ಕರೋನದಿಂದ ಮೃತಪಟ್ಟ ಕುಟುಂಬದಕ್ಕೆ ಪರಿಹಾರ ನೀಡುವುದಾಗಿ ಕಳೆದ ಜೂನ್ ತಿಂಗಳಲ್ಲಿ ಸಚಿವ ಡಾ ಸುಧಾಕರ್ ಹೇಳಿದ್ದರು. ಅಂದಿನಿಂದ ಇಲ್ಲಿಯವರೆ ಎಷ್ಟು ಮೃತ ಕುಟುಂಬಕ್ಕೆ ಪರಿಹಾರ ದೊರಕಿದೆ ಎಂಬುದು ಮಾಹಿತಿ ಇಲ್ಲ ಆದರೆ ಈಗ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವ ಆದೇಶದಲ್ಲಿ ರಾಜ್ಯ ಸರ್ಕಾರ ಮತ್ತೊಂದು ತಿದ್ದುಪಡಿ ಬಂದಿದೆ.
ಕಳೆದ ಬಾರಿ, ಕರೋನದಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನಿಗೆ ಒಂದು ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಹೇಳಿತ್ತು. ಅಂದರೆ ಪರಿಹಾರ ಹಣ ಪಡೆಯಬೇಕು ಎಂದರೆ ಮೃತ ವ್ಯಕ್ತಿಯು ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನಾಗಿರಬೇಕಿತ್ತು. ಆದರೆ ಇದಕ್ಕೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ, “ದುಡಿಯುವ ಸದಸ್ಯನಿಗೆ” ಪರಿಹಾರ ಒದಗಿಸುವ ಬದಲಾಗಿ ಯಾವುದೇ ಸದಸ್ಯರನಿಗೆ ಹಾಗೂ ಯಾವುದೇ ವಯಸ್ಸಿನ ನಿಬಂಧನೆ ಇಲ್ಲದೆ ಪರಿಹಾರ ಒದಗಿಸುವಂತೆ ಪರಿಷ್ಕೃತ ಆದೇಶ ಹೊರಡಿಸಿದೆ.
ಉಳಿದಂತೆ ದಿನಾಂಕ 28.09.2021 ರ ಆದೇಶ ಮಾರ್ಗಸೂಚಿಗಳು ಹಾಗೂ ದಿನಾಂಕ 01,10,2021 ತಿದ್ದುಪಡಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ.