ಶಿವಮೊಗ್ಗ: 16 : ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಮಾಜಿ ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿ ನಾನಾ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿದ್ದು ಎಲ್ಲವೂ ಅರೆಬರೆ ಮುಗಿದಿವೆ. ಒಂದೂ ಪೂರ್ಣವಾಗಿಲ್ಲ. ಚುನಾವಣೆ ಘೋಷಣೆ ಮುನ್ನಾ ಫಲಕದಲ್ಲಿ ಹೆಸರು ಬರಬೇಕೆಂದು ಅಕ್ಕಮಹಾದೇವಿ ಪುತ್ಥಳಿ ಕೂಡ ಲೋಕಾರ್ಪಣೆ ಮಾಡುತ್ತಿದ್ದಾರೆ. ದುರಂತ ಎಂದರೆ ಸಿಮೆಂಟ್ ಕಾಂಕ್ರಿಟ್ ಗಾಗಿ ಅಳವಡಿಸಿರುವ ರಾಡ್ ಗಳನ್ನೂ ತೆಗೆದಿಲ್ಲ ಎಂದು ಕಾಂಗ್ರೆಸ್ ಮುಖಂಡ ದರ್ಶನ್ ಉಳ್ಳಿ ಶಿಕಾರಿಪುರದಲ್ಲಿಂದ ವಾಗ್ದಾಳಿ ನಡೆಸಿದರು. ಶಿಕಾರಿಪುರ ಕಾಂಗ್ರೆಸ್ ಯುವ ಮುಖಂಡ ಪುರಸಭೆ ಸದಸ್ಯ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ದರ್ಶನ್ ಉಳ್ಳಿ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿ ಹಾಯ್ದರು.
ಶುಕ್ರವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಶಿಕಾರಿಪುರಕ್ಕೆ ಆಗಮಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಜೊತೆಗೆ ಕೆಲವನ್ನ ಉದ್ಘಾಟನೆ ಮಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಇನ್ನೂ ಪೂರ್ಣಗೊಂಡಿರದ ಕಾಮಗಾರಿಗಳನ್ನ ಚುನಾವಣಾ ಹೊತ್ತಿನಲ್ಲಿ ಕೇವಲ ಹೆಸರಿಗೋಸ್ಕರ ಉದ್ಘಾಟನೆಗೆ ಬರ್ತಿದ್ದಾರೆ. ಶಿವಶರಣರ ನಾಡು ಶಿಕಾರಿಪುರ, ಇಲ್ಲಿನ ಉಡುತಡಿ ( ಉಡುಗಣಿ)ಯಲ್ಲಿ ದೆಹಲಿ ಅಕ್ಷರಧಾಮದ ಶೈಲಿಯಲ್ಲಿ ಸುಮಾರು 63 ಕೋಟಿ ವೆಚ್ಚದಲ್ಲಿ ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಯ ಪುತ್ತಳಿ ನಿರ್ಮಾಣವಾಗುತ್ತಿದೆ ಆದರೆ ಪೂರ್ಣವಾಗಿಲ್ಲ. ಅಪೂರ್ಣ ಪುತ್ಥಳಿ ಅನಾವರಣ ಮಾಡಲು ಸಿಎಂ ಆಗಮಿಸುತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ಈತನಕ ಕಾಮಗಾರಿ ಪೂರ್ಣಗೊಂಡಿಲ್ಲ. ಇಂದಿಗೂ ಆ ಪ್ರತಿಮೆಗೆ ಹಾಕಿರುವ ಸರಳುಗಳನ್ನು ತೆಗೆದಿಲ್ಲ. ಸುಮಾರು ಒಂದುವರೆ ವರ್ಷ ಆಗುವಷ್ಟು ಕಾಮಗಾರಿ ಇಲ್ಲಿ ಬಾಕಿ ಉಳಿದಿದೆ. ಉದ್ಯಾನವನವು ಕೂಡ ಸಿದ್ಧವಾಗಿಲ್ಲ. ಬಿಜೆಪಿ ನಾಯಕರು ಸೋಲಿನ ಭೀತಿಯಲ್ಲಿ ತರತುರಿಯಲ್ಲಿ ಈ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ . ಅಕ್ಕಮಹಾದೇವಿ ಪುತ್ಥಳಿ ಸುಮಾರು 69 ಕೋಟಿ ರೂ ವೆಚ್ಚದಲ್ಲಿ 62 ಅಡಿ ಇರಲಿದೆ.

ಇದೇ ರೀತಿ ಶಿಕಾರಿಪುರ ಪಟ್ಟಣದ ಕೆಎಚ್ ಬಿ ಕಾಲೋನಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಕೂಡ ಇದೆ. ಆ ಕಟ್ಟಡ ಇನ್ನೂ ಶೇಕಡ 40ರಷ್ಟು ಬಾಕಿ ಉಳಿದುಕೊಂಡಿದೆ. ಆದರೆ ಕೇವಲ ಬಣ್ಣ ಬಳಿದು ಸಿಂಗಾರ ಮಾಡಿ ಆಸ್ಪತ್ರೆ ಉದ್ಘಾಟನೆಗೆ ಸಜ್ಜುಗೊಳಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಬಿಜೆಪಿ ಸರ್ಕಾರದ್ದೆಲ್ಲಾ ಅಪೂರ್ಣ ಕಾಮಗಾರಿಗಳೇ. ಫೆಬ್ರವರಿ 27ರಂದು ಬಿಎಸ್ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನದಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದದ್ದರು. ಉದ್ಘಾಟನೆ ಮಾಡಿ 15 ದಿನ ಕಳೆಯಿತು ಇನ್ನು ಒಂದು ವಿಮಾನವು ಕೂಡ ಹಾರುತ್ತಿಲ್ಲ. ಉದ್ಘಾಟನೆ ಆದ ನಂತರ ಕಮಿಷನ್ ಕೈ ಸೇರಿದ ಮೇಲೆ ಈ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವಿಮಾನ ನಿಲ್ದಾಣದ ಕಾಳಜಿ ಇಲ್ಲ.
ಶಿಕಾರಿಪುರದ ತಾಳಗುಂದದಲ್ಲಿ ಪುರಾತನ ಶಾಸನ ಒಂದು ದೊರಕಿದೆ ಇದನ್ನು ಕನ್ನಡದ ಮೊದಲ ಶಾಸನ ಎಂದು ಅನುಮಾನಗಳು ದಟ್ಟವಾಗಿವೆ. ಈ ಹಿಂದೆ ಸಾಕಷ್ಟು ಸಲ ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದರು ಈಗ ಇಷ್ಟೆಲ್ಲಾ ಅನ್ಯಾಯ ಮಾಡಿರುವ ಬಿಎಸ್ ಯಡಿಯೂರಪ್ಪ ಕುಟುಂಬ ಹಾಗೂ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಬರುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ವಿರೋಧವಿದೆ. ಉದ್ಘಾಟನೆ ಮಾಡಿ ಕೇವಲ ಕಲ್ಲಿನಲ್ಲಿ ಹೆಸರು ಬರಬೇಕು ಎಂಬ ಕಾರಣಕ್ಕೆ ಅರೆಬರೆ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ದರ್ಶನ್ ವಾಗ್ದಾಳಿ ನಡೆಸಿದರು.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪತ್ರಕರ್ತರು ಕೂಡ ಈ ಸಂಬಂಧ ಪರಿಶೀಲನೆ ಮಾಡಬೇಕು. ಕಾಮಗಾರಿಗಳು ಪೂರ್ಣಗೊಳ್ಳದೆ ಉದ್ಘಾಟನೆ ಹಾಸ್ಯಾಸ್ಪದ. ದೇಶದ 56 ಇಂಚಿನ ಪ್ರಧಾನಿ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ ಸಂಸದ ರಾಘವೇಂದ್ರ ಸೇರಿ ವಿಮಾನ ನಿಲ್ದಾಣದಿಂದ ಅಕ್ಕಮಹಾದೇವಿ ಪುತ್ಥಳಿವರೆಗೆ ಎಲ್ಲಾ ಕಾಮಗಾರಿಗಳನ್ನು ಅಪೂರ್ಣ ಮಾಡಿ ಚುನಾವಣಾ ದೃಷ್ಟಿಯಿಂದ ಉದ್ಘಾಟನೆ ಮಾಡುತ್ತಾ ಬರುತ್ತಿದ್ದಾರೆ. ಇದಾದ ಮೇಲೆ ಆ ಕಾಮಗಾರಿಗಳ ಉಸ್ತುವಾರಿ ಹೇಗೆ ಮಾಡುತ್ತಾರೆ ಎಂಬುದೇ ಎಲ್ಲರ ಚಿಂತಿಯಾಗಿದೆ. ಇನ್ನು ಶಿಕಾರಿಪುರದಲ್ಲಿ ಬಸ್ ನಿಲ್ದಾಣ ಕೂಡ ಸಿದ್ದರಾಮಯ್ಯ ಕಾಲದಲ್ಲಿ ಅನುಮೋದನೆಗೊಂಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲು ಬರುತ್ತಿದ್ದಾರೆ ಎಂದು ದರ್ಶನ್ ವಾಗ್ದಾಳಿ ನಡೆಸಿದರು.