ಚಲುವರಾಯಸ್ವಾಮಿ ಯಾರು ಮುಖ್ಯಮಂತ್ರಿ ಮಗನಾ? ಕುಮಾರಣ್ಣನ ಬಗ್ಗೆ ಮಾತನಾಡೋಕೆ ಕಾಂಗ್ರೆಸ್ ಶಾಸಕರಿಗೆ ಯೋಗ್ಯತೆ ಬೇಕು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ದ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ

ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಂಡ್ಯ ಜಿಲ್ಲೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ, ಒಂದು ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ, ಮಂಡ್ಯ ಜಿಲ್ಲೆಯಲ್ಲಿ ಈ ಬದಲಾವಣೆ ಅಚ್ಚರಿ ಮೂಡಿಸಿದೆ, ಜನರ ಆದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ, ಬಜೆಟ್ನಲ್ಲಿ ಮಂಡ್ಯಗೆ ಉತ್ತಮ ಕೊಡುಗೆ ಸಿಗುತ್ತೆ ಅಂದುಕೊಂಡಿದ್ದೆ, ಮೂಲೆಯಲ್ಲಿ ಕೂತ ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ನಾನು ಅಂತಾರೆ ಒಬ್ಬ ನಾಯಕ, ಮಂಡ್ಯಗೆ ಏನಾದ್ರು ಕೊಡುಗೆ ತರುತ್ತಾರೆ ಅಂದುಕೊಂಡಿದ್ದೋ, ನಿರಾಸದಾಯಕ ಬಜೆಟ್ ಕೊಟ್ಟು ಮಂಡ್ಯ ಜಿಲ್ಲೆ ಜನಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರವಿಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಮಂಡ್ಯ ಕಾಂಗ್ರೆಸ್ ಶಾಸಕರು ಕೈಗೊಂಬೆಯಾಗಿ ಕುಳ್ತಿದ್ದಾರೆ, ಇವರಿಗೆ ತಮ್ಮ ನಾಯಕರ ಹತ್ತಿರ ಮಾತಾಡೋ ತಾಕತ್ತು ಯೋಗ್ಯತೆ ಇಲ್ಲ, ಇಂಥವರು ಇನ್ನೊಬ್ಬರ ಬಗ್ಗೆ ಮಾತಾಡುತ್ತಾರೆ, ವಿಧಾನಸೌಧದಲ್ಲಿ ಇವರು ಡ್ರಾಮ ಮಾಡಿಕೊಂಡು ಬಂದಿದ್ದಾರೆ, ಕುಮಾರಣ್ಣನ ಕೊಟ್ಟ ಯೋಜನೆ ತಡೆದಿದ್ದಾರೆ, ಮುಖ್ಯಮಂತ್ರಿ ಮಾಡೋ ತಾಕತ್ತು ಇರೋರು ಮಂಡ್ಯದಲ್ಲಿ ಇದ್ದ ಟ್ರಾಮಾ ಸೆಂಟರ್ ಅನ್ನು ಮೈಸೂರಿಗೆ ಕೊಟ್ಟಿದ್ದಾರೆ, ಐದು ಜನ ಕಾಂಗ್ರೆಸ್ ಶಾಸಕರಿಗೆ ನಾಚಿಕೆಯಾಗಬೇಕು. ಎಂದು ಮಂಡ್ಯ ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ
ಇನ್ನು ಎನ್. ಚಲುವರಾಯಸ್ವಾಮಿ ವಿರುದ್ಧ ಕಿಡಿ ಕಾರಿರುವ ರವೀಂದ್ರ ಶ್ರೀಕಂಠಯ್ಯ, ಈ ಚಲುವರಾಯಸ್ವಾಮಿ ಯಾರು?, ಇತ ಏನು ಮುಖ್ಯಮಂತ್ರಿ ಮಗನಾ?, ಈತ ಏನು ರಾಜ್ಯದ ದೊಡ್ಡ ನಾಯಕನ.? ಕ್ಲಾಸ್ 3 ಕಂಟ್ರಾಕ್ಟರ್, ಈತನನ್ನು ಜಿಲ್ಲಾ ಪಂಚಾಯತ್ ಸದಸ್ಯ ಮಾಡಿದ್ದು ಜೆಡಿಎಸ್, ಎಂಎಲ್ಎ ಮಾಡಿದ್ದು ಜೆಡಿಎಸ್, ಮಂತ್ರಿ ಮಾಡಿದ್ದು ಜೆಡಿಎಸ್, ಇವರ ಪಕ್ಷದ ನಾಯಕನನ್ನು ಬೆಂಬಲಿಸ ಬೇಕಾಗಿದ್ದು ನಿಮ್ಮ ಕರ್ತವ್ಯ. ರಾಜ್ಯದಲ್ಲಿ ಎರಡನೇ ನಾಯಕ ಮಾಡಿದ್ದು ಕುಮಾರಸ್ವಾಮಿ, ದೇವೇಗೌಡರ ಕುಟುಂಬ ಇವರಿಗೆ ಎಲ್ಲವೂ ಕೊಟ್ಟಿದೆ, ಇಂತಹ ಕುಟುಂಬದ ಬಗ್ಗೆ ಮಾತಾಡುವುದು ತಪ್ಪು, ಗೆದ್ದಿದ್ದೇವೆ ಎಂದು ಇನ್ನೋಬ್ಬರ ಬಗ್ಗೆ ಮಾತಾಡುವುದು ಸರಿಯಲ್ಲ, ನಿಮ್ಮನ್ನ ಗೆಲ್ಲಿಸಿ ತಪ್ಪು ಮಾಡಿದೋ ಎಂದು ಮಂಡ್ಯ ಜಿಲ್ಲೆಯ ಪಶ್ಚಾತ್ತಾಪ ಪಡುತ್ತಿದ್ದಾರೆ. ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಎನ್.ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.