ವೇಶ್ಯಾವಾಟಿಕೆಯ ಕಿಂಗ್ಪಿನ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಟ್ರೋ ರವಿ ಜೊತೆ ಎಲ್ಲಾ ಪಕ್ಷಗಳಿಗೂ ಸಂಪರ್ಕ ಇದೆ ಆತನ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಮೈಸೂರು ಪೊಲೀಸರಿಗೆ ಸೂಚಿಸಿದ್ದೇನೆ ತನಿಖೆ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸ್ಯಾಂಟ್ರೋ ರವಿ ವಿರುದ್ದ ದಾಖಲಾದ ಕೇಸ್ ಬಗ್ಗೆ ತನಿಖೆ ನಡೆಯುತ್ತದೆ ತನಿಖೆ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರಬರಲಿದೆ. ಕಳೆದ 20 ವರ್ಷಗಳಿಂದ ಎಲ್ಲಾ ನಾಯಕರ ಜೊತೆ ರವಿ ನಂಟು ಹೊಂದಿದ್ದಾನೆ. ಮಹಿಳೆ ದೂರು ಆಧರಿಸಿ ರವಿ ವಿರುದ್ದ ತನಿಖೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಸ್ಯಾಂಟ್ರೋ ರವಿ ವಿರುದ್ದ ನಿಖರವಾಗಿ ತನಿಖೆ ಮಾಡುತ್ತೇವೆ ಮೈಸೂರು ಪೊಲೀರಿಗೆ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದೇನೆ. ಸ್ಯಾಂಟ್ರೋ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

ಕಳೆದ 20 ವರ್ಷಗಳಿಂದ ಎಲ್ಲಾ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ನಂಟು ಹೊಂದಿದ್ದಾನೆ ವಿಪಕ್ಷ ನಾಯಕರ ಜೊತೆ ಲಿಂಕ್, ಆಡಿಯೋ/ ವಿಡಿಯೋ ಬಿಡುಗಡೆ ವಿಚಾರ ಇಟ್ಡುಕೊಂಡೆ ತನಿಖೆ ಮಾಡುತ್ತೀವಿ ಎಂದು ತಿಳಿಸಿದ್ದಾರೆ.
ಸಿಎಂ ಆಗಿ ನಾನು ಹಲವರ ಬಳಿ ಮಾತನಾಡಿರುತ್ತೇನೆ ಅವರ ಹಿನ್ನೆಲೆಯನ್ನೆಲ್ಲ ತಿಳಿದುಕೊಂಡು ಇರಲು ಸಾಧ್ಯವಿಲ್ಲ ಸದ್ಯ ಡಿಜಿಟಲ್ ತಂತ್ರಜ್ಞಾನದಲ್ಲಿ ಯಾವ ರೀತಿ ಬೇಕಾದರೂ ಫೋಟೋ ಬಳಕೆ ಮಾಡಬಹುದು. ನಾವು ಆತನನ್ನ ಬಂಧಿಸಿ ಆತನ ಹೇಳಿಕೆ ಮೇಲೆ ಎಲ್ಲವನ್ನೂ ತನಿಖೆ ಮಾಡ್ತೀವಿ 20 ವರ್ಷಗಳ ಎಲ್ಲಾ ಪ್ರಕರಣಗಳನ್ನ ತನಿಖೆ ನಡೆಸಲು ತಿಳಿಸಿದ್ದೇನೆ ಎಂದು ಮೈಸೂರಿನಲ್ಲಿ ಸಿಎಂ ಹೇಳಿದ್ದಾರೆ.






