ಮತಾಂತರ ನಿಷೇಧ ಕಾಯ್ದೆ ರಾಜ್ಯಪಾಲರು ಅಂಕಿತವನ್ನು ಹಾಕಿದ್ದಾರೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾಯ್ದೆಯನ್ನು ಸ್ವಾಗಸಿದ್ದು, ಬಹಳ ದೊಡ್ಡ ಪ್ರಮಾಣದಲ್ಲಿ ಕ್ರಿಶ್ಚಿಯನ್ ಮತಾಂತರ ಕ್ಯಾನ್ಸರ್ ಹರಡುತ್ತಿದೆ. ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಕಟ್ಟು ನಿಟ್ಡಿನ ನಿಯಮ ಹಾಕಿದ್ದು ಸ್ವಾಗತಾರ್ಹ ಈ ಕಾಯ್ದೆಯಿಂದ ಮಂತಾಂತರವನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಮತಾಂತರ ಕಾಯ್ದೆ ತಂದಿದ್ದಕ್ಕೆ ನಾನು ಸ್ವಾಗತ ಮಾಡ್ತೆನೆ. ಸರ್ಕಾರಕ್ಕೆ ಈ ಬಗ್ಗೆ ಸಿಎಂ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೆನೆ. ಕರ್ನಾಟಕದಲ್ಲಿ ಬುಡಕಟ್ಟು ಹಾಗೂ ದಲಿತರನ್ನ ಕ್ರಿಶ್ಚಿಯನ್ನರು ಗುರಿ ಇಟ್ಟು ಮತಾಂತರ ಮಾಡುತಿದ್ದರು ಕ್ರಮೇಣ ಎಲ್ಲ ಜಾತಿಗೂ ಮತಾಂತರ ಆವರಿಸಿತ್ತು ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಕಟ್ಟು ನಿಟ್ಡಿನ ನಿಯಮ ಹಾಕಿದ್ದು ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ೧೦ ವರ್ಷ ಶಿಕ್ಷೆ ಹಾಕಿದ್ದಾರೆ, ಶಾಲೆ ಕಾಲೇಜಿನ ಆಮಿಷ ಒಡ್ಡುವದು, ಮದುವೆಗೆ ಆಮೀಷ ಒಡ್ಡುವುದನ್ನ ಈ ನಿಯಮದಲ್ಲಿ ಅಳವಡಿಸಿದ್ದು ಒಳ್ಳೆಯದಾಗಿದೆ. ಇವರು ಒತ್ತಾಯದಿಂದ ಮತಾಂತರ ಮಾಡುವದು ಅಷ್ಟೇ ಅಲ್ಲ, ಆಸೆ ಆಮಿಷ ಒಡ್ಡಿ ಕ್ರಿಶ್ಚಿಯನ್ನರು ಮತಾಂತರ ಮಾಡುತಿದ್ದು, ಇದನ್ನ ತಡೆಯಬೇಕಾಯಗಿದೆ ಎಂದು ಹೇಳಿದ್ದಾರೆ.
ಸಾವಿರಾರು ಚರ್ಚ್ ಇಲ್ಲಿವೆ ಅದರ ಬಗ್ಗೆ, ಸರ್ಕಾರಕ್ಕೆ ಮಾಹಿತಿ ನೀಡ್ತೆನೆ. ಕಾಯ್ದೆಯನ್ನ ಜಾರಿಗೆ ತರುವದು ಸರ್ಕಾರದ ಜವಾಬ್ದಾರಿ. ಸರ್ಕಾರ ಪೊಲೀಸರ ಮೂಲಕ ಕಾನೂನು ಜಾರಿ ಮಾಡಬೇಕು. ಇಲ್ಲಾಂದ್ರೆ ಸಂಘಟನೆಗಳು ಮುಂದೆ ಬಂದರೆ ಸಂಘರ್ಷ ಉಂಟಾಗುತ್ತೆ ಅದಕ್ಕೆ ಎಲ್ಲವನ್ನ ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಆಗ್ರಹ ಮಾಡ್ತೆನೆ ಎಂದು ಆಗ್ರಹಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ರಾಜ್ಯಪಾಲರು ಅಂಕಿತವನ್ನು ಹಾಕಿದ್ದಾರೆ. ಮೇ 12 ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಸಮ್ಮತಿಸಲು ಅನುಮೋದನೆ ನೀಡಿತ್ತು. ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆಯನ್ನು ನೀಡಿದ್ದಾರೆ.