ಜಾಸ್ತಿ ಕುಡಿದರೆ ಮೈಮೇಲೆ ಪರಿಜ್ಞಾನ ಕಳೆದುಕೊಳ್ಳುವಂತೆ ವರ್ತಿಸುವ ನಟ ದರ್ಶನ್ ಬಾಯಿಯಿಂದ ಮೀಡಿಯಾ ವಿರುದ್ಧ ಅವಾಚ್ಯ ಶಬ್ದಗಳು ಉದುರುತ್ತವೆ. ಎದುರಿಗಿದ್ದವರ ಮೇಲೆ ಹಲ್ಲೆಗೂ ಮುಂದಾಗುತ್ತಾರೆ.
ದರ್ಶನ್ ಡಿವೈಡರ್ಗೆ ಕಾರು ಗುದ್ದಿದ್ದನ್ನು, ಮೈಸೂರಿನಲ್ಲಿ ವೇಟರ್ಗೆ ಹೊಡೆದಿದ್ದನ್ನು ಮೀಡಿಯಾ ಪ್ರಶ್ನಿಸಿದರೆ ದರ್ಶನ್ ಕೆಂಡ ಮಂ ಡಲವಾಗಿ ಒದರಾಡುತ್ತಾರೆ. ಮೈಸೂರಿನಲ್ಲಿ ಸಂದೇಶ್ ಹೋಟೆಲ್ನಲ್ಲಿ ತಡರಾತ್ರಿ ವೇಟರ್ ಮೇಲೆ ತೀವ್ರ ಹಲ್ಲೆ ನಡೆಸಿ ವಿವಾದ ಸೃಷ್ಟಿಸಿಕೊಂಡಿದ್ರು. ಇದನ್ನು ಪ್ರಶ್ನಿಸಿದ ಮೀಡಿಯಾದವರಿಗೆ ನೀವ್ ಏನ್ ಸಾಚಾ ಎಂದು ಕಿಡಿ ಕಾರಿದ್ದರು. ಅದೇ ಹೊತ್ತಿಗೆ ದರ್ಶನ್ ಕುಡಿದಾಗ ತನ್ನ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತ ಮೀಡಿಯಾದವರಿಗೆ ಬೋ….ಮಕ್ಳು ಎಂದೆಲ್ಲ ಬೈದಿದ್ದ ಹಳೆಯ ಆಡಿಯೋ ಒಂದು ಮತ್ತೆ ಚಾಲ್ತಿಗೆ ಬಂದಿತು, ಈ ಕುರಿತು ಪ್ರೆಸ್ಮೀಟ್ ನಡೆಸಿದ ದರ್ಶನ್, ಅದು ತನ್ನ ಧ್ವನಿಯಲ್ಲ ಎಂದಿದ್ದರು.
ಈ ಕುರಿತಂತೆ ವಿವರ ಪಡೆಯಲು ಬೆಗಳೂರಿನ ಅವರ ಮನಗೆ ಹೋದ ಮೀಡಿಯಾದವರಿಗೆ, ನಾನು ಆಗಲೇ ವಿವರಣೆ ಕೊಟ್ಟಿದ್ದೇನೆ; ಎಂದರು. ದೊಡ್ಡ ಸ್ಟಾರ್ ನಟರಾಗಿ ಈ ರೀತಿ ವಿವಾದಗಳು ನಿಮಗೆಶೋಭೆ ತರುವುದಿಲ್ಲ ಎಂದು ಪತ್ರಕರ್ತರು ಹೇಳಿದಾಗಲೂ ರೇಗಿದ್ದರು. ಬೆಳಿಗ್ಗೆ ಮನೆ ಮುಂದೆ ಠಿಕಾಣಿ ಹಾಕಬೇಡಿ ಎಂದು ಉಡಾಫೆಯ ಮಾತನಾಡಿದ್ದರು. ಇನ್ನೊಂದು ಕಡೆ ರಾಬರ್ಟ್ ಸಿನಿಮಾದ ನಿರ್ಮಾಕ ಡಿ. ಉಮಾಪತಿ, ದರ್ಶನ್ ನಡುವೆ ಜಗಳವಾಗಿತ್ತು. ಯುವತಿಯೊಬ್ಬಳು ಇವರಿಬ್ಬರ ನಡುವೆ ತಂದು ಇಟ್ಟಿದ್ದಳು ಎನ್ನಲಾಗಿದೆ.
2019ರ ರ್ಯಾಷ್ ಡ್ರೈವಿಂಗ್
2019ರಲ್ಲಿ ವಿಪರೀತ ಕುಡಿದಿದ್ದ ದರ್ಶನ್, ಪ್ರಜ್ವಲ್ ಮುಂತಾದವರಿದ್ದ ಕಾರು ಬೆಂಗಳೂರಿನ ಅಶೋಕ್ ಪಿಲ್ಲರ್ ಬಳಿಯ ಡಿವೈಡರ್ಗೆ ಗುದ್ದಿತ್ತು. ಕಾರಿನಲ್ಲಿದ್ದವರು ಡ್ರಗ್ಸ್ ತಗೊಂಡಿಎಬಹುದು ಎಂಬ ಅನುಮಾನಗಳಳು ಎದ್ದಿದ್ದವು, ಮೈಸೂರಿನಲ್ಲೂ ಒಮ್ಮೆಹೀಗೆ ಗುದ್ದಿದ್ದರು.ಇತ್ತೀಚೆಗೆ ಜಗ್ಗೇಶ್ ದರ್ಶನ್ ಅಭಿಮಾನಿಗಳನ್ನು ಬೈದಿದ್ದರು ಎಂದು ಆರೋಪಿಸಿದ ದರ್ಶನ್ ಫ್ಯಾನ್ಸ್ ಶೂಟಿಂಗ್ ಸೆಟ್ಗೆ ನುಗ್ಗಿ ಜಗ್ಗೇಶ್ ಅವರನ್ನು ತಳ್ಳಾಡಿ ಒತ್ತಾಯದ ಕ್ಷಮೆ ಪಡೆದಿದ್ದರು.
![](https://pratidhvani.com/wp-content/uploads/2021/11/roberrt-darshan-1200-1024x569.jpg)
ಈ ಹಿಂದೆ ದರ್ಶನ್ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದಾಗ ಮೀಡಿಯಾಗಳು ದೊಡ್ಡ ಸುದ್ದಿ ಮಾಡಿದ್ದವು, ದರ್ಶನ್ ವಿಲನ್ ಸ್ಥಾನದಲ್ಲಿ ನಿಂತಿದ್ದರು, ಆಗಿಂದ ಅವರಿಗೆ ಮೀಡಿಯಾ ಕುರಿತು ಅಸಮಾಧಾನವಿದೆ. ನಂತರ ಸ್ವಲ್ಪ ಕಾಲ ವಿವಾದಗಳಿಂದ ದೂರವಿದ್ದ ಅವರು ಈಗ ಮತ್ತೆ ಹಳೆ ಜಾಡಿಗೆ ಮರಳಿದ್ದಾರೆ.
ಮೀಡಿಯಾಕ್ಕೆ ಬೈದ ಆಡಿಯೋ ಹೊರಬಂದ ನಂತರ ಟಿವಿ ಮೀಡಿಯಾದವರು ದರ್ಶನ್ ಮೂವಿ ಪ್ರಮೋಟ್ ಮಾಡಬಾರದು, ಕಮರ್ಷಿಯಲ್ ಜಾಹೀರಾತು ಪಡೆಯಕೂಡದು ಎಂದು ದರ್ಶನ್ ಅವರನ್ನು ಬ್ಯಾನ್ ಮಾಡಿವೆ.
ಕಳೆದ ವಾರ ದರ್ಶನ್ ಅಭಿನಯಿಸಲಿರುವ ʼಕ್ರಾಂತಿʼ ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಮೀಡಿಯಾಗಳು ಪ್ರಸಾರ ಮಾಡಲಿಲ್ಲ. ಬಿಟಿವಿ ಒಂದೇ ಪ್ರಸಾರ ಮಾಡಿತಾದರೂ, ನಂತರ ಅದೂ ನಿಲ್ಲಿಸಿತು.ದರ್ಶನ್ ಸಂಯಮ ಕಲಿಯಬೇಕಿದೆ. ಮೀಡಿಯಾದವರು ದರ್ಶನ್ ಸಿನಿಮಾಗಳನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದು ಕೂಡ ಆತುರದ ಕ್ರಮವೇ ಆಗಿದೆ.
ಎರಡೂ ಕಡೆಯವರು ಕೂತು ಮಾತನಾಡಿ ವಿವಾದವನ್ನು ಅಂತ್ಯಗೊಳಿಸುವುದು ಚತ್ರರಂಗ ಮತ್ತು ಮೀಡಿಯಾ ದೃಷ್ಟಿಯಿಂದ ಒಳ್ಳೆಯದು.
![](https://pratidhvani.com/wp-content/uploads/2021/10/pratidhvani_2021-04_29cee206-dc0f-4bab-800a-a1c9baf36790_Support_QR-300x300-1.jpg)