• Home
  • About Us
  • ಕರ್ನಾಟಕ
Friday, July 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

BMTC ಬಸ್ ಗಳಲ್ಲಿ ಅಚಾನಕ್ ಬೆಂಕಿ: ತನಿಖೆಗೆ ಸಮಿತಿ ರಚಿಸಿದ ಸಾರಿಗೆ ಸಂಸ್ಥೆ!

ಕರ್ಣ by ಕರ್ಣ
February 3, 2022
in ಕರ್ನಾಟಕ
0
BMTC ಬಸ್ ಗಳಲ್ಲಿ ಅಚಾನಕ್ ಬೆಂಕಿ: ತನಿಖೆಗೆ ಸಮಿತಿ ರಚಿಸಿದ ಸಾರಿಗೆ ಸಂಸ್ಥೆ!
Share on WhatsAppShare on FacebookShare on Telegram
ADVERTISEMENT

12 ದಿನದ ಅಂತರದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎರಡು ಬಿಎಂಟಿಸಿ (Banglore Metropolitan Transport Corporation) ಬಸ್ಸುಗಳು ಪ್ರಯಾಣಿಕರನ್ನ ಹೊತ್ತು ಸಾಗುವಾಗಲೇ ನಡು ರಸ್ತೆಯಲ್ಲೇ ಬೆಂಕಿಗೆ (Fire Accident) ಆಹುತಿಯಾಗಿದ್ದವು. ಇದರಿಂದ ಸಹಜವಾಗೇ ಜನರಿಗೆ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡುವ ಬಗ್ಗೆ ಯೋಚನೆ ಮಾಡುವಂತಾಗಿತ್ತು. ಇದೀಗ ಬಿಎಂಟಿಸಿ ಈ ಘಟನೆ ಯಿಂದ ಎಚ್ಚೆತ್ತುಕೊಂಡು ತನಿಖೆಗೆ ಆದೇಶ ಮಾಡಿದ್ದು, ಕೆಲವು ಕ್ರಮಕ್ಕೂ ಮುಂದಾಗಿದೆ.

ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಸರ್ಕಲ್ ಬಳಿ, ಫೆಬ್ರವರಿ 1 ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ (South End Circle Metro Station) ರಸ್ತೆಯಲ್ಲಿ ಎರಡು ಬಿಎಂಟಿಸಿ ಬಸ್ಗಳು ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವಾಗಲೇ ಧಗಧಗ ಹೊತ್ತಿ ಉರಿದಿತ್ತು. ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ನಡುರಸ್ತೆಯಲ್ಲೇ ಬಸ್ಸುಗಳು ಹೊತ್ತಿ ಉರಿದಿದ್ದವು. ಚಾಲಕ ಮತ್ತು ನಿರ್ವಾಹಕರ, ಸಾರ್ವಜನಿಕರ ಸಮಯ ಪ್ರಜ್ಞೆ ಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿಲ್ಲ. ಬಸ್ಸುಗಳಿಗೆ ಮಾತ್ರ ಬೆಂಕಿ ಕೆನ್ನಾಲಿಗೆಗೆ ಉರಿದು ಸುಟ್ಟು ಕರಕಲಾಯಿತು. 11 ದಿನದ ಅಂತರದಲ್ಲೇ ಈ ಎರಡು ಘಟನೆಗಳು ಸಂಭವಿಸಿದ ಹಿನ್ನೆಲೆ ಸಹಜವಾಗೇ ಬಿಎಂಟಿಸಿ (BMTC) ಪ್ರಯಾಣಿಕರಲ್ಲಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಬಗ್ಗೆ ಆತಂಕ ಮೂಡಿಸಿತ್ತು.

ಜನರ ಸುರಕ್ಷತೆ ನಮ್ಮ ಹೊಣೆ : BMTC MD

ಇದೀಗ ಜನರಲ್ಲಿ ಮೂಡಿರುವ ಆತಂಕದ ಬಗ್ಗೆ ಸ್ವತಃ ಬಿಎಂಸಿಟಿಯ ಕಾರ್ಯನಿರ್ವಾಹಕ ನಿರ್ದೇಶಕ (Managing Director) ಅನ್ಬು ಕುಮಾರ್, ಬಿಎಂಟಿಸಿ ಎಂದಿಗಿಂತಲೂ ಸುರಕ್ಷಿತವಾಗಿದೆ. ಜನರು ಆ ಬಗ್ಗೆ ಭಯ ಬೀಳುವ ಅಗತ್ಯವಿಲ್ಲ. ಜನರ ಸುರಕ್ಷತೆ (Safety) ನಮ್ಮ ಹೊಣೆ. ಬಸ್ಸುಗಳ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿನಂತೆ ಪ್ರಯಾಣ ಮಾಡಿ ಎಂದು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ನಾನು ಕೂಡ ಬಸ್ಸುಗಳಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರಿಂದ, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದೇನೆ. ಚಾಲಕ ನಿರ್ವಾಹಕರ ಸಮಯ ಪ್ರಜ್ಞೆ ಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸಂಪೂರ್ಣ ವರದಿ ನೀಡಲು ಒಂದು ಸ್ಪೆಷಲ್ ಕಮಿಟಿ ರಚನೆ (Investigation Committee) ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಘಟನೆ ನಮಗೂ ಅಚ್ಚರಿ ಹಾಗೂ ಎಚ್ಚರಿಕೆ ಗಂಟೆ. ಪ್ರಯಾಣಿಕರ ಆದ್ಯತೆ, ರಕ್ಷಣೆಯೇ ನಮ್ಮ ಹೊಣೆ ಎಂದಿದ್ದಾರೆ ಬಿಎಂಟಿಸಿ (BMTC) ಎಂಡಿ ಅನ್ಬುಕುಮಾರ್.

ತಾಂತ್ರಿಕ ಪರಿಶೀಲನೆಗೆ ಇಂಜಿನಿಯರ್ಗಳ ತಂಡ ರಚನೆ

ಬೆಂಕಿಗೆ ತುತ್ತಾಗಿರುವ ಎರಡು ಬಸ್ಸುಗಳು ಅಶೋಕ್ ಲೈಲೆಂಡ್ (Ashok Leyland) ಕಂಪನಿಗೆ ಸೇರಿದ ಬಸ್ಸುಗಳಾಗಿವೆ. ಬಸ್ ಸ್ಟಾರ್ಟರ್ ನಲ್ಲಿ ಶಾರ್ಟ್ ಸರ್ಕ್ಯುಟ್ ಕಾಣಿಸಿಕೊಂಡಿರುವುದು ತಿಳಿದು ಬಂದಿದೆ. ಬಿಎಂಟಿಸಿ ಬಳಿ ಈ ಅಶೋಕ್ ಲೈಲೆಂಡ್ ಕಂಪನಿಗೆ ಸೇರಿದ ಒಟ್ಟು 186 ಬಸ್ಸುಗಳಿವೆ. ಘಟನೆ ಬಳಿಕ ಈ ಎಲ್ಲಾ ಬಸ್ಸುಗಳ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕೆ ಅಶೋಕ್ ಲೈಲೆಂಡ್ (Ashok Leyland) ಕಂಪನಿಯಿಂದ ಇಬ್ಬರು ತಜ್ಞರು ಹಾಗೂ ಬಿಎಂಟಿಸಿ (BMTC) ಸಂಸ್ಥೆಯ 8 ಇಂಜಿನಿಯರ್ಸ್ ಸೇರಿ ಎಲ್ಲಾ186 ಬಸ್ಸುಗಳ ಪರಿಶೀಲನೆ ನಡೆಸುತ್ತಿಸಲು ತಂಡ ರಚಿಸಲಾಗಿದೆ.

ಬಸ್ಸಿನಲ್ಲಿ ಅಗ್ನಿನಂದಕ (Fire Extinguisher) ಉಪಕರಣಗಳು ಇದ್ದರು ಅದನ್ನ ಸಿಬ್ಬಂದಿ ಬಳಕೆ ಮಾಡಿಲ್ಲ. ಬಳಕೆ ಮಾಡಿದ್ದರೆ ಇಷ್ಟು ದೊಡ್ಡಮಟ್ಟದ ಬೆಂಕಿ ಅನಾಹುತ ಆ ಆಗುತ್ತಿರಲಿಲ್ಲ. ಸಿಬ್ಬಂದಿ ಯಾಕೆ ಬಳಕೆ ಮಾಡಿಲ್ಲ ಎಂಬ ಬಗ್ಗೆ ತನಿಖೆ ಯಿಂದ ಮಾಹಿತಿ ತಿಳಿಯಲಿದೆ. ಇನ್ನು ಘಟನೆಗೆ ತುತ್ತಾಗಿರುವ ಬಸ್ಸುಗಳು ಹಳೆಯ ಬಸ್ಸುಗಳಾಗಿರಲಿಲ್ಲ. ಕೇವಲ 5 ರಿಂದ 6 ವರ್ಷದ ಹಳತನವಿರುವ ಬಸ್ಸುಗಳು. ನಗರದಲ್ಲಿ ನಿತ್ಯ 5,500 ಬಸ್ ಗಳು ಸಂಚಾರ ಮಾಡುತ್ತಿವೆ. ನಿತ್ಯ 50 ಸಾವಿರ ಟ್ರಿಪ್ ಕಾರ್ಯಾಚರಣೆ ಬಸ್ಸುಗಳು ಮಾಡುತ್ತಿದೆ.

ಮತ್ತೊಂದು ಬಿಎಂಟಿಸಿ ಬಸ್ ಗೆ ಬೆಂಕಿ
Tags: bmtc-to-set-up-a-panel-to-investiagte-fire-accidents-in-bus
Previous Post

ಕಾಂಗ್ರೆಸ್ಸಿಗೆ ಜೆಡಿಎಸ್ ತರಹವೇ ಮತ್ತೊಂದು ಬಗೆಯಲ್ಲಿ ಮಗ್ಗಲು ಮುಳ್ಳಾಗುತ್ತಾರೆಯೇ ಸಿಎಂ ಇಬ್ರಾಹಿಂ?

Next Post

ಇಸ್ರೇಲ್ ನೊಂದಿಗೆ ಭಾರತದ 2017 ಪೆಗಾಸಸ್‌ ಒಪ್ಪಂದದ ಒಳಸುಳಿ ಬಿಚ್ಚಿಟ್ಟ ನ್ಯೂಯಾರ್ಕ್ ಟೈಮ್ಸ್ ವರದಿಗಾರ ರೋನರ್ ಬರ್ಗ್ಮನ್

Related Posts

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
0

ಲವ್ ಜಾನರ್ ನ ಈ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭ ಕನ್ನಡದಲ್ಲಿ ಪ್ರೇಮಕಥೆಗಳುಳ್ಳ ಚಿತ್ರಗಳು ಸಾಕಷ್ಟು ‌ಬಂದಿವೆಯಾದರೂ, ಒಂದಕ್ಕಿಂತ ಒಂದು ವಿಭಿನ್ನ ಎನ್ನಬಹುದು. ಪ್ರೇಮಕಥೆಯೇ ಪ್ರಧಾನವಾಗಿರುವ...

Read moreDetails
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

July 25, 2025

ಡಿಕೆ ಶಿವಕುಮಾರ್‌ ಮೌನ ವ್ರತದ ಹಿಂದೆ ಡಿಸೆಂಬರ್‌ ರಹಸ್ಯ..! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ

July 24, 2025
Next Post
ಇಸ್ರೇಲ್ ನೊಂದಿಗೆ ಭಾರತದ 2017 ಪೆಗಾಸಸ್‌ ಒಪ್ಪಂದದ ಒಳಸುಳಿ ಬಿಚ್ಚಿಟ್ಟ ನ್ಯೂಯಾರ್ಕ್ ಟೈಮ್ಸ್ ವರದಿಗಾರ ರೋನರ್ ಬರ್ಗ್ಮನ್

ಇಸ್ರೇಲ್ ನೊಂದಿಗೆ ಭಾರತದ 2017 ಪೆಗಾಸಸ್‌ ಒಪ್ಪಂದದ ಒಳಸುಳಿ ಬಿಚ್ಚಿಟ್ಟ ನ್ಯೂಯಾರ್ಕ್ ಟೈಮ್ಸ್ ವರದಿಗಾರ ರೋನರ್ ಬರ್ಗ್ಮನ್

Please login to join discussion

Recent News

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?
Top Story

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

by Chetan
July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 
Top Story

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

by Chetan
July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 
Top Story

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

by Chetan
July 25, 2025
ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು
Top Story

ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

by ನಾ ದಿವಾಕರ
July 25, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada