ಸಮುದಾಯಗಳ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ನಿರ್ಮಾಪಕ ಮತ್ತು ನಿರ್ದೇಶಕ ಇಂದ್ರಜೀತ್ ಲಂಕೇಶ್ ವಿರುದ್ಧ ದೂರು ದಾಖಲಿಸುವಂತೆ ಕರ್ನಾಟಕ ಗೃಹ ಇಲಾಖೆಗೆ ಪತ್ರ ಬರೆದ ಸಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ.
ಕಳೆದ ಐದಾರು ದಿನದಿಂದ ನಟ ದರ್ಶನ್ ತೂಗುದೀಪ್ ವಿರುದ್ಧ ಇಂದ್ರಜಿತ್ ಲಂಕೇಶ್ ಸಾಲು ಸಾಲು ಆರೋಪವನ್ನು ಮಾಧ್ಯಮಗಳ ಮುಂದಿಸಿದ್ದು ಇದಕ್ಕೆ ದರ್ಶನ್ ಕೂಡ ತುಂಬಾ ಕಟುವಾಗಿ ತಿರುಗೇಟು ನೀಡಿದ್ದರು. ಆದರೆ ದಿನ ಕಳೆದಂತೆ ನಟ ದರ್ಶನ್ ಮೇಲಿನ ಆರೋಪ ತಾರಕಕ್ಕೇರಿದ ಕಾರಣ ಸಾರ್ವಜನಿಕರಲ್ಲಿ ತುಂಬಾ ಚರ್ಚೆಗೂ ಗ್ರಾಸವಾಗುತ್ತಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಇಂದ್ರಜಿತ್ ಲಂಕೇಶ್ ವಿರುದ್ಧ ಕರ್ನಾಟಕ ಗೃಹ ಇಲಾಖೆಗೆ ದೂರಿನ ಪತ್ರ ಸಲ್ಲಿಸಿದ್ದಾರೆ.
ಜುಲೈ 15 ರಂದು ಇಂದ್ರಜಿತ್ ಲಂಕೇಶ್, ಮೈಸೂರಿನಲ್ಲಿ ನಡೆದ ಒಂದು ಪಾರ್ಟಿಯಲ್ಲಿ ನಟ ದರ್ಶನ್ ಒಬ್ಬ ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಅದರಿಂದ ಅವರ ಕಣ್ಣು ಬಲವಾಗಿ ಪೆಟ್ಟಾಗಿದೆ ಎಂದು ಆರೋಪಿಸಿದ್ದರು. ಮಾರನೇ ದಿನ ಹಲ್ಲೆಗೊಳಗಾದ ಸಪ್ಲೈಯರ್ ಹೆಂಡತಿ ಹೋಟೆಲ್ ಬಳಿ ಬಂದು ತನ್ನ ಗಂಡನಿಗೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿದರು ಎಂದು ಆರೋಪಿಸಿದ್ದರು. ಈ ಪ್ರಕರಣವನ್ನು ಕಾನೂನು ಮೂಲಕ ಬಗೆಯರಿಸದೆ ಪೋಲಿಸರು ರಾಜಿ ಮಾಡಿ ಕಳಿಸಿದ್ದಾರೆ. ಮೈಸೂರು ಪೋಲಿಸ್ ಠಾಣೆ ಈಗ ರಾಜಿ ಠಾಣೆಯಾಗಿ ( ಸೆಟಲ್ಮೆಂಟ್ ಸ್ಟೇಷನ್) ಆಗಿ ಬದಲಾಗಿದೆ ಎಂದು ಆರೋಪಿಸಿದನ್ನು ದೂರಿನ ಪತ್ರದಲ್ಲಿ ದಾಖಲಿಸಿದ್ದಾರೆ.
ಈ ಮೇಲಿನ ಎಲ್ಲಾ ಆರೋಪಗಳು ಸುಳ್ಳಿನಿಂದ ಕೂಡಿದ್ದು ದಲಿತ ಸಮುದಾವನ್ನು ಬಲಜಿಗ ನಾಯ್ಡು ಸಮುದಾಯ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಇಂದ್ರಜಿತ್ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಆರೋಪಕ್ಕು ವಾಸ್ತವದ ಸತ್ಯಾಂಶಕ್ಕು ಅಜಗಜಾಂತರ ವ್ಯತ್ಯಾಸ: ಈ ಕುರಿತು ಪತ್ರದಲ್ಲಿ ಸವಿಸ್ತಾರವಾಗಿ ಅಬ್ರಾಹಂ ಬರೆದಿದ್ದಾರೆ.
ದರ್ಶನ್ ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾಗಿ ಇಂದ್ರಜಿತ್ ಆರೋಪಿಸಿದ್ದಾರೆ ಆದರೆ ಆತ ದಲಿತ ಅಲ್ಲವೇ ಅಲ್ಲ ಆತ ಒಬ್ಬ ನಾಯರ್ ಬ್ರಾಹ್ಮಣ ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಪ್ಲೈಯರ್ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ ಎಂಬ ಆರೋಪಕ್ಕೆ, ನಟ ದರ್ಶನ್ ಆ ವ್ಯಕ್ತಿಯ ಮೇಲೆ ಯಾವುದೇತರಹದ ಹಲ್ಲೆ ಮಾಡಿಲ್ಲ ಎಂದು ಬರತೆದಿದ್ಧಾರೆ.
ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಆರೋಪಿಸಿದ್ದರು ಆದರೆ ಆ ವ್ಯಕ್ತಿಗೆ ಯಾವುದೇ ರೀತಿಯ ಪೆಟ್ಟು ಆಗಿಲ್ಲ ಮತ್ತು ಕಣ್ಣಿಗೂ ಕೂಡ ಪೆಟ್ಟಾಗಿಲ್ಲ.
ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಹೋಟೆಲ್ ಬಳಿ ಬಂದು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ ಆದರೆ ಆ ವ್ಯಕ್ತಿಗೆ ಇನ್ನೂ ಮದುವೆಯೇ ಆಗಿಲ್ಲ ಎಂದು ದೂರಿನಲ್ಲಿ ಇಬ್ರಾಹಿಂ ದಾಖಲಿಸಿದ್ದಾರೆ.
ಈ ಅರೋದಪಗಳ ನಡುವೇ ಪೋಲಿಸ್ ಇಲಾಖೆಯ ಎಳೆದಂದು ಸಂಪೂರ್ಣ ಪೊಲೀಸ್ ಇಲಾಖೆಗೆ ಅಪಖ್ಯಾತಿ ತಂದಿದ್ದಾರೆ ಎಂದು ಆರೋಪಿಸಿ ಬರೆದಿದ್ದಾರೆ.
ಇಂದ್ರಜಿತ್ ವಿರುದ್ಧ ಸೆಕ್ಷನ್ 154, 153 A , 505 ಮತ್ತು 499, 500 ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವಂತೆ ಅಬ್ರಾಹಂ ದೂರಿನ ಪತ್ರದಲ್ಲಿ ದಾಖಲಿಸಿದ್ದಾರೆ.
ರಾಜ್ಯದಾದ್ಯಂತ ಈಗಾಗಲೇ ಮುಂಗಾರು (Mansoon) ಚುರುಕು ಪಡೆದುಕೊಂಡಿದ್ದು ಕೆಲವು ಜಿಲ್ಲೆಗಳಲ್ಲಿ ರೆಡ್ ಲೈಟ್ (Red alert) ಇನ್ನೂ ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (Orange alert) ಘೋಷಿಸಲಾಗಿದೆ...