• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ : – ಭಾಗ – 2

ನಾ ದಿವಾಕರ by ನಾ ದಿವಾಕರ
December 30, 2021
in ಅಭಿಮತ
0
ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ :  – ಭಾಗ – 2
Share on WhatsAppShare on FacebookShare on Telegram

ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ನಾಯಕರು ಮತ್ತು ಪತ್ರಿಕಾ ವರದಿಗಾರರು ಅನೇಕ ರೀತಿಯ ತ್ಯಾಗ ಮಾಡುವ ಮೂಲಕ ಚಳುವಳಿಗೆ ಜೀವ ತುಂಬಿದ್ದರು. ಈ ತ್ಯಾಗ ಬಲಿದಾನಗಳ ಫಲವೇ ಅವರ ಆರ್ಥಿಕ ಸ್ಥಿತಿಗತಿಯೂ ಸಾಕಷ್ಟು ಶಿಥಿಲವಾಯಿತು. ಅಸಹಕಾರ ಚಳುವಳಿ ತನ್ನ ಕಾವು ಕಳೆದುಕೊಂಡ ನಂತರ ಜನರು ತಮ್ಮ ನಾಯಕರ ಮೇಲೆ ವಿಶ್ವಾಸ ಕಳೆದುಕೊಂಡರು. ಏಕೆಂದರೆ ಇಂದು ಕಾಣುತ್ತಿರುವ ಅನೇಕ ಕೋಮುವಾದಿ ನಾಯಕರು ಅರ್ಥಿಕವಾಗಿ ದೀವಾಳಿಯಾಗಿದ್ದರು. ಜಗತ್ತಿನಲ್ಲಿ ಏನೇ ಸಂಭವಿಸಿದರೂ, ಅದರ ಹಿಂದೆ ಹಣವೇ ಪ್ರಧಾನ ಕಾರಣ ಎನ್ನುವುದನ್ನು ಸುಲಭವಾಗಿ ಗುರುತಿಸಬಹುದು. ಇದು ಮಾಕ್ರ್ಸ್ವಾದಿ ತತ್ವಗಳ ಮೂರು ಪ್ರಮುಖ ಅಂಶಗಳಲ್ಲೊಂದು. ತಬ್ಲೀಗಿ ಮತ್ತು ಶುದ್ಧಿ ಸಂಘಟನೆಗಳ ಉಗಮಿಸಿದ್ದನ್ನು ಮಾಕ್ರ್ಸ್ನ ಈ ತತ್ವದ ನೆಲೆಯಲ್ಲಿ ನೋಡಬಹುದು. ಈ ಅಂಶವೇ ನಮ್ಮನ್ನು ಇಂತಹ ದುಸ್ಥಿತಿಗೆ ನೂಕಿದೆ.

ADVERTISEMENT

ಆದ್ದರಿಂದ, ಕೋಮು ದಂಗೆಗಳಿಗೆ ಯಾವುದಾದರೂ ಪರಿಹಾರ ಮಾರ್ಗಗಳು ಇದ್ದಲ್ಲಿ, ಅದು ಭಾರತದಲ್ಲಿ ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದೇ ಆಗಿದೆ. ವಾಸ್ತವವಾಗಿ, ಭಾರತದ ಸಾಮಾನ್ಯ ಪ್ರಜೆಯ ಆರ್ಥಿಕ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ , ಯಾವುದೇ ವ್ಯಕ್ತಿ ಮತ್ತೊಬ್ಬರಿಗೆ ನಾಲ್ಕಾಣೆ ಕಾಸು ನೀಡುವ ಮೂಲಕ ಮತ್ತೊಬ್ಬನ ಮೇಲೆ ಹಲ್ಲೆ ನಡೆಸಲು ಪ್ರಚೋದಿಸಬಹುದು. ಹಸಿವು ಮತ್ತು ಸಂಕಷ್ಟಗಳೊಡನೆ ಸಂಘರ್ಷ ನಡೆಸುತ್ತಿರುವ ಜನಗಳಿಗೆ, ಮಾಡು ಇಲ್ಲವೇ ಮಡಿ ಆಯ್ಕೆಯನ್ನು ಮುಂದಿಟ್ಟಾಗ, ಸಹಜವಾಗಿಯೇ ಜನರು ತಮ್ಮ ತತ್ವಾದರ್ಶಗಳನ್ನು ಬದಿಗಿಡುತ್ತಾರೆ ಅಲ್ಲವೇ ? ಇಂದಿನ ಪರಿಸ್ಥಿತಿಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು ಅಸಾಧ್ಯದ ಮಾತು. ಏಕೆಂದರೆ ನಮ್ಮಲ್ಲಿ ವಿದೇಶದ ಸರ್ಕಾರವಿದೆ. ಈ ಸರ್ಕಾರಕ್ಕೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದರಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಜನರು ವಿದೇಶಿ ಸರ್ಕಾರದ ವಿರುದ್ಧ, ಆ ಸರ್ಕಾರ ತೊಲಗುವವರೆಗೂ ಹೋರಾಡಲು ಸಜ್ಜಾಗಬೇಕಿದೆ.

ಜನರು ಪರಸ್ಪರ ಕಚ್ಚಾಡುವುದನ್ನು ತಪ್ಪಿಸಲು, ಇಂದು ವರ್ಗ ಪ್ರಜ್ಞೆ ಬೆಳೆಸುವುದು ಅತ್ಯವಶ್ಯವಾಗಿದೆ. ಬಡ ಕಾರ್ಮಿಕರು ಮತ್ತು ರೈತರಿಗೆ ಅವರ ನಿಜವಾದ ಶತ್ರುಗಳು ಬಂಡವಾಳಶಾಹಿಗಳೇ ಎಂದು ಮನವರಿಕೆ ಮಾಡಬೇಕಿದೆ. ಅವರ ತಂತ್ರಗಾರಿಕೆಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಅಂಧರಂತೆ ಅವರನ್ನು ಹಿಂಬಾಲಿಸದಂತೆ ಜಾಗೃತಿ ಮೂಡಿಸಬೇಕಿದೆ. ಜನಾಂಗ, ವರ್ಣ, ಮತ, ಧರ್ಮ ಮತ್ತು ದೇಶ ಯಾವುದೇ ಇರಲಿ ಜಗತ್ತಿನ ಬಡಜನತೆಯ ಹಕ್ಕುಗಳು ಒಂದೇ ಆಗಿರುತ್ತವೆ. ಹಾಗಾಗಿ ವರ್ಣ, ಕುಲ, ಜನಾಂಗ, ಮತ, ಧರ್ಮ, ಪ್ರಾಂತೀಯತೆಗಳನ್ನಾಧರಿಸಿದ ಎಲ್ಲ ರೀತಿಯ ತಾರತಮ್ಯಗಳನ್ನೂ ಹೋಗಲಾಡಿಸಬೇಕಿದೆ. ತನ್ಮೂಲಕ ಐಕ್ಯತೆಯನ್ನು ಸಾಧಿಸಿ ಬಡ ಜನರು ಸರ್ಕಾರದ ಅಧಿಕಾರವನ್ನು ತಾವೇ ವಹಿಸಿಕೊಳ್ಳಬೇಕಿದೆ. ಈ ಪ್ರಯತ್ನ ಮಾಡುವ ಮೂಲಕ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಮುಂದೊಂದು ದಿನ ಸಂಕೋಲೆಗಳಿಂದ ಮುಕ್ತರಾಗಿ ಆರ್ಥಿಕ ದಬ್ಬಾಳಿಕೆಯಿಂದ ವಿಮೋಚನೆ ಪಡೆಯುತ್ತೀರಿ.

Also Read : ಕೋಮು ದಂಗೆಗಳು ಮತ್ತು ಪರಿಹಾರ ಮಾರ್ಗಗಳು : ಭಗತ್ ಸಿಂಗ್ – ಭಾಗ – ೧

ರಷ್ಯಾದ ಚರಿತ್ರೆಯನ್ನು ಬಲ್ಲವರು ನಿಮಗೆ ಇದನ್ನು ಹೇಳಿರಬಹುದು. ತ್ಸಾರ್ ದೊರೆಯ ಅಧಿಕಾರಾವಧಿಯಲ್ಲಿಯೂ ಸಹ ಜನಸಮುದಾಯಗಳು ಪರಸ್ಪರ ಸುಳ್ಳುಗಳನ್ನು ಹರಡುತ್ತಾ ದ್ವೇಷ ಸಾಧಿಸುತ್ತಿದ್ದವು. ರಷ್ಯಾದಲ್ಲಿ ಬೋಲ್ಷೆವಿಕರು ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಆಗಿನಿಂದಲೂ ರಷ್ಯಾದಲ್ಲಿ ಯಾವುದೇ ದಂಗೆಗಳ ಸುದ್ದಿ ಕೇಳಿಬರುತ್ತಿಲ್ಲ. ರಷ್ಯಾದಲ್ಲಿ ಈಗ ಪ್ರತಿಯೊಬ್ಬರನ್ನೂ ಮನುಷ್ಯನನ್ನಾಗಿ ಕಾಣಲಾಗುತ್ತದೆ. ಯಾವುದೇ ಧಾರ್ಮಿಕ ಅಸ್ಮಿತೆಗಳನ್ನು ಹೊಂದಿರುವುದಿಲ್ಲ. ತ್ಸಾರ್ ದೊರೆಯ ಅಧಿಕಾರಾವಧಿಯಲ್ಲಿ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿತ್ತು. ಈ ಕಾರಣದಿಂದಲೇ ಅನೇಕ ದಂಗೆಗಳು ನಡೆಯುತ್ತಿದ್ದವು. ಕೋಮು ಗಲಭೆಗಳು ನಡೆಯುತ್ತಿದ್ದವು. ಆದರೆ ಇಂದು ರಷ್ಯನ್ನರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಆರ್ಥಿಕ ವರ್ಗಗಳ ಬಗ್ಗೆ ಜನರಲ್ಲಿ ಜಾಗೃತಿಯೂ ಮೂಡಿದೆ. ಈ ಬದಲಾವಣೆ ಆದ ದಿನದಿಂದ ರಷ್ಯಾದಲ್ಲಿ ಕೋಮು ಗಲಭೆಯಾಗಲೀ, ದಂಗೆಗಳಾಗಲೀ ಸಂಭವಿಸಿದ ವರದಿಯಾಗಿಲ್ಲ.

ಸಾಮಾನ್ಯವಾಗಿ, ದಂಗೆಗಳು ತೀವ್ರವಾದ ಶೋಚನೀಯ ಸುದ್ದಿಗಳನ್ನು ಉಂಟುಮಾಡುತ್ತವೆ. ಆದರೆ ಕಲ್ಕತ್ತಾದಲ್ಲಿ ನಡೆದ ಒಂದು ಗಲಭೆಯ ಸಂದರ್ಭದಲ್ಲಿ ಮನಸಿಗೆ ಮುದ ನಿಡುವಂತಹ ವರದಿಯೊಂದಿತ್ತು. ಈ ಗಲಭೆಗಳಲ್ಲಿ ಒಂದು ಕಾರ್ಮಿಕ ಸಂಘಟನೆಗೆ ಸೇರಿದ ಕಾರ್ಮಿಕರು ಪಾಲ್ಗೊಳ್ಳಲಿಲ್ಲ. ಕೋಮು ಸಂಘರ್ಷದಲ್ಲೂ ಈ ಕಾರ್ಮಿಕರು ಪಾಲ್ಗೊಳ್ಳಲಿಲ್ಲ ಬದಲಾಗಿ ಹಿಂದೂಗಳು ಮತ್ತು ಮುಸ್ಲಿಮರು ಕಾರ್ಖಾನೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಅಸಾಧಾರಣ ಸೋದರತ್ವ, ಸಮನ್ವಯ ತೋರಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸುವುದರಲ್ಲೂ ಸಕ್ರಿಯವಾಗಿ ತೊಡಗಿದ್ದರು. ಇದು ಸಾಧ್ಯವಾಗಿದ್ದು ಏಕೆಂದರೆ ಈ ಕಾರ್ಮಿಕರಲ್ಲಿ ವರ್ಗ ಪ್ರಜ್ಞೆ ಜಾಗೃತವಾಗಿತ್ತು ಮತ್ತು ಒಂದು ಸಮೂಹವಾಗಿ ತಮ್ಮ ಹಿತಾಸಕ್ತಿಯನ್ನು ಇವರು ಅರಿತವರಾಗಿದ್ದರು. ವರ್ಗ ಪ್ರಜ್ಞೆಯ ಈ ಸುಂದರ ನಿದರ್ಶನವನ್ನೇ ಅನುಸರಿಸುವುದಾದರೆ ಕೋಮು ಹಿಂಸೆಯನ್ನು ನಾವು ತಡೆಗಟ್ಟಬಹುದು.

ಇಂದು ಭಾರತದ ಅಸಂಖ್ಯಾತ ಯುವ ಜನತೆ ಕೋಮು ಹಿಂಸೆ ಮತ್ತು ದ್ವೇಷವನ್ನು ಬೋಧಿಸುವಂತಹ ಮತಗಳಿಂದ ದೂರ ಸರಿಯುತ್ತಿದ್ದಾರೆ ಎಂಬ ಸಂತೋಷದಾಯಕ ವಿಚಾರ ಕೇಳಿಬರುತ್ತಿದೆ. ಅವರ ದೃಷ್ಟಿಕೋನಗಳು ಎಷ್ಟು ವಿಶಾಲವಾಗಿದೆ ಎಂದರೆ ಅವರು ಜನರನ್ನು ಹಿಂದೂ, ಮುಸ್ಲಿಂ ಅಥವಾ ಸಿಖ್ ಎಂದು ಗುರುತಿಸುವುದಿಲ್ಲ. ಮನುಷ್ಯರಾಗಿ ಕಾಣುತ್ತಾರೆ, ಭಾರತೀಯರನ್ನಾಗಿ ಕಾಣುತ್ತಾರೆ. ಭಾರತದ ಯುವ ಜನತೆಯಲ್ಲಿ ಈ ಆಲೋಚನೆಗಳು, ಚಿಂತನೆಗಳು ಜಾಗೃತವಾಗುತ್ತಿರುವುದರಿಂದ, ನನಗೆ ಭಾರತದ ಭವಿಷ್ಯ ಉಜ್ವಲವಾಗಿ ಕಾಣುತ್ತಿದೆ. ಈ ಕೋಮು ಗಲಭೆಗಳ ಸುದ್ದಿಗಳಿಂದ ಭಾರತೀಯರು ವಿಚಲಿತರಾಗಬಾರದು ಆದರೆ ಯಾವುದೇ ಸಂದರ್ಭದಲ್ಲಾದರೂ ಇಂತಹ ದಂಗೆಗಳಿಗೆ ಅವಕಾಶ ಉಂಟುಮಾಡುವಂತಹ ಕೋಮುವಾದಿ ವಾತಾವರಣವನ್ನು ಸೃಷ್ಟಿಸಲು ಇವರು ನೆರವಾಗಕೂಡದು.

1914-15ರ ಸಂದರ್ಭದ ಹುತಾತ್ಮರು ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿಯೇ ಕಂಡಿದ್ದರು. ಮತ ಅಥವಾ ಧರ್ಮ ಎನ್ನುವುದು ವ್ಯಕ್ತಿಯ ಖಾಸಗಿ ವಿಚಾರ ಎನ್ನುವುದನ್ನು ಅರಿತಿದ್ದ ಅವರು ಮತ್ತೊಬ್ಬರ ವ್ಯವಹಾರದಲ್ಲಿ ಇದು ಹಸ್ತಕ್ಷೇಪ ಮಾಡಕೂಡದು ಎಂಬುದನ್ನು ಅರಿತಿದ್ದರು. ಅವರೆಲ್ಲರೂ ಸಹ ಮತ ಅಥವಾ ಧರ್ಮ ರಾಜಕೀಯವನ್ನು ಪ್ರವೇಶಿಸಕೂಡದು ಎಂದು ನಂಬಿದವರಾಗಿದ್ದರು. ಏಕೆಂದರೆ ಇದರಿಂದ ಜನರು ಸಮಾನ ಧ್ಯೇಯಕ್ಕಾಗಿ ಹೋರಾಡಲು ತೊಡಕುಂಟಾಗುತ್ತದೆ. ಈ ಕಾರಣಕ್ಕಾಗಿಯೇ ಗದರ್ ಪಕ್ಷ ಕ್ರಾಂತಿಯ ಕರೆ ನೀಡಿದ ಸಂದರ್ಭದಲ್ಲಿ ಜನರು ಐಕ್ಯತೆಯೊಂದಿಗಿದ್ದರು. ಇಲ್ಲಿ ಸಿಖ್ಖರು, ಹಿಂದೂಗಳು ಮತ್ತು ಮುಸ್ಲಿಮರು ಕ್ರಾಂತಿಯ ಹರಿಕಾರರಾಗಿ ನೇಣುಗಂಬ ಏರಿದ್ದರು.

ಇಂದು ಸ್ವಾತಂತ್ರ್ಯ ಸಂಗ್ರಾಮವನ್ನು ಹೊಸದಾಗಿ ಪ್ರವೇಶಿಸಿರುವ ರಾಜಕೀಯ ನಾಯಕರೂ ಸಹ ರಾಜಕೀಯವನ್ನು ಮತ ಮತ್ತು ಧರ್ಮದಿಂದ ಪ್ರತ್ಯೇಕವಾಗಿರಿಸಲು ಯೋಚಿಸುತ್ತಿದ್ದಾರೆ.. ಇದು ಕೋಮು ಹಿಂಸೆ ಎಂಬ ವ್ಯಾಧಿಗೆ ಒಂದು ಪರಿಣಾಮಕಾರಿ ಮದ್ದು. ನಮ್ಮಲ್ಲಿ ವಿಭಿನ್ನವಾದ ಧಾರ್ಮಿಕ ನಂಬಿಕೆಗಳು ಇದ್ದರೂ, ನಾವು ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಿದರೆ, ರಾಜಕಾರಣ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಡಲು ಸಾಧ್ಯ.

ಭಾರತದ ಬಗ್ಗೆ ನೈಜ ಅನುಕಂಪ ಇರುವ ಎಲ್ಲರೂ ಸಹ ನಾವು ಸೂಚಿಸಿರುವ ಪರಿಹಾರ ಮಾರ್ಗಗಳ ಬಗ್ಗೆ ಆಲೋಚನೆ ಮಾಡಿ, ಭಾರತ ತನ್ನಿಂದ ತಾನೇ ಧ್ವಂಸವಾಗುವುದರಿಂದ ತಪ್ಪಿಸಲು ನೆರವಾಗುತ್ತಾರೆ ಎಂದು ಆಶಿಸೋಣ.

Tags: BJPCongress PartyCovid 19ಕೋಮು ಹಿಂಸೆಕೋವಿಡ್-19ದಂಗೆಗಳಿಗೆ ಆರ್ಥಿಕ ಕಾರಣನರೇಂದ್ರ ಮೋದಿಬಿಜೆಪಿ
Previous Post

ಮುಂದಕ್ಕೆ ಹೋಗಲ್ಲ ರಾಜಮೌಳಿಯ ಸಿನಿಮಾ : RRR ರಿಲೀಸ್ ಡೇಟ್ ಪಕ್ಕಾ

Next Post

ಜಾತಿ-ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! : ಭಾಗ – ೧

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಜಾತಿ-ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! : ಭಾಗ – ೧

ಜಾತಿ-ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! : ಭಾಗ - ೧

Please login to join discussion

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada