ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ 55 ನೇ ದಿನವಾದ ಮಂಗಳವಾರ ಹೈದರಾಬಾದ್ಗೆ ಪ್ರವೇಶಿಸುತ್ತಿದ್ದಂತೆ, ಮೆರವಣಿಗೆಯಲ್ಲಿ, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಪಿಎಚ್ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿ ಹೆಜ್ಜೆ ಹಾಕಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ಹೈದರಾಬಾದ್ ಕ್ಯಾಂಪಸ್ಗೆ ಭೇಟಿ ನೀಡಿದ್ದ ರಾಹುಲ್, ಯಾತ್ರೆಯಲ್ಲಿ ವೇಮುಲಾ ತಾಯಿ ರಾಧಿಕಾ ವೇಮುಲಾರನ್ನು ಅಪ್ಪಿಕೊಳ್ಳುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಮತ್ತು ತನ್ನ ಗುರಿಯನ್ನು ಸಾಧಿಸಲು ಅವರಿಂದ “ಹೊಸ ಧೈರ್ಯ” ಸಿಕ್ಕಿದೆ ಎಂದು ಹೇಳಿದ್ದಾರೆ.
ವೇಮುಲಾ ಅವರ ತಾಯಿ ರಾಧಿಕಾ ಅವರೊಂದಿಗೆ ಸೇರಿಕೊಂಡ ನಂತರ, ರಾಹುಲ್ ಟ್ವೀಟ್ ಮಾಡಿದ್ದು, “ರೋಹಿತ್ ಅವರ ತಾಯಿಯನ್ನು ಭೇಟಿಯಾದ ನಂತರ, ಈ ಪ್ರಯಾಣದ ಗುರಿಯತ್ತ ಹೋಗಲು ನನಗೆ ಹೊಸ ಧೈರ್ಯ ಮತ್ತು ಹೊಸ ಮನಸ್ಸಿನ ಶಕ್ತಿ ಸಿಕ್ಕಿತು.” ಸಾಮಾಜಿಕ ತಾರತಮ್ಯ ಮತ್ತು ಅನ್ಯಾಯದ ವಿರುದ್ಧದ ಹೋರಾಟದ ಸಂಕೇತವಾಗಿ ವೇಮುಲ ಉಳಿಯುತ್ತಾರೆ” ಎಂದೂ ಹೇಳಿದ್ದಾರೆ.
26 ವರ್ಷದ ವೇಮುಲ ದಲಿತ ಎಂಬ ಕಾರಣಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಾರತಮ್ಯ ಮತ್ತು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದರು. ಎಬಿವಿಪಿ ಮುಖಂಡರೊಬ್ಬರ ದೂರಿನ ಮೇರೆಗೆ ವೇಮುಲಾ ಮತ್ತು ಇತರ ನಾಲ್ವರನ್ನು ಅಮಾನತುಗೊಳಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ, ರಾಧಿಕಾ ವೇಮುಲಾ ಅವರು ಕಾಂಗ್ರೆಸ್ನ ದೇಶವ್ಯಾಪಿ ಅಭಿಯಾನವು ತೆಲಂಗಾಣ ರಾಜಧಾನಿಯನ್ನು ಪ್ರವೇಶಿಸುತ್ತಿದ್ದಂತೆ ಗಾಂಧಿಯವರೊಂದಿಗೆ ನಡೆದರು.
ಟ್ವೀಟ್ನಲ್ಲಿ ಅವರು ಭಾರತ್ ಜೋಡೋ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಳಿಯಿಂದ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ಗೆ ಬೆಂಬಲಿಸಲು ಕರೆ ನೀಡಿದ್ದಾರೆ. ನ್ಯಾಯಾಂಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ದಲಿತರು ಮತ್ತು ಇತರ ತುಳಿತಕ್ಕೊಳಗಾದ ವರ್ಗಗಳ ಪ್ರಾತಿನಿಧ್ಯವನ್ನು ಹೆಚ್ಚಿಸಲು ಅವರು ತಮ್ಮ ಮಗನ ಹೆಸರಿನಲ್ಲಿ ಕಾನೂನು ರಚಿಸಲೂ ಅವರು ಒತ್ತಾಯಿಸಿದರು.






