• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ಸ್ಥಾನ ಅಸಮರ್ಥ ನಾಯಕ ಬೊಮ್ಮಾಯಿಗೆ ; ಕರ್ನಾಟಕದ ಮಾನ ಹರಾಜಿಗೆ!

Shivakumar A by Shivakumar A
April 10, 2022
in ಕರ್ನಾಟಕ
0
ಸಿಎಂ ಸ್ಥಾನ ಅಸಮರ್ಥ ನಾಯಕ ಬೊಮ್ಮಾಯಿಗೆ ; ಕರ್ನಾಟಕದ ಮಾನ ಹರಾಜಿಗೆ!
Share on WhatsAppShare on FacebookShare on Telegram

ಬಿ ಎಸ್‌ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪದವಿ ಹುದ್ದೆಗೆ ಏರಿದಾಗಿನಿಂದ ರಾಜ್ಯದಲ್ಲಿ ಕೋಮು ಧ್ರುವೀಕರಣ ವಿಪರೀತವಾಗುತ್ತಿದೆ. ಹಿಂದೂ ಸಂಘಟನೆಗಳು ದಿನಕ್ಕೊಂದು ಮುಸ್ಲಿಂ k ವಿಷಯಗಳನ್ನು ವಿವಾದವನ್ನಾಗಿ ಮಾಡಿ ಮತೀಯ ಆತಂಕ ಸೃಷ್ಟಿಸುತ್ತಿದೆ. ಆ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಅಭದ್ರತೆಯಲ್ಲಿಟ್ಟು ಹಿಂದೂ ಮತಗಳ ಕ್ರೋಢೀಕರಣ ಮಾಡಲು ಹೊಂಚು ಹಾಕಿದೆ.

ADVERTISEMENT

ಉತ್ತರ ಭಾರತದಲ್ಲಿ ʼಹಿಂದೂ ಮಹಾ ಪಂಚಾಯತ್‌ʼ , ಧರ್ಮ ಸಂಸದ್‌ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಮುಸ್ಲಿಂ ಜನಾಂಗೀಯ ನಿರ್ಮೂಲನೆಗೆ, ಮುಸ್ಲಿಂ ಮಹಿಳೆಯರ ಬಲಾತ್ಕಾರಕ್ಕೆ ಕಾವಿಧಾರಿಗಳು ಬಹಿರಂಗವಾಗಿ ಕರೆ ನೀಡುತ್ತಾ ಮುಸ್ಲಿಂ ಹತ್ಯಾಕಾಂಡಕ್ಕೆ ಪ್ರಚೋದಿಸುತ್ತಿದ್ದಾರೆ. ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳದೆ ಇರುವುದರ ಹಿಂದೆ ಅಲ್ಲಿನ ಸರ್ಕಾರಗಳ ಹಿತಾಸಕ್ತಿ ಇದೆ ಎನ್ನುವುದರಲ್ಲಿ ಸಂಶಯವೇನಿಲ್ಲ. ಅದೇ ವೇಳೆ, ದಕ್ಷಿಣ ಭಾರತದಲ್ಲಿ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಿ ಕೋಮು ಧ್ವೇಷವನ್ನು ಹುಲುಸಾಗಿ ಬೆಳೆಯಲು ಬಿಡಲಾಗಿದೆ.

ಇತ್ತೀಚೆಗೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಹೆಚ್‌ಡಿಕೆ ಸೇರಿ 60 ಕ್ಕೂ ಹೆಚ್ಚಿನ ಬುದ್ಧಿಜೀವಿಗಳ, ಚಿಂತಕರ ವಿರುದ್ಧ ಬಂದ ಬೆದರಿಕೆ ಪತ್ರವನ್ನೂ ಇದೇ ಹಿನ್ನೆಲೆಯಲ್ಲಿಟ್ಟು ನೋಡಬೇಕು. ಅದು ಮಾತ್ರವಲ್ಲ, ಹಿಂದುತ್ವ ಸಂಘಟನೆಗಳು ನಾಡಿನ ಯಾವ ಮೂಲೆಯಲ್ಲಿಯೂ ಕಾನೂನು ಕೈಗೆತ್ತಿಕೊಳ್ಳಲು ಹಿಂದೆ ಮುಂದೆ ನೋಡುತ್ತಿಲ್ಲ. ದಕ್ಷಿಣ ಕನ್ನಡ ಸೇರಿ ಕರಾವಳಿಯಾದ್ಯಂತ ಹೆಚ್ಚಿರುವ ಹಿಂದುತ್ವ ನೈತಿಕ ಗೂಂಡಾಗಿರಿ ಇರಬಹುದು, ಧಾರವಾಡದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಮುಸ್ಲಿಂ ವರ್ತಕರ ಕಲ್ಲಂಗಡಿಗಳನ್ನು ಒಡೆದು ಹಾಕಿ ರಾದ್ಧಾಂತ ಮಾಡುವಾಗಲೂ ಕಾನೂನಿನ ಭಯ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬಹುಷ, ಬೊಮ್ಮಾಯಿ ಗೃಹಸಚಿರಾಗಿದ್ದಾಗ ʼಹಿಂದುತ್ವ ಗೂಂಡಾಗಳ ಬಳಿ ನಿಮ್ಮ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತೇನೆʼ ಎಂದು ಹೇಳಿದ್ದು, ಅವರೇ ಇದೀಗ ಸಿಎಂ ಆಗಿರುವುದರಿಂದ ಈ ಗೂಂಡಾಗಳಿಗೆ ಇನ್ನಷ್ಟು ಬಲ ಬಂಧಂತಾಗಿದೆ.

ಮಾತ್ರವಲ್ಲದೆ, ಬಹುಸಂಖ್ಯಾತ ಕೋಮುವಾದದ ಗೂಂಡಾಗಿರಿಯನ್ನು ʼಕ್ರಿಯೆಗೆ ಪ್ರತಿಕ್ರಿಯೆʼ ಎಂದು ಸರಳೀಕರಿಸಿ ನರೇಟಿವ್‌ ಅನ್ನು ಸ್ವತಃ ಸಿಎಂ ಕಟ್ಟಿಕೊಟ್ಟಿರುವಾಗ, ಗೂಂಡಾಗಿರಿಗೆ ಅಧಿಕೃತ ಒಪ್ಪಿಗೆ ಸಿಕ್ಕಂತಾಯಿತಲ್ಲವೇ? ಅದರ ಪರಿಣಾಮವನ್ನೇ ರಾಜ್ಯದ ಜನತೆ ಈಗ ಅನುಭವಿಸುತ್ತಿರುವುದು.

ಅದು ಹಿಜಾಬ್‌ ಇರಲಿ, ಹಲಾಲ್‌, ಆಜಾನ್‌, ವಕ್ಫ್‌, ವ್ಯಾಪಾರ ಏನೇ ಇರಲಿ.. ಮುಸ್ಲಿಮರ ಮೇಲೆ ಸಂಘಟಿತ ದಾಳಿ ನಡೆಸಲು ಬಹುಸಂಖ್ಯಾತ ಕೋಮುವಾದಿಗಳಿಗೆ ಬೇಕಾದ ಎಲ್ಲಾ ಪೂರಕ ವಾತಾವರಣವನ್ನು ದಿವಂಗತ ಎಸ್‌ ಆರ್‌ ಬೊಮ್ಮಾಯಿ ಅವರ ಪುತ್ರ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿ ಕೊಟ್ಟಿದೆ. ಸ್ವಂತ ಬಲದಲ್ಲಿ ಸರ್ಕಾರ ರಚಿಸುವಷ್ಟು ತಾಕತ್ತು ಇಲ್ಲದ ಸಿಎಂ ಬೊಮ್ಮಾಯಿಗೆ ಓರ್ವ ಆಡಳಿತಾಧಿಕಾರಿಗೆ ಇರಬೇಕಾದ ಕನಿಷ್ಟ ಲಜ್ಜೆಯೂ, ನಾಗರಿಕ ಜವಾಬ್ದಾರಿಯೂ ಇದ್ದಂತೆ ಕಾಣಿಸುತ್ತಿಲ್ಲ. ಹಾಗಾಗಿ, ತಮ್ಮ ತಂದೆಯವರ ಹೆಸರಿಗೆ ಮಸಿ ಬಳಿದಂತಾಗುತ್ತದೆ ಎಂಬ ಅರಿವಾದರೂ ಅವರನ್ನು ಇಂತಹ ಕುಟಿಲ ರಾಜಕಾರಣದಿಂದ ತಡೆದು ನಿಲ್ಲಿಸಲಿ ಎಂಬ ಉದ್ಧೇಶಕ್ಕಾಗಿ ಅವರ ತಂದೆಯ ಹೆಸರನ್ನು ಇಲ್ಲಿ ಉಲ್ಲೇಖಿಸಬೇಕಾಯಿತು ಅಷ್ಟೇ.!

ಸಿಎಂ ಬೊಮ್ಮಾಯಿ ಆಡಳಿತ ರಾಜ್ಯದ ಸಾಮಾಜಿಕ ವಾತಾವರಣವನ್ನು ಯಾವ ಮಟ್ಟಿಗೆ ಕುಲಗೆಡಿಸಿದೆಯೋ ಅದೇ ಮಟ್ಟಕ್ಕೆ ರಾಜ್ಯದ ಆರ್ಥಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರಿದೆ. ಸಾಮಾಜಿಕ-ರಾಜಕೀಯ-ಆರ್ಥಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳೂ ಒಂದಕ್ಕೊಂದು ಬೆಸೆದುಕೊಂಡಿರುವಾಗ ಒಂದರ ಪರಿಣಾಮ ಇನ್ನೊಂದರ ಮೇಲೆ ಬೀರುವುದು ಸಹಜವೇ ಆಗಿದೆ. ಮುಸ್ಲಿಂ ವ್ಯಾಪಾರಸ್ಥರನ್ನು, ಚಾಲಕರನ್ನು ಬಹಿಷ್ಕರಿಸಿ ಎಂದು ಈಗಾಗಲೇ ಆಂದೋಲನ ಮಾಡಿರುವುದರಿಂದ ಇದುವರೆಗೂ ಮುಂದುವರೆದಿದ್ದ ಸಾಂಪ್ರದಾಯಿಕ ಅಭ್ಯಾಸಗಳ ಮೇಲೆ ತೀವ್ರ ಪೆಟ್ಟು ಬೀಳುತ್ತದೆ. ಇದು ಮೇಲೆ ಹೇಳಿದ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಉದಾಹರಣೆಗೆ, ಹಲಾಲ್‌ ಮಾಂಸ ಕೊಳ್ಳಬೇಡಿ ಎಂಬ ಹಿಂದುತ್ವದ ಅಭಿಯಾನದಿಂದ ಆತಂಕಿತರಾಗಿರುವ ಬಹುಪಾಲು ಮುಸ್ಲಿಂ ವರ್ತಕರು ತಮ್ಮ ವ್ಯಾಪಾರದ ವ್ಯಾಪ್ತಿಯನ್ನು ಸೀಮಿತಗೊಳಿಸಿದ್ದಾರೆ. ಮುಸ್ಲಿಂ ವರ್ತಕರನ್ನು ಹಾಗೂ ರಂಜಾನ್‌ ಅವಧಿಯನ್ನೇ ಗಮನದಲ್ಲಿಟ್ಟು ಕುರಿ, ಕೋಳಿ ಸಾಕಿದ ಹೈನುಗಾರರು ಇದೀಗ ಕೊಳ್ಳುವವರಿಲ್ಲದೆ ಹೊಡೆತ ಅನುಭವಿಸಿದ್ದಾರೆ.

ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಜಾರಿಗೆ ತಂದಾಗಲೂ ಇದರ ನೇರ ಪರಿಣಾಮವನ್ನು ಅನುಭವಿಸಿದ್ದು ತಳಸ್ತರದಲ್ಲಿ ಹಸುಗಳನ್ನು ಪೋಷಿಸುವ ರೈತ ಸಮುದಾಯ. ಆದರೆ, ಹಿಂದೂ ಭಾವನೆಗಳು ಎಂಬ ಭ್ರಮೆಯನ್ನು ತೇಲಿಸಿ ಆ ಸಮುದಾಯ ತಮಗಾಗುತ್ತಿರುವ ಕಷ್ಟವನ್ನು ಬಹಿರಂಗವಾಗಿ ಹೇಳದಂತಹ ವಾತಾವರಣವನ್ನು ಇಲ್ಲಿ ವ್ಯವಸ್ಥಿತವಾಗಿ ಸೃಷ್ಟಿಸಲಾಗಿತ್ತು.

ಒಂದು ಪಕ್ಷವನ್ನು ವಿರೋಧಿಸಿದರೆ ಧರ್ಮ ದ್ರೋಹಿಯೆಂದೂ, ಅದರ ನೀತಿಗಳನ್ನು ವಿರೋಧಿಸಿದರೆ ದೇಶದ್ರೋಹಿಗಳೆಂದು ಕರೆದು ಬಾಯಿ ಮುಚ್ಚಿಸುವಾಗ ಸಾಮಾನ್ಯ ಜನರು ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ದಿಕ್ಕು ತೋಚಿದ್ದಾರೋ ಅಥವಾ ಜನಪ್ರಿಯಗೊಳ್ಳುತ್ತಿರುವ ಧ್ವೇಷದ ಅಲೆಯಲ್ಲಿ ತಾವೂ ಕೊಚ್ಚಿಕೊಂಡಿ ಹೋಗಿದ್ದಾರೋ ಅನ್ನುವುದಕ್ಕೆ ಕಾದು ನೋಡಬೇಕು. ಅದೇನೇ ಇದ್ದರೂ, ಹಿಂದುತ್ವ ಪಡೆಯ ಅತಿರೇಕದ ಬಹಿಷ್ಕಾರಗಳಿಂದ ನೇರ ಸಂತ್ರಸ್ತರಾಗುತ್ತಿರುವ ಹಿಂದೂ ಸಮುದಾಯವೇ ದೊಡ್ಡ ಮಟ್ಟದ ಪ್ರತಿರೋಧ ತೋರುವುದು ಎಲ್ಲೂ ಕಂಡು ಬಂದಿಲ್ಲ.

ವಿಷಯ ಇರುವುದು ಅದಲ್ಲ. ಎಷ್ಟೇ ಮುಸ್ಲಿಂ ವಿರೋಧಿ ಮನಸ್ಥಿತಿಯನ್ನು ವ್ಯಾಪಕಗೊಳಿಸಿದರೂ ಸರ್ಕಾರಕ್ಕೆ ತನ್ನ ನಿಜದ ವೈಫಲ್ಯವನ್ನು ಬಚ್ಚಿಡಲು ಸಾಧ್ಯವಾಗುತ್ತಿಲ್ಲ. ಏರುತ್ತಿರುವ ಬೆಲೆಗಳು, ನಿರುದ್ಯೋಗ ಸಮಸ್ಯೆಗಳ ಬಗೆಗಿನ ಚರ್ಚೆಗಳನ್ನು ಪ್ರತಿಪಕ್ಷಗಳು ಚಾಲ್ತಿಗೆ ತರಲು ಒಂದೆಡೆ ಪ್ರಯತ್ನಿಸುತ್ತಿದ್ದಂತೆಯೇ, ಇನ್ನೊಂದೆಡೆ ಕೋಮುವಾದದ ಅನಿವಾರ್ಯತೆ ಇಲ್ಲದಿರುವ ಬಂಡವಾಳಶಾಹಿ ವ್ಯವಸ್ಥೆಯೂ ಸರ್ಕಾರಕ್ಕೆ ಗಂಟಲ ಮುಳ್ಳಾಗುವಂತಹ ಚರ್ಚೆಗಳನ್ನು ಚಾಲ್ತಿಗೆ ತರುತ್ತಿದೆ.

ಹಲವು ವಿಚಾರಗಳಲ್ಲಿ ಮೋದಿ ನಿಲುವಿನ ಪರವಿದ್ದ ಉದ್ಯಮಿ ಟಿಎ ಮೋಹನದಾಸ ಪೈ ಅಂತವರೂ ಬೆಂಗಳೂರನ್ನು ದೆಹಲಿ ಕಡೆಗಣಿಸುತ್ತಿದೆ ಎಂದು ಹೇಳಿಕೆ ನೀಡಿದ್ದರೆ, ಇನ್ನೋರ್ವ ಉದ್ಯಮಿ ಕಿರಣ್‌ ಮಜುಮ್ದಾರ್‌ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮು ಧ್ವೇಷದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಯುವ ಉದ್ಯಮಿಗಳಾದ ರವೀಶ್‌ ನರೇಶ್‌, ನಿಖಿಲ್‌ ಕುಮಾರ್‌ ಮೊದಲಾದವರೂ ಬೆಂಗಳೂರಿನ ಮೂಲಭುತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಉದ್ಯಮಿಗಳ ಅಹವಾಲನ್ನು ಮುಂದಿಟ್ಟೇ ಪಕ್ಕದ ತೆಲಂಗಾಣ, ತಮಿಳುನಾಡು ಸರ್ಕಾರಗಳು ಬೆಂಗಳೂರಿನಿಂದ ಅವರ ರಾಜ್ಯಗಳಿಗೆ ಉದ್ದಿಮೆಗಳಿಗೆ ಆಹ್ವಾನ ನೀಡಿದ್ದಾರೆ. ರಾಜಧಾನಿಯಿಂದ ಅವಕಾಶಗಳು ಪಕ್ಕದ ರಾಜ್ಯಗಳ ಪಾಲಾಗುತ್ತವೋ ಇಲ್ಲವೋ ಕರ್ನಾಟಕದ ಬಗೆಗಿನ ನೋಟಕ್ರಮಗಳು ನೆರೆ ರಾಜ್ಯದವರಲ್ಲಿ ಬದಲಾಗುತ್ತಿದೆ, ವಿಶ್ವ ದರ್ಜೆಯ ನಗರವನ್ನು ರಾಜಧಾನಿಯಾಗಿ ಹೊಂದಿರುವ ರಾಜ್ಯವನ್ನು ʼದಕ್ಷಿಣದ ಉತ್ತರಪ್ರದೇಶʼ ಎಂದು ಹೇಳುವಂತಹ ಅಧೋಗತಿಗೆ ತಂದಿಟ್ಟ ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಎಲ್ಲ ರೀತಿಯ ಧನ್ಯವಾದ..!

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರ್ನಾಟಕ ಸರ್ಕಾರನರೇಂದ್ರ ಮೋದಿಬಸವರಾಜ ಬೊಮ್ಮಾಯಿಬಿ ಎಸ್ ಯಡಿಯೂರಪ್ಪಬಿಜೆಪಿಸಿಎಂ ಬಸವರಾಜ ಬೊಮ್ಮಾಯಿಸಿಎಂ ಬೊಮ್ಮಾಯಿಸಿದ್ದರಾಮಯ್ಯ
Previous Post

ಹೊನಲು-ಬೆಳಕಿನಲ್ಲಿ ಕೊನೆ ಚೆಂಡಿನಲ್ಲಿ ಪಂದ್ಯ ಸೋತ ಇಮ್ರಾನ್ ಖಾನ್ ಅಧಿಕಾರದ ಇನ್ನಿಂಗ್ಸ್ ಅಂತ್ಯ!

Next Post

ರಾಜ್ಯದಲ್ಲಿ ಪ್ರಚೋದಕ ಹೇಳಿಕೆಗೆ ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತದೆ : ಸಿದ್ದರಾಮಯ್ಯ

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post
ಬಿಜೆಪಿ ಶಾಸಕರಿಂದ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ, ಕಾಶ್ಮೀರಿ ಫೈಲ್ಸ್ ಚಿತ್ರ ಹಾಕುವಂತೆ ಒತ್ತಡ : ಸಿದ್ದರಾಮಯ್ಯ ಗಂಭೀರ ಆರೋಪ!

ರಾಜ್ಯದಲ್ಲಿ ಪ್ರಚೋದಕ ಹೇಳಿಕೆಗೆ ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತದೆ : ಸಿದ್ದರಾಮಯ್ಯ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada