ರಾಮನಗರ :ಕಳೆದ 25 ವರ್ಷಗಳಿಂದ ಅಭಿವೃದ್ಧಿಯಾಗಿ ಹಾಗೆ ಉಳಿದಿರುವ ಕ್ಷೇತ್ರವನ್ನು ಮುಂದೇ ತರುವುದು ನನ್ನ ಗುರಿ ಅಂತಾ ರಾಮನಗರ ನೂತನ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ನಾನು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಕ್ಷೇತ್ರದಲ್ಲಿರುವ ಅನೇಕ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ.

ಕ್ಷೇತ್ರದ ಜನತೆಯ ಸೂರು, ನೀರಿನ ಸೌಕರ್ಯಗಳಿಗೆ ಆದ್ಯತೆ ಸೇರಿದಂತೆ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಯತ್ನಿಸುತ್ತೇನೆ . ನವ ರಾಮನಗರ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲಿ ಸಂಕಲ್ಪ ಮಾಡುತ್ತೇನೆ . ನಾನು ಎಂದಿಗೂ ಲಂಚ ತೆಗೆದುಕೊಳ್ಳುವುದಿಲ್ಲ. ಅಧಿಕಾರದ ದಾಹ ನನಗೆ ಇಲ್ಲ ಎಂದಿದ್ದಾರೆ.
ನಾನು ಕ್ಷೇತ್ರದ ಜನತೆಗೆ ಗಿಫ್ಟ್ ಕಾರ್ಡ್ ನೀಡಿದ್ದೇನೆ. ಅದನ್ನು ತಿಂಗಳ ಒಳಗಾಗಿ ಪೂರೈಕೆ ಮಾಡುತ್ತೇನೆ. ಕ್ಷೇತ್ರದ ಜನರಿಗೆ ಗಿಫ್ಟ್ ಕಾರ್ಡ್ನಲ್ಲಿರುವ ಎಲ್ಲಾ ಸೌಕರ್ಯಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.