ಲೋಕಸಭೆ ಚುನಾವಣೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಜ್ಜಾಗುತ್ತಿರುವ ಕಾಂಗ್ರೆಸ್ನಲ್ಲಿ ಟಿಕೆಟ್ ಹಾಗೂ ಅಭ್ಯರ್ಥಿ ಆಯ್ಕೆ ಗೊಂದಲ ಮಾತ್ರ ಮುಗಿದಿಲ್ಲ, ತಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ಗೆಲ್ತಿವಿ ಅಂತಿದ್ದ ಕಾಂಗ್ರೆಸ್ (Congress) ಈಗ ಹಿಂದೇಟು ಹಾಕೋಕೆ ಶುರುಮಾಡಿದೆ, ಇದಕ್ಕೆ ಕಾರಣ ಹಿಂದಿನ ಆ ಘಟನೆ.
2019ರ ಲೋಕಸಭಾ ಚುನಾವಣೆಯ ಆ ಒಂದು ಫಲಿತಾಂಶ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಕಾಡುತ್ತಿದೆ. ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಲೋಕಸಭೆ ಚುನಾವಣೆಗೆ ದಾರಿ ಮಾಡಿಕೊಡಲು ಪ್ರಯತ್ನಸಿಸುತ್ತಿರುವ ಸಿದ್ದರಾಮಯ್ಯ ಆ ಫಲಿತಾಂಶ ನೆನಪಿಸಿಕೊಂಡು ಭಾರೀ ತಲೆಕಡೆಸಿಕೊಂಡಂತಿದೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಪುತ್ರ ನಿಖಿಲ್ ಕುಮಾರಸ್ವಾಮಿಗೆ (Nikil Kumaraswamy) ಆದ ಪರಿಸ್ಥಿತಿ ಎಲ್ಲಿ ತಮ್ಮ ಪುತ್ರ ಯತೀಂದ್ರಗೂ ಆಗುತ್ತೆ ಅನ್ನೋ ಆತಂಕ ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾದಂತಿದೆ. ಈ ವಿಷಯದ ಬಗ್ಗೆ ತಮ್ಮ ಆಪ್ತರ ಬಳಿ ಪ್ರಸ್ತಾಪಿಸಿರುವ ಸಿಎಂ, ಪುತ್ರ ಯತೀಂದ್ರಗೆ ಸೂಕ್ಷ್ಮ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. “ಈಗ ಸಮಯ ಅಷ್ಟು ಸರಿ ಇಲ್ಲ, ಲೋಕಸಭೆ ಚುನಾವಣೆಗೆ ಮುಂದಾಗೋದು ಬೇಡ” ಅನ್ನೋ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಭಾರೀ ಬಹುಮತ ಪಡೆದ ಸಿದ್ದು ಪಡೆ ಈಗ ಲೋಕಸಭಾ ಚುನಾವಣೆಗೆ ತಲೆಕೆಡಿಸಕೊಳ್ಳಲು ಕಾರಣ ಆಗಿರೋದು ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ. ಎದುರಾಳಿಗಳ ನಡುವಿನ ಈ ಮೈತ್ರಿ ಬಗ್ಗೆ ಗಂಭೀರವಾಗಿರುವ ಸಿಎಂ ಸಿದ್ದರಾಮಯ್ಯ ಮಗನಿಗೆ ಕಾಲದ ಸಂದೇಶ ನೀಡಿರೋದು ಕುತೂಹಲ ಮೂಡಿಸಿದೆ.
#Loksaba #Election #Politics #Congress #Mysuru-Kodagu #Siddaramaiah #HDKumaraswamy #NikilKumarswamy #Mandya #BJP-JDS #