• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಗರಸಭೆ ಚುಕ್ಕಾಣಿಗೆ ಮಹಿಳಾ ಪ್ರತಿನಿಧಿಗಳ ನಡುವೆ ಪೈಪೋಟಿ

ಪ್ರತಿಧ್ವನಿ by ಪ್ರತಿಧ್ವನಿ
August 9, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಮಡಿಕೇರಿ: ಜಿಲ್ಲೆಯ ಏಕೈಕ ನಗರಸಭೆ ಇರುವ ಮಡಿಕೇರಿಯಲ್ಲಿ ಇದೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ೨ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರುಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆ ಕಸರತ್ತು ಮೆಲ್ಲನೆ ಆರಂಭಿಸಿದ್ದಾರೆ. ೨ನೇ ಅವಧಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಕಳೆದೆರಡು ದಿನಗಳ ಹಿಂದೆ ಘೋಷಣೆ ಆದ ಬೆನ್ನಲೇ ರಾಜಕೀಯ ಪೈಪೋಟಿಗಳು ಪ್ರಾರಂಭಗೊಂಡಿದ್ದು, ಮತ್ತೊಮ್ಮೆ ಮಹಿಳಾ ಅಧ್ಯಕ್ಷೆ ಮಡಿಕೇರಿಯ ಪ್ರಥಮ ಪ್ರಜೆಯಾಗಲಿದ್ದಾರೆ.

ADVERTISEMENT

ಈ ಮುನ್ನ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷ, ಸವಿತಾ ರಾಕೇಶ್ ಉಪಾಧ್ಯಕ್ಷರಾಗಿದ್ದರು. ೨೩ ಚುನಾಯಿತ ಸದಸ್ಯರ ಸಂಖ್ಯಾಬಲ ಹೊಂದಿರುವ ನಗರಸಭೆsಯಲ್ಲಿ ೧೬ ಬಿಜೆಪಿ, ೫ ಎಸ್‌ಡಿಪಿಐ, ೧ ಕಾಂಗ್ರೆಸ್ ಹಾಗೂ ೧ ಜೆಡಿಎಸ್ ಸದಸ್ಯರಿದ್ದಾರೆ. ಸಾಮಾನ್ಯ ಮಹಿಳಾ ಸದಸ್ಯರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಮೀಸಲಾಗಿರುವ ಕಾರಣ ಅಧಿಕಾರಕ್ಕಾಗಿ ಮಹಿಳೆಯರ ನಡುವೆ ಜಟಾಪಟಿ ಏರ್ಪಟ್ಟಿದೆ.

ಬಿಜೆಪಿ ಸ್ಪಷ್ಟಬಹುಮತ ಹೊಂದಿರುವ ಹಿನ್ನೆಲೆ ಬಿಜೆಪಿ ಮತ್ತೇ ಅಧಿಕಾರ ಮರುಸ್ಥಾಪಿಸುವುದು ನಿಶ್ಚಿತವಾಗಿದೆ. ೧೬ ಬಿಜೆಪಿ ಸದಸ್ಯರ ಪೈಕಿ ನೆರವಂಡ ಅನಿತಾ ಪೂವಯ್ಯ, ಸವಿತಾ ರಾಕೇಶ್, ಶ್ವೇತಾ ಪ್ರಶಾಂತ್, ಸಬಿತಾ, ಮಂಜುಳಾ ಮುರುಗಾ, ಉಷಾ ಕಾವೇರಪ್ಪ, ಕಲಾವತಿ, ಚಿತ್ರಾವತಿ, ಶಾರದಾ ನಾಗರಾಜ್ ಮಹಿಳಾ ಸದಸ್ಯರಿದ್ದು, ಇವರೆಲ್ಲಾರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಇವರಲ್ಲಿ ಅನಿತಾ ಪೂವಯ್ಯ ಕಳೆದ ಅವಧಿಯ ಅಧ್ಯಕ್ಷೆಯಾಗಿದ್ದ ಕಾರಣಕ್ಕಾಗಿ ಅವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಕಳೆದ ಅವಧಿಯ ಉಪಾಧ್ಯಕ್ಷರಾಗಿದ್ದ ಸವಿತಾ ರಾಕೇಶ್, ಶ್ವೇತಾ ಪ್ರಶಾಂತ್, ಸಬಿತಾ ಅಧ್ಯಕ್ಷ ಸ್ಥಾನದ ಮೇಲೆ ಹೆಚ್ಚಿನ ಆಕಾಂಕ್ಷೆ ಹೊತ್ತು ತಮ್ಮ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ.

ಇತರೆ ಸದಸ್ಯರು ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ವರಿಷ್ಠರ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ನಡೆಸುತ್ತಿದ್ದಾರೆ.ಕಳೆದ ಅವಧಿಯಲ್ಲಿ ಕೊಡವ ಸಮುದಾಯದ ಮಹಿಳೆಗೆ ಅವಕಾಶ ನೀಡಿರುವ ಕಾರಣ ಬೇರೆ ಸಮು ದಾಯಕ್ಕೆ ಅವಕಾಶ ನೀಡಬೇಕೆಂಬ ಕೂಗನ್ನು ಸದಸ್ಯರು ಎತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ನಡುವೆ ಸ್ಪರ್ಧೆ ಎದುರಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ೧೬ ಮಂದಿ ಅರ್ಹರಾಗಿರುವ ಹಿನ್ನೆಲೆ ಪುರುಷ ಸದಸ್ಯರೊಂದಿಗೆ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನ ಕೈತಪ್ಪಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆಯೊಡ್ಡುವ ಸಾಧ್ಯತೆ ದಟ್ಟವಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ನಗರಸಭಾ ಹಿರಿಯ ಸದಸ್ಯ ಕೆ.ಎಸ್. ರಮೇಶ್ ಹಾಗೂ ಅರುಣ್ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದು, ಇವರೊಂದಿಗೆ ಮಹೇಶ್ ಜೈನಿ, ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ಉಮೇಶ್ ಸುಬ್ರಮಣಿ ಅವರುಗಳು ಸ್ಪರ್ಧಾ ಕಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಕೊನೆಘಳಿಗೆಯಲ್ಲಿ ಚಂದ್ರಶೇಖರ್ ಕೂಡ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಬಹುದು ಎನ್ನಲಾಗಿದೆ.ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ‘ಬಹಿರಂಗ ರಹಸ್ಯ’ ಎಂಬ ಸ್ಥಿತಿ ಇದೆ. ಇದರ ಲಾಭ ಪಡೆದು ವಿಪಕ್ಷಗಳು ಒಗ್ಗೂಡಿ ಕಾರ್ಯತಂತ್ರ ರೂಪಿಸು ವುದನ್ನು ಅಲ್ಲಗೆಳೆಯುವಂತಿಲ್ಲ.೫ ಎಸ್.ಡಿ.ಪಿ.ಐ. ಸದಸ್ಯರಿದ್ದು, ತಲಾ ಒಂದೊಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರಿದ್ದಾರೆ. ಕಾಂಗ್ರೆಸ್ ಶಾಸಕರ ಮತವೂ ಗಣನೆಗೆ ಬರುವುದರಿಂದ ಅವಕಾಶ ವಂಚಿತ ೪-೫ ಸದಸ್ಯರನ್ನು ‘ಮನವೊಲಿಸಿ’ ರಾಜಕೀಯ ಲೆಕ್ಕಾಚಾರ ‘ಉಲ್ಟಾಪಲ್ಟ’ ಮಾಡಬಹುದಾದ ಸಾಧ್ಯತೆಯೂ ಇದ್ದು, ಇದರಿಂದ ಬಿಜೆಪಿ ಎಚ್ಚರಿಕೆಯ ನಡೆ ಅನುಸರಿಸುವುದು ಸಹಜವಾಗಿದೆ.

ಅಧಿಕಾರ ಯಾರಿಗೆ ನೀಡಬೇಕು ಎಂಬ ನಿರ್ಧಾರ ಬಿಜೆಪಿ ವರಿಷ್ಠರು ತೆಗೆದುಕೊಳ್ಳುವ ಹಿನ್ನೆಲೆ ಇದೀಗ ಚೆಂಡು ಅವರ ಅಂಗಳದಲ್ಲಿದೆ. ಮಾಜಿ ಶಾಸಕರು, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಆಕಾಂಕ್ಷಿಗಳನ್ನು ಅಳೆದು ತೂಗಿ ಅಂತಿಮಗೊಳಿಸುವ ಹಿನ್ನೆಲೆ ಆಕಾಂಕ್ಷಿಗಳು ವರಿಷ್ಠರ ಗಮನ ಸೆಳೆಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಮಾಜಿ ಶಾಸಕರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಸದಸ್ಯರುಗಳು ಮಾಜಿ ಶಾಸಕರ ಮೂಲಕ ಒತ್ತಡ ಹಾಕುವ ಕೆಲಸವೂ ಮುಂದಿನ ದಿನಗಳಲ್ಲಿ ಮಾಡಬಹುದು. ಈ ಕುರಿತು ಕೆಲ ಆಕಾಂಕ್ಷಿಗಳನ್ನು ಸಂಪರ್ಕಿಸಿದಾಗ ‘ಸ್ಥಾನ ನೀಡಲು ಮನವಿ ಮಾಡುತ್ತೇವೆ. ಮುಂದೆ ನಾಯಕರ ನಿರ್ಧಾರ’ ಎಂದು ಹೇಳಿಕೊಂಡಿದ್ದಾರೆ.

Tags: BJPCongress PartyElectionJDSPanchayat Raj Act
Previous Post

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಂದ ಲಪಾಟಾ ಲೇಡೀಸ್‌ ಚಿತ್ರ ವೀಕ್ಷಣೆ

Next Post

ಗರ್ಲ್‌ ಫ್ರೆಂಡ್‌ ಗೆ ಐ ಫೋನ್‌ ಕೊಡಿಸಲು ತಾಯಿಯ ಆಭರಣ ಕದ್ದ ಅಪ್ರಾಪ್ತ ಬಾಲಕ

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
Next Post

ಗರ್ಲ್‌ ಫ್ರೆಂಡ್‌ ಗೆ ಐ ಫೋನ್‌ ಕೊಡಿಸಲು ತಾಯಿಯ ಆಭರಣ ಕದ್ದ ಅಪ್ರಾಪ್ತ ಬಾಲಕ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada