• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಚಾಕಲೇಟ್ ನಲ್ಲಿ ಅರಳಿತು ಅಪ್ಪಟ ಅಪ್ಪು ಪ್ರತಿಮೆ : ನಗು ಮುಖದ ಅಪ್ಪುಗೆ ʻಸಿಹಿ ಸಕ್ಕರೆʼಯ ನಮನ

ಕರ್ಣ by ಕರ್ಣ
December 21, 2021
in ಕರ್ನಾಟಕ
0
ಚಾಕಲೇಟ್ ನಲ್ಲಿ ಅರಳಿತು ಅಪ್ಪಟ ಅಪ್ಪು ಪ್ರತಿಮೆ : ನಗು ಮುಖದ ಅಪ್ಪುಗೆ ʻಸಿಹಿ ಸಕ್ಕರೆʼಯ ನಮನ
Share on WhatsAppShare on FacebookShare on Telegram

ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ  ಬರೋಬ್ಬರಿ ಒಂದೂವರೆ ತಿಂಗಳು ಕಳೆದಿದೆ. ಆದರೂ ಕೂಡ ಅವರ ಅಭಿಮಾನಿಗಳ ಮನದಲ್ಲಿ ನೋವು ಕಡಿಮೆಯಾಗಿಲ್ಲ. ಪ್ರತಿದಿನ, ಪ್ರತಿಕ್ಷಣ ಅಪ್ಪು ಅಪ್ಪು ಅಂತ ಕನವರಿಸುತ್ತಿದ್ದಾರೆ. ಈ ನಡುವೆ ಶುಗರ್ ಸ್ಕಲ್ಪ್ಟ್ ಸಂಸ್ಥೆ ಯುವರತ್ನ ಅಪ್ಪುಗೆ ಸಿಹಿಯಾದ ಚಾಕಲೇಟ್ ಮೂಲಕ ನೆನಪಿನ ನಮನ ಸಲ್ಲಿಸಿದೆ.

ADVERTISEMENT

ಕರುನಾಡು ಕಂಡ ಅದ್ಭುತ ಕಲೆಗಾರನಿಗೆ ಮಿಡಿದಿದ್ದು ಒಂದೆರಡು ಮನಗಳಲ್ಲ. ಕೋಟಿ ಕೋಟಿ ಕನ್ನಡಿಗರು ಪುನೀತ್‌ ರಾಜ್‌ ಕುಮಾರ್‌ ಅಗಲಿಕೆಯಿಂದ ಮರುಗಿ ಕಣ್ಣೀರಾಗಿ ಹೋಗಿದ್ದರು. ಹೆಚ್ಚು ಕಮ್ಮಿಒಂದೂವರೆ ತಿಂಗಳುಗಳೇ ಕಳೆದಿದೆ. ಆದರೂ ಶೋಕ ಭಾವ ಇನ್ನೂ ಹಾಗೆಯೇ ಇದೆ. ಎತ್ತ ನೋಡಿದರೂ ಅಪ್ಪು ಅಗಲಿಕೆಯ ಭಾವ ಚಿತ್ರಗಳು. ನಿಜಕ್ಕೂ ಆ ನಗುಮುಖ ನೋಡಿದರೆ ಕಣ್ಣೀರು ಬಾರದೆ ಇರದು. ವರನಟ ರಾಜ್‌ ಕುಮಾರ್‌ ಕೊನೆಯ ಪುತ್ರ ಪುನೀತ್‌ ರಾಜ್‌ ಕುಮಾರ್‌, ಅಭಿಮಾನಿಗಳ ಅಪ್ಪು ಒಟ್ಟು ಜೀವನದ ಸಂಪಾದನೆಯಿದು. ಅಂಥಾ ಅಪ್ಪುಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಕ್‌ ಶೋನಲ್ಲಿ ನಮನ ಸಲ್ಲಿಸಲಾಗಿದೆ.

ಬಂಗಾರದ ಮನುಷ್ಯನಿಗೆ ಬಂಗಾರದ ಬಣ್ಣ, ತೋಳ ಮೇಲೆ ಪಾರಿವಾಳ

ಯುವ ರತ್ನ ಪುನೀತ್ ರಾಜ್ ಕುಮಾರ್ ಗೆ ಕೇಕ್ ನಮನ ಸಲ್ಲಿಸಲಾಗಿದೆ. ಕೇಕ್‌ ಆರ್ಟಿಸ್ಟ್‌ ಶೆಫ್‌ ಸ್ಯಾಮಿ ರಾಮಚಂದ್ರನ್‌ ನೇತೃತ್ವದ ತಂಡವೊಂದು ಅಪ್ಪು ಕೇಕ್‌ ಪ್ರತಿಮೆಯನ್ನು ನಿರ್ಮಿಸಿದೆ. ಇದು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸುಮಾರು 200kg ತೂಕದ ಅಪ್ಪು ಕೇಕ್‌ ಪ್ರತಿಮೆ ಇದಾಗಿದ್ದು, ಸುಮಾರು 15 ದಿನಗಳಲ್ಲಿ ಪ್ರತಿಮೆ ಕೆಲಸ ಪೂರ್ಣಗೊಳಿಸಲಾಗಿದೆ. ಬಂಗಾದರ ಮನುಷ್ಯನಿಗೆ ಬಂಗಾರದ ಬಣ್ಣವನ್ನೇ ಬಳಿದು ಕಸ್ತೂರಿ ನಿವಾಸದ ಪರಿವಾಳವನ್ನು ಅಪ್ಪು ತೋಳ ಮೇಲೆ ಕೂರಿಸಲಾಗಿದೆ. ಈ ಬಗ್ಗೆ ಒಂದೇ ಮಾತಿನಲ್ಲಿ ಈ ಬಗ್ಗೆ ಮಾತನಾಡಿದ ಈ ಕೇಕ್‌ ಪ್ರತಿಮೆಯ ನಿರ್ಮಾತೃ ಸ್ಯಾಮಿ ರಾಮಚಂದ್ರನ್‌, ದೊಡ್ಡ ಮನುಷ್ಯನಿಗೆ ಸಣ್ಣ ಕಾಣಿಕೆಯೆಂದಿದ್ದಾರೆ.

1500 ಕೆಜಿ ಮೋಗ್ಲಿ ಮರುಸೃಷ್ಟಿ.. ದಂಗಾದ ಕೇಕ್ ಪ್ರಿಯರು

ಬರ್ತಡೇ ಕೇಕ್.. ನ್ಯೂ ಇಯರ್ ಕೇಕ್, ಆನಿವರ್ಸರಿ ಕೇಕ್ ಗಳನ್ನಷ್ಟೇ ನೋಡಿ ಗೊತ್ತಿರುವ ಜನರಿಗೆ ಇದು ನಿಜಕ್ಕೂ ಅಚ್ಚರಿಯ ಲೋಕವೇ ಸರಿ. ಬಣ್ಣ ಬಣ್ಣದ, ಬಗೆ ಬಗೆಯ, ಕಲಾತ್ಮಕ ಕೇಕ್ಗಳನ್ನು ನೋಡಲು ಜನ ದೌಡಾಯಿಸುತ್ತಿದ್ದಾರೆ. ನಗರದ ಸೈಂಟ್ ಜಾಸೆಫ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಶುಗರ್ ಸ್ಕಲ್ಪ್ಟ್ ಎಂಬ ಕೇಕ್ ಡ್ರಾ ಆಕಾಡೆಮಿ ಆಯೋಜಿಸಿರುವ ಕೇಕ್ ಉತ್ಸವದ ಹೈಲೇಟ್ಗಳಿವು. ಕಳೆದ 47ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಕೇಕ್ ಶೋ ಅನ್ನು ಪ್ರತಿ ವರ್ಷದ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಹೊತ್ತಿನಲ್ಲಿ ಆಯೋಜಿಸಲಾಗುತ್ತೆ. ಈ ಬಾರಿಯೂ ಕೇಕ್ ಶೋ ಡಿಸೆಂಬರ್ 17ರಿಂದ ಆರಂಭಗೊಂಡಿದ್ದು ಜನವರಿ 2ರ ವರೆಗೆ ನಡೆಯಲಿದೆ.

ಈ ಬಾರಿಯ ಸೆಂಟರ್ ಆಫ್ ಅಟ್ಯ್ರಾಕ್ಷನ್ ಮೋಗ್ಲಿ & ಲಿಬರ್ಟಿ ಪ್ರತಿಮೆ

ಹೌದು, ಎಂದಿನಂತೆ ಈ ಬಾರಿಯೂ ಕೇಕ್ ಶೋಗೆ ಆಗಮಿಸುವ ಮಂದಿಯ ಗಮನ ಸೆಳೆಯುತ್ತಿರುವುದು ಕ್ಲಾಸಿಕ್ ಜಂಗಲ್ ಬುಕ್ನ ಮೋಗ್ಲಿ ಎಂಬ ಪಾತ್ರ ಹಾಗೂ ಅಮೆರಿಕಾದ ಸ್ವಾತಂತ್ರ್ಯದ ಪ್ರತೀಕವಾಗಿರುವ ಸ್ಟಾಚ್ಯೂ ಆಫ್ ಲಿಬರ್ಟಿ ಪ್ರತಿಮೆಗಳು. ಬರೋಬ್ಬರಿ 1500 ಕೆಜಿ ತೂಕ ಇರುವ ಈ ಎರಡು ಕೇಕ್ ಕಲೆಗಳು ಜನರ ಮನಸೂರೆಗೊಳ್ಳುತ್ತಿದೆ. ಈ 1500 ಕೆಜಿ ತೂಕವುಳ್ಳ ಕೇಕ್ಗಳ ನಿರ್ಮಾಣಕ್ಕೆ ಸುಮಾರು 4 ತಿಂಗಳ ಸಮಯ ಹಾಗೂ 20 ಮಂದಿಯ ಶ್ರಮ ನೀಡಲಾಗಿದೆ. ಪರಿಣಾಮ ಆರೇಳು ಅಡಿ ಎತ್ತರದ ಸ್ಟಾಚ್ಯೂ ಆಫ್ ಲಿಬರ್ಟಿ ಹಾಗೂ ನೆಲದ ಮೇಲೆ ನಿಜವೆಂಬಂತೆ ಅರಳಿರುವ ಮೋಗ್ಲಿ ಅವತಾರಗಳು ಕೇಕ್ಗಳಲ್ಲಿ ಸೃಷ್ಟಿಗೊಂಡಿದೆ. ಕಣ್ಣಿಗೂ ನಿಲುಕದ, ಊಹೆಗೂ ಧಕ್ಕದ ಕೇಕ್ಗಳನ್ನು ನೋಡಿದ ಪುಟಾಣಿಗಳು ಸಂಭ್ರಮದಲ್ಲಿ ಹುಚ್ಚೆದ್ದು ಕುಣಿದರು. ಜೊತೆಗೆ ಈವರೆಗೂ ಕಂಡು ಕೇಳರಿಯದ ಪ್ರಮಾಣದ ಕೇಕ್ಗಳನ್ನು ನೋಡಿದ ಯುವತಿಯರು ಕಣ್ಣರಳಿಸಿ ಕೇಕ್ ಕಲೆಗಳ ಸವಿ ಸವಿದರು.

ಅಪ್ಪುವಿನಿಂದ ಕೇಕ್‌ ಶೋಗೆ ಹೆಚ್ಚಿದ ಮೆರುಗು

ಇನ್ನು ಈ ಕೇಕ್ ಉತ್ಸವದಲ್ಲಿ ಒಟ್ಟು 21 ಬಗೆಯ ಕೇಕ್ ಕಲೆಗಳು ಸೃಷ್ಟಿಸಲಾಗಿದೆ. ಮಾಸ್ಟರ್ ಶೆಫ್ ಸ್ಯಾಮಿ ರಾಮಚಂದ್ರನ್ ಎಂಬ ಬೆಂಗಳೂರು ಮೂಲದ ಅಂತರರಾಷ್ಟ್ರೀಯ ಕೇಕ್ ಮೇಕರ್ ಮಾರ್ಗದರ್ಶನದಲ್ಲಿ ಈ ಕೇಕ್ಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಆಮೆರಿಕಾದ ಸ್ಟಾಚ್ಯೂ ಆಫ್‌ ಲಿಬರ್ಟಿ ಹಾಗೂ ಜಂಗಲ್‌ ಬುಕ್‌ ನ ಮೋಗ್ಲಿಯ ರೂಪಕ್ಕೆ ಕೇಕ್‌ ರೂಪ ಕೊಡಲಾಗಿದೆ. ಜನವರಿ 2ರ ವರೆಗೆ ಈ ಕೇಕ್‌ ಶೋ ನಡೆಯಲಿದ್ದು ಜನ ಸಾಗರವೇ ಅಪ್ಪು ಸೇರಿದಂತೆ ಪ್ರಸಿದ್ಧ ಕಲೆಗಳ ಕೇಕ್‌ ರೂಪ ನೋಡಲು ಮುಗಿಬೀಳುತ್ತಿದ್ದಾರೆ. ಆದರೂ ಅಪ್ಪುವಿನ ಕೇಕ್‌ ಪ್ರತಿಮೆ ನೋಡಿದ ಜನರ ಭಾವುಕರಾಗುತ್ತಿದ್ದಾರೆ. ಇದುವೇ ಅಪ್ಪು ಎಂಬ ಮಹಾ ವ್ಯಕ್ತಿಯ ಮಹಾ ಸಾಧನೆ.

Tags: Cake ShowChristmasNew Yearpuneeth rajkumar
Previous Post

ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

Next Post

MES ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜೈ ಭೀಮ ಯುವ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
MES  ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜೈ ಭೀಮ ಯುವ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

MES ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜೈ ಭೀಮ ಯುವ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada