• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ಮೈಸೂರು ನಗರಪಾಲಿಕೆ ಜವಾಬ್ದಾರಿ ಮತ್ತು ಆದ್ಯತೆಗಳು – ಭಾಗ 2

ನಾ ದಿವಾಕರ by ನಾ ದಿವಾಕರ
August 25, 2023
in ಅಂಕಣ, ಅಭಿಮತ
0
ಅಂಕಣ | ಮೈಸೂರು ನಗರಪಾಲಿಕೆ ಜವಾಬ್ದಾರಿ ಮತ್ತು ಆದ್ಯತೆಗಳು- ಭಾಗ 1
Share on WhatsAppShare on FacebookShare on Telegram

ಸ್ಥಳೀಯ ಆಡಳಿತ ತನ್ನ ನೈತಿಕ ಹೊಣೆಗಾರಿಕೆಯನ್ನರಿತು ಕಾರ್ಯನಿರ್ವಹಿಸುವುದು ಅತ್ಯವಶ್ಯ

ADVERTISEMENT

ನಾ ದಿವಾಕರ

ವಿವೇಕರಹಿತ ಆಗ್ರಹ-ಆದ್ಯತೆಗಳು

ಈ ದುರ್ಭಾಗ್ಯ ಘಟನೆಗಳ ಬಗ್ಗೆ ಚರ್ಚೆ ನಡೆಸಬೇಕಾದ ಪಾಲಿಕೆ ಕೌನ್ಸಿಲ್‌ ಉದಯರವಿ ರಸ್ತೆಯ ಮರುನಾಮಕರಣದ ಸುತ್ತ ಚರ್ಚಿಸಿರುವುದು ಅಕ್ಷಮ್ಯ. ರಸ್ತೆ, ವೃತ್ತ, ಸೇತುವೆ, ಕಟ್ಟಡ ಇನ್ನಿತರ ಯಾವುದೇ ಸ್ಥಾವರಗಳಿಗೆ ನಾಮಕರಣ ಮಾಡುವುದು ಆಯಾ ಚಾರಿತ್ರಿಕ ಸಂದರ್ಭಲ್ಲಿ ನೆನೆಯಬಹುದಾದ ಮಹನೀಯರ ಸ್ಮರಣೆಯಲ್ಲಿ. ನಮ್ಮನ್ನು ಅಗಲಿ ಹೋಗಿರುವ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ನೇತಾರರು ಇತಿಹಾಸದ ವಿಸ್ಮೃತಿಗೆ ಜಾರದೆ ಚಿರಸ್ಥಾಯಿಯಾಗಿ ಭವಿಷ್ಯದ ಪೀಳಿಗೆಯ ನಡುವೆಯೂ ಸಾಂಕೇತಿಕವಾಗಿ ಆದರೂ ಉಳಿದಿರಲಿ ಎನ್ನುವ ಉದ್ದೇಶದ ಹೊರತು ಈ ನಾಮಕರಣಗಳಲ್ಲಿ ಮತ್ತಾವ ಪುರುಷಾರ್ಥವನ್ನೂ ಕಾಣಲಾಗುವುದಿಲ್ಲ.

ಕುವೆಂಪು ನಗರದ ಎಲ್ಲ ರಸ್ತೆಗಳನ್ನೂ ರಾಷ್ಟ್ರಕವಿಯ ಕಾವ್ಯಾತ್ಮಕ ಅಭಿವ್ಯಕ್ತಿಯ ನೆನಹುಗಳ ರೂಪದಲ್ಲಿ ಹೆಸರಿಸಲಾಗಿರುವುದು ಆಕರ್ಷಕವಷ್ಟೇ ಅಲ್ಲ, ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ ಮೈಸೂರು-ಕುಕ್ಕರಹಳ್ಳಿ-ಮಾನಸಗಂಗೋತ್ರಿಯನ್ನು ತಮ್ಮ ಬೌದ್ಧಿಕ ತವರು ಎಂದೇ ಭಾವಿಸಿದ್ದ ಕುವೆಂಪು ಅವರ ಶಾಶ್ವತ ನೆನಪಿನ ಸಂಕೇತಗಳಾಗಿ ಕಾಣಲಾಗುತ್ತಿದೆ. ಇಂತಹ ಒಂದು ರಸ್ತೆಯ ಹೆಸರು “ ಉದಯರವಿ ”.

ಈಗ ಉದಯರವಿ ಹೆಸರಿನ ಔಚಿತ್ಯವನ್ನೋ, ಅಧಿಕೃತತೆಯನ್ನೋ ಪ್ರಶ್ನಿಸುವುದು ಬಾಲಿಶ ಎನಿಸುವುದಿಲ್ಲವೇ ? ʼಉದಯರವಿʼ ಯನ್ನು ಅಳಿಸಿಹಾಕಿ ಸಂವಿಧಾನ ಕರ್ತೃ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ತಂದೆ ರಾಮ್‌ಜಿ ಸಕ್ಪಾಲ್‌ ಅವರ ಹೆಸರಿಡುವ ಆಗ್ರಹಕ್ಕೆ ಯಾವ ತಾತ್ವಿಕ ಸಮರ್ಥನೆ ನೀಡಲು ಸಾಧ್ಯ ? ಈ ಆಗ್ರಹದ ಮೂಲ ಯಾವುದೇ ಇರಲಿ,  ಡಾ. ಬಿ.ಆರ್‌ ಅಂಬೇಡ್ಕರ್‌ ಕಂಡ ಸಮನ್ವಯ ಭಾರತದ ಕನಸನ್ನು ಸಾಕಾರಗೊಳಿಸುವ ಸಾಹಿತ್ಯಕ ಸಂದೇಶವನ್ನು ನೀಡಿದ ಹಾಗೂ ಕರ್ನಾಟಕದ ಸಮನ್ವಯ-ಸೌಹಾರ್ದ ಸಂಸ್ಕೃತಿಗೆ ಅಡಿಪಾಯ ಹಾಕಿದ, ರಾಷ್ಟ್ರಕವಿ ಕುವೆಂಪು ಅವರ ನೆನಪನ್ನು ಅಳಿಸಿಹಾಕಿ, ಅಂಬೇಡ್ಕರ್‌ ಅವರ ತಂದೆಯ ಹೆಸರಿಡುವುದು ಇಬ್ಬರೂ ಮಹನೀಯರಿಗೆ ಮಾಡುವ ಅಪಚಾರ ಎನಿಸುವುದಿಲ್ಲವೇ ? ಬಹುಮುಖ್ಯವಾಗಿ ಸ್ವತಃ ಕುವೆಂಪು ಅವರಷ್ಟೇ ಅಂಬೇಡ್ಕರರೂ ಸಹ ಸ್ಥಾವರ ವಿರೋಧಿಯಾಗಿದ್ದವರು. ಆದರೆ ಭವಿಷ್ಯದ ತಲೆಮಾರಿಗೆ ಈ ಮಹನೀಯರನ್ನು ದಾಟಿಸಲು ಸ್ಥಾವರಗಳ ನಾಮಕರಣಗಳು ಸಂಕೇತಿಕವಾಗಿ ನೆರವಾಗುತ್ತವೆ. ಅಂಬೇಡ್ಕರ್‌ ಅವರ ತಂದೆಯ ಹೆಸರಿಡಲು ಅನ್ಯ ರಸ್ತೆಗಳೂ ಇವೆ ಅಲ್ಲವೇ ? ಆದರೆ ಅಲ್ಲಿ ಮತ್ತೊಂದು ಅಸ್ಮಿತೆಯ ಸ್ಥಾವರ ಸ್ಥಾಪಿತವಾಗಿಬಿಟ್ಟಿರುತ್ತದೆ. ಅದನ್ನು ಪಲ್ಲಟಗೊಳಿಸುವುದು ಅಸಾಧ್ಯವೂ ಆಗಿರುತ್ತದೆ. ಹಾಗಾಗಿ ಅಸ್ಮಿತೆಯ ರಾಜಕಾರಣದಲ್ಲಿ ಕುವೆಂಪು ಅವರಂತಹ ಧೀಮಂತ ವ್ಯಕ್ತಿತ್ವಗಳೂ ಸಾಫ್ಟ್‌ ಟಾರ್ಗೆಟ್‌ ಆಗಿಬಿಡುತ್ತಾರೆ. ʼ ಉದಯರವಿ ʼ ಅಳಿಸಿಹಾಕಬಹುದಾದ ಹೆಸರಾಗಿಬಿಡುತ್ತದೆ. ಪಾಲಿಕೆಯ ಸದಸ್ಯರಲ್ಲಿ ಈ ಸೂಕ್ಷ್ಮ ಪ್ರಜ್ಞೆ ಇರಬೇಕಲ್ಲವೇ ?

ರಸ್ತೆ-ವೃತ್ತ-ಸೇತುವೆಗಳ ಮರುನಾಮಕರಣದ ಭರಾಟೆಯಲ್ಲಿ ಚರಿತ್ರೆಯ ನೆನಹುಗಳನ್ನು ಅಳಿಸಿಹಾಕುವ ಕ್ಷುದ್ರ ರಾಜಕಾರಣವನ್ನು ಬಿಟ್ಟು ನಗರಪಾಲಿಕೆಯ ಸದಸ್ಯರು, ಮೈಸೂರು ನಗರ ಎದುರಿಸುತ್ತಿರುವ ಸಾಮಾಜಿಕ ಕ್ಷೋಭೆಯತ್ತ ಗಮನಹರಿಸಬೇಕಿದೆ. ಟಿ ನರಸೀಪುರದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆಯ ಕಾವು ತಣ್ಣಗಾಗುವ ಮುನ್ನವೇ ನಗರದಲ್ಲಿ ಎರಡು ಪ್ರಕರಣಗಳು ಸಂಭವಿಸಿವೆ. ಈ  ಹತ್ಯೆಗಳಲ್ಲಿ ಆರೋಪಿಗಳೆಲ್ಲರೂ 20-30 ವಯೋಮಾನದ ಯುವಕರೇ ಆಗಿದ್ದಾರೆ. ಸಾಂಸ್ಕೃತಿಕ ನಗರಿ ಎಂದು ಬೆನ್ನು ತಟ್ಟಿಕೊಳ್ಳುವ ಮೈಸೂರು ಈ ಪ್ರಕರಣಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಸುಮ್ಮನಿರಲಾಗುವುದೇ ? ಯುವ ಸಮೂಹ ತನ್ನ ಜವಾಬ್ದಾರಿಗಳನ್ನು ಮರೆತು ಹಿಂಸಾತ್ಮಕ ಧೋರಣೆಯನ್ನು ಪ್ರಚೋದಿಸುವಂತಹ ವಿಚಾರಧಾರೆಗಳಿಗೆ ಬಲಿಯಾಗುತ್ತಿರುವುದು ಸಮಾಜದ ಅಂತಃಪ್ರಜ್ಞೆಯನ್ನು ಕಲಕಬೇಕಲ್ಲವೇ ? ಮೈಸೂರು ನಗರದ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಶಾಸಕ-ಸಂಸದರಿಗೆ ಈ ಪ್ರಕರಣಗಳಲ್ಲಿ ಸಾಮಾಜಿಕ ಕ್ಷೋಭೆ ಮತ್ತು ಅಸ್ವಸ್ಥತೆ ಕಾಣಲೇಬೇಕಲ್ಲವೇ ?

ಬಹುಶಃ ನಮ್ಮ “ ಜನಪ್ರತಿನಿಧಿಗಳಲ್ಲಿ” ಅಂತಹ ಆಡಳಿತ ಸೂಕ್ಷ್ಮತೆ ನಶಿಸಿಹೋಗಿದೆ ಅಥವಾ ಶಿಥಿಲವಾಗುತ್ತಿದೆ ಎನಿಸುತ್ತದೆ. ನಿತ್ಯ ಜನಸಾಮಾನ್ಯರೊಡನೆ ಬೆರೆಯುತ್ತಾ ಸಮಾಜದ ಒಂದು ಭಾಗವಾಗಿರುವ ಸ್ಥಳೀಯ ಆಡಳಿತದಲ್ಲಾದರೂ ಕೊಂಚ ವಿವೇಕ-ವಿವೇಚನೆಯನ್ನು ಅಪೇಕ್ಷಿಸುವ ಹಕ್ಕು ನಾಗರಿಕರದ್ದಾಗಿರುತ್ತದೆ. ಮೇಲೆ ಉಲ್ಲೇಖಿಸಿದ ಎರಡು ಘಟನೆಗಳು ಅದನ್ನೇ ನೆನಪಿಸುತ್ತವೆ ಅಲ್ಲವೇ ?

ಜನಪ್ರತಿನಿಧಿಗಳು ಕಣ್ತೆರೆದು ನೋಡಿ ಪ್ಲೀಸ್.-೦-೦-೦-೦-

Tags: kuvempuMUDAMysoremysore mahanagara palikeMysore urban development authorityudayaravi
Previous Post

ವರಮಹಾಲಕ್ಷ್ಮಿಗೆ ʼಜೇಮ್ಸ್ʼ ಡೈರೆಕ್ಟರ್ ಹೊಸ ಸಿನಿಮಾ ʼಬರ್ಮʼ ಅನೌನ್ಸ್ | ಗಟ್ಟಿಮೇಳ ಖ್ಯಾತಿಯ ರಕ್ಷ್ ನಾಯಕ

Next Post

ಚಂದ್ರಯಾನ 3 | ಲ್ಯಾಂಡರ್‌ನಿಂದ ರೋವರ್‌ ಇಳಿಯುವ ಮೊದಲ ದೃಶ್ಯ ಹಂಚಿಕೊಂಡ ಇಸ್ರೊ

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

June 26, 2025
Next Post
ಪ್ರಗ್ಯಾನ್‌ ರೋವರ್‌

ಚಂದ್ರಯಾನ 3 | ಲ್ಯಾಂಡರ್‌ನಿಂದ ರೋವರ್‌ ಇಳಿಯುವ ಮೊದಲ ದೃಶ್ಯ ಹಂಚಿಕೊಂಡ ಇಸ್ರೊ

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada