವಿಚಾರಿಸಬೇಕು ಅವರು ನಿಯಮ ಮೀರಿದ್ದ ಪಕ್ಷದಲ್ಲಿ ದಂಡ ವಿಧಿಸಬೇಕು ಅಥವ ಪ್ರಕರಣ ದಾಖಲಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೇ ಹೊರತು ಆರಂಭದಲ್ಲಿಯೇ ಪೊಲೀಸರ ಲಾಠಿ ಮಾತನಾಡಬಾರದು.

ಓಡಾಡುತ್ತಿರುವ ಜನರನ್ನು ಪ್ರಶ್ನಿಸಿದಾಗ ಅವರು ನೀಡುವ ಉತ್ತರವನ್ನು ಪರಿಶೀಲಿಸಿ ಪೊಲೀಸರು ತಮ್ಮ ವಿವೇಚನೆಯನ್ನು ಬಳಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಹೊರಗೆ ಬರುವ ಎಲ್ಲರೂ ಪುಂಡರು, ಪೋಕರಿಗಳು, ತರಲೆಗಳೇ ಆಗಿರುವುದಿಲ್ಲ. ಸಕಾರಣ ಇಲ್ಲದೆ ತಿರುಗಾಡುವ ಜನರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದು ಮಾತ್ರ ಸರಿಯಾದ ನಡೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದ್ದಾರೆ.

ಈ ಲಾಕ್‌ಡೌನ್ ಸಂದರ್ಭದಲ್ಲಿಯಾದರೂ ಮೊದಲ ಲಾಕ್‌ಡೌನ್ ಅವಧಿಯಲ್ಲಿ ಆದಂತೆ ಆಗದೆ, ಪೊಲೀಸರ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಪ್ರಿಯ ಪೊಲೀಸರೇ, ನಿಮ್ಮ ಲಾಠಿಗಳು ಜನರ ಬೆನ್ನಿನ ಜೊತೆಗೆ ಸಂಭಾಷಣೆ ಮಾಡುವುದನ್ನು ನಿಲ್ಲಿಸಿ. ದೊಂಬಿ ಅಥವ ಹಿಂಸಾಕೃತ್ಯಗಳ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಕಾರಣಕ್ಕಾಗಿ ಬಿಟ್ಟರೆ ಮಿಕ್ಕ ಸಂದರ್ಭದಲ್ಲಿ ಹೀಗೆ ನಡೆದುಕೊಳ್ಳಲು ನಿಮಗೆ ಯಾವ ಅಧಿಕಾರವೂ ಇಲ್ಲ ಎಂದು ಪೊಲೀಸ್‌ ಇಲಾಖೆಯನ್ನು ಎಚ್ಚರಿಸಿದ್ದಾರೆ.

ನಮ್ಮ ರಾಜ್ಯದಲ್ಲಿ “ಮಾನವ ಹಕ್ಕುಗಳ ಆಯೋಗ” ಬಹುತೇಕವಾಗಿ ಸತ್ತಿದೆ. ಅದರ ಕಾರ್ಯಕ್ಷಮತೆ ಮತ್ತು ಅದಕ್ಕೆ ಖರ್ಚು ಮಾಡುತ್ತಿರುವ ಜನರ ತೆರಿಗೆಯ ಹಣ ಎಷ್ಟು ಉಪಯೋಗ ಆಗುತ್ತಿದೆ ಎನ್ನುವ ಮಾಹಿತಿಯನ್ನು ಹೊರತೆಗೆದು, ಈ ಆಯೋಗದ ಮೌಲ್ಯಮಾಪನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ನಿವೃತ್ತ ಅಧಿಕಾರಿಗಳಿಗೆ ಮತ್ತು ನಿವೃತ್ತ ನ್ಯಾಯಮೂರ್ತಿಗಳಿಗೆ ಗೂಟದ ಕಾರಿನ ಸಮೇತ ಇತರೆ ಐಷಾರಾಮಿ ಸವಲತ್ತುಗಳನ್ನು ಒದಗಿಸುವ well paid ನಿವೃತ್ತಿ ಕೇಂದ್ರ ಆಗಿದೆ ಎಂದು ತೆಗಳಿದ್ದಾರೆ.

 ಅದು ಜನರ ಹಕ್ಕುಗಳನ್ನು ರಕ್ಷಿಸುತ್ತಿಲ್ಲ. ಇಲ್ಲವಾದಲ್ಲಿ ಪೊಲೀಸರ ಅತಿರೇಕದ ಕೃತ್ಯಗಳ ಬಗ್ಗೆ ಇಷ್ಟೊತ್ತಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕನಿಷ್ಠ ಎಚ್ಚರಿಕೆಯನ್ನಾದರೂ ನೀಡಿರುತ್ತಿತ್ತು ಎಂಬುವುದು ರವಿಕೃಷ್ಣ ರೆಡ್ಡಿ ಅವರ ಆರೋಪವಾಗಿದೆ.

ಜನರಲ್ಲಿಯೂ ನನ್ನ ವಿನಂತಿ. ಇದು ಮಹಾ ವಿಪತ್ತಿನ ಕಾಲ. Covid-19 ಸಾಂಕ್ರಾಮಿಕ ರೋಗವನ್ನು ರಾಜ್ಯದಲ್ಲಿ ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಲಾಕ್‌ಡೌನ್ ಹೇರಿದೆ. ನಾವೆಲ್ಲರೂ ಅದನ್ನು ಗೌರವಿಸೋಣ. ಜವಾಬ್ದಾರಿಯಿಂದ ನಡೆದುಕೊಳ್ಳೋಣ. ಸೋಂಕು ಇಂದು ರಾಜ್ಯದ ಲಕ್ಷಾಂತರ ಕುಟುಂಬಗಳನ್ನು ಹಿಂಡಿ ಹಿಪ್ಪೆ ಮಾಡಿದೆ, ಮಾಡುತ್ತಿದೆ. ಈ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡಿ ಪೊಲೀಸರ ಕೈಲಿ ಅವಾಚ್ಯ ಮಾತುಗಳಲ್ಲಿ ಬೈಸಿಕೊಂಡು ಬರುವುದು ಅಥವಾ ಲಾಠಿ ಏಟು ತಿಂದು ಬರುವುದು ತೀರಾ ಅವಮಾನಕಾರಿಯಾದುದು ಎಂದು ಜನತೆಯನ್ನೂ ಎಚ್ಚರಿಸಿದ್ದಾರೆ.

ನಿಜಕ್ಕೂ ನಿಮಗೆ ತುರ್ತುಪರಿಸ್ಥಿತಿ ಆಗಿದ್ದಲ್ಲಿ ಅಥವಾ ನಿಮ್ಮ ಓಡಾಟ ಸಕಾರಣವಾಗಿದ್ದು ಅನಿವಾರ್ಯವೂ ಆಗಿದ್ದಲ್ಲಿ, ನಿಮ್ಮನ್ನು ರಸ್ತೆಯಲ್ಲಿ ಪೊಲೀಸರು ತಡೆದಾಗ ಅವರಿಗೆ ಧೈರ್ಯವಾಗಿ ವಿಷಯ ಮನವರಿಕೆ ಮಾಡಿಕೊಡಿ. ಒಳ್ಳೆಯ ಪೊಲೀಸರೂ ಇದ್ದಾರೆ. ಆದರೆ ಪುಕ್ಕಲರ ತರಹ ವರ್ತಿಸುವ, ಕಳ್ಳರಂತೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುವ ಜನರನ್ನು ಕಂಡ ತಕ್ಷಣ ಪೊಲೀಸರು ಒಂದು ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ. ಹಾಗಾಗಿ ಪೊಲೀಸರು ನಿಲ್ಲಿಸಿದಾಗ ಧೈರ್ಯದಿಂದ ಮತ್ತು ಗೌರವದಿಂದ ಮಾತನಾಡಿ. ಪೊಲೀಸರೂ ನಮ್ಮವರೇ ಮತ್ತು ಅವರಿಗೂ ಇದು ಕಷ್ಟದ ಸಮಯ ಎನ್ನುವುದು ನಿಮಗೆ ತಿಳಿದಿರಲಿ ಎಂಬುವುದು ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಲಹೆ.

Previous Post

ಪ್ರತಿಯೊಬ್ಬ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡುವುದು ಸರ್ಕಾರದ ಜವಾಬ್ದಾರಿ: ಸೋನಿಯಾ ಗಾಂಧಿ

Next Post

ಜನರನ್ನು ಥಳಿಸುವ ಅಧಿಕಾರ ಪೊಲೀಸರಿಗಿಲ್ಲ, ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು: ಕರವೇ ಅದ್ಯಕ್ಷ ಟಿ.ಎ. ನಾರಾಯಣಗೌಡ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಜನರನ್ನು ಥಳಿಸುವ ಅಧಿಕಾರ ಪೊಲೀಸರಿಗಿಲ್ಲ, ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು: ಕರವೇ ಅದ್ಯಕ್ಷ ಟಿ.ಎ. ನಾರಾಯಣಗೌಡ

ಜನರನ್ನು ಥಳಿಸುವ ಅಧಿಕಾರ ಪೊಲೀಸರಿಗಿಲ್ಲ, ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು: ಕರವೇ ಅದ್ಯಕ್ಷ ಟಿ.ಎ. ನಾರಾಯಣಗೌಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada