• Home
  • About Us
  • ಕರ್ನಾಟಕ
Friday, October 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಸಿಎಂ ವಿರುದ್ಧ ರಕ್ತ ಬಲಿ ಕೊಟ್ಟು ತಂತ್ರ ಶಕ್ತಿ ವಿದ್ಯೆ ಪ್ರಯೋಗ..

ಕೃಷ್ಣ ಮಣಿ by ಕೃಷ್ಣ ಮಣಿ
January 31, 2025
in Uncategorized
0
ಸಿಎಂ ವಿರುದ್ಧ ರಕ್ತ ಬಲಿ ಕೊಟ್ಟು ತಂತ್ರ ಶಕ್ತಿ ವಿದ್ಯೆ ಪ್ರಯೋಗ..
Share on WhatsAppShare on FacebookShare on Telegram

ಮಂಗಳೂರಿನಲ್ಲಿ ಸಲೂನ್‌ನಲ್ಲಿ ಬಾಡಿ ಮಸಾಜ್‌ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸ್ತಿದ್ದಾರೆ ಎಂದು ಜನವರಿ 23ರಂದು ರಾಮಸೇನೆ ನೇತೃತ್ವದಲ್ಲಿ ದಾಳಿ ನಡೆದಿತ್ತು. ದಾಳಿ ವೇಳೆ ಸಾಕಷ್ಟು ಪೀಠೋಪಕರಣ ಧ್ವಂಸ ಮಾಡಲಾಗಿತ್ತು. ಆ ಪ್ರಕರಣದಲ್ಲಿ ರಾಮಸೇನೆ ಮುಖ್ಯಸ್ಥ ಪ್ರಸಾದ್‌ ಅತ್ತಾವರ್‌ ಸೇರಿದಂತೆ 13 ಜನರನ್ನು ಅರೆಸ್ಟ್‌ ಮಾಡಿ ಮೊಬೈಲ್ ಪರಿಶೀಲನೆ ಮಾಡಲಾಯ್ತು. ಈ ವೇಳೆ ಭಯಾನಕ ಸತ್ಯವೊಂದು ಹೊರಬಿದ್ದಿದೆ. ಮುಡಾ ಕೇಸ್‌ನಲ್ಲಿ ಸಿಎಂ ವಿರುದ್ಧ ಹೋರಾಟ ಮಾಡ್ತಿದ್ದವರಿಗೆ ಶಕ್ತಿ ಬರಬೇಕು, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌ನಲ್ಲಿ ಹಿನ್ನಡೆ ಆಗ್ಬೇಕು ಅನ್ನೋ ರೀತಿಯಲ್ಲಿ ಪೂಜೆ ಮಾಡಿದ್ದಾರೆ.

ADVERTISEMENT

ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್​ನಲ್ಲಿ ಸಾಕಷ್ಟು ವಿಡಿಯೋಗಳು ಸಿಕ್ಕಿದ್ದು, ಅದರಲ್ಲಿ ಶಕ್ತಿದೇವತೆಗಳ ಮುಂದೆ ಸರಣಿ ಪ್ರಾಣಿ ಬಲಿ ಕೊಟ್ಟು ಪ್ರಾಣಿಗಳ ರಕ್ತವನ್ನು RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಅಭಿಷೇಕ ಮಾಡಿದ್ದಾರೆ. ಇನ್ನು ಈ ರೀತಿಯ ರಕ್ತದ ಅಭಿಷೇಕದ ಮೂಲಕ ಇಬ್ಬರಿಗೂ ಮುಡಾ ಕೇಸ್​ನಲ್ಲಿ ಬಲ ತುಂಬಿದ್ದಾರೆ ಎನ್ನಲಾಗ್ತಿದೆ. ಮೊಬೈಲ್‌ನಲ್ಲಿ ವಿಡಿಯೋ ನೋಡಿದ ಮಂಗಳೂರಿನ ಬರ್ಕೆ ಪೊಲೀಸರು, ಪ್ರಸಾದ್ ಅತ್ತಾವರ್ ಮತ್ತು ಅನಂತ್ ಭಟ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.

RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಪ್ರಾಣಿ ಬಲಿಕೊಟ್ಟು ರಕ್ತಾಭಿಷೇಕ ಮಾಡಿದ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸ್ನೇಹಮಯಿ ಕೃಷ್ಣ, ಮಂಗಳೂರು ಪೊಲೀಸರು, ಮೈಸೂರು ಕಮೀಷನರ್‌ಗೆ ಈ ಬಗ್ಗೆ ದೂರು‌ ನೀಡ್ತೀನಿ. ಕಾನೂನು ಪ್ರಕಾರ ಕಾನೂನು ಹೋರಾಟ ಮಾಡುತ್ತೇನೆ. ನನ್ನ ಫೋಟೋ ಇಟ್ಟು ಪೂಜೆ ಮಾಡಿಸಿರುವುದಕ್ಕೆ ಭಯವಿಲ್ಲ. ನನ್ನ ಹೋರಾಟ ಹತ್ತಿಕ್ಕುವ ಷಡ್ಯಂತ್ರ ಮೊದಲಿನಿಂದ ನಡೆಯುತ್ತಿದೆ ಎಂದಿದ್ದಾರೆ.

ಆದರೆ, ಪ್ರಸಾದ್​ ಅತ್ತಾವರ ಫೋನ್​ನಲ್ಲಿ ಅನೇಕ ವಿಡಿಯೋಗಳು ಪತ್ತೆಯಾಗಿದ್ದು, ಸರಣಿ ಪ್ರಾಣಿ ಬಲಿ ನೀಡಿರುವ ವಿಡಿಯೋ ಮೊಬೈಲ್​ನಲ್ಲಿದೆ. ಅನಂತ್​ ಭಟ್​ ಎನ್ನುವವರು ಈ ವಿಡಿಯೋವನ್ನು ವಾಟ್ಸಾಪ್​ನಲ್ಲಿ ಹಂಚಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಹರ್ಷ, ಶ್ರೀನಿಧಿ, ಸ್ನೇಹಮಯಿ ಹಾಗೂ ಗಂಗರಾಜು ಭೇಟಿ ಆಗಿದ್ದಾರೆ ಎನ್ನಲಾಗ್ತಿದೆ. ಸುಮಾ ಹಾಗೂ ಪ್ರಶಾಂತ್​ಗೆ ಹಣ ತುಂಬಿದ ಚೀಲದ ಫೋಟೋವನ್ನ ಪ್ರಸಾದ್ ಅತ್ತಾವರ ಕಳುಹಿಸಿದ್ದಾರೆ. ಡಿಸೆಂಬರ್ 9ರಂದು ಈ ವಿಡಿಯೋವನ್ನ ಶ್ರೀನಿಧಿ ಎಂಬವರು ಪ್ರಸಾದ್ ಅತ್ತಾವರಗೆ ಕಳುಹಿಸಿದ್ದಾರೆ. ಅನಂತ್ ಭಟ್​ ಎನ್ನುವವರು ಪ್ರಾಣಿ ಬಲಿ ನೀಡಿದ್ದು, ದೇವರ ಮೇಲೆ ಸ್ನೇಹಮಯಿ ಕೃಷ್ಣ, ಪ್ರಸಾದ್​ ಅತ್ತಾವರ, ಗಂಗರಾಜು, ಶ್ರೀನಿಧಿ, ಸುಮಾ ಹೆಸರು ನಮೂದು ಮಾಡಿ ಪ್ರಾಣಿ ಬಲಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತ್ ಭಟ್ ವಾಮಾಚಾರದ ದುಷ್ಟ ಪದ್ದತಿ ಆಚರಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಫೋಟೋಗೆ ಪ್ರಾಣಿಬಲಿ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಇತಿಹಾಸಕಾರ ಶಲ್ವಪಿಳ್ಳೆ ಅಯ್ಯಂಗಾರ್, ತಂತ್ರ, ಮಂತ್ರಗಳು ಪ್ರಾಣಿಬಲಿ ಹಿಂದಿನಿಂದಲೂ ಬಂದಿದೆ. ಯಾಕೆ ಮಾಡ್ತಾರೆ..? ಯಾವ ಉದ್ದೇಶಕ್ಕೆ ಮಾಡ್ತಾರೆ..? ಅನ್ನೋದು ಮಾಡಿದವರಿಗೆ ಮಾತ್ರ ಗೊತ್ತು. ನಾವು ಭಕ್ತಿ ಮಾರ್ಗದಲ್ಲಿ ನಡೆಯುವವರು. ಈ ರೀತಿ ಮಾಡಿದರೆ ದೇವರು ಒಲಿಯುತ್ತೆ ಅನ್ನೋದು ಸುಳ್ಳು. ಈಗ ಫೋಟೋ ಇಟ್ಟು ಪ್ರಾಣಿ ಬಲಿ ಕೊಟ್ಟಿದ್ದಾರೆ. ಫೋಟೋಗೆ ರಕ್ತ ಹಾಕಿದ್ದಾರೆ. ಅದು ಒಳ್ಳೆದಕ್ಕೆ ಮಾಡಿದ್ದಾರಾ..? ಕೆಟ್ಟದಕ್ಕೆ ಮಾಡಿದ್ದಾರಾ..? ಗೊತ್ತಿಲ್ಲ ಎಂದಿದ್ದಾರೆ.

Tags: ale jadu ki nishaniyanbhoot ki kahanibhoot videoBlack Magicdiwali kab haifeministsgarud puran in hindihindu mythologyhorror story in hindi
Previous Post

ನೇರಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಿಂದ ಆರೋಗ್ಯ ಪ್ರಯೋಜನಗಳು ಏನು?

Next Post

ನಾಳೆ ಕೇಂದ್ರ ಬಜೆಟ್‌.. ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ..?

Related Posts

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ
Uncategorized

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

by ಪ್ರತಿಧ್ವನಿ
October 30, 2025
0

  ನಾ ದಿವಾಕರ  ಯಾವುದೇ ಸಂದರ್ಭದಲ್ಲಾದರೂ ಸಂವಹನ ಮಾಧ್ಯಮಗಳು (Communication Media) ಎರಡು ಪ್ರಧಾನ ಜವಾಬ್ದಾರಿಯನ್ನು ನಿರ್ವಹಿಸುವುದು, ಪಾರಂಪರಿಕವಾಗಿ ಎಲ್ಲ ಸಮಾಜಗಳೂ ಕಂಡಿರುವಂತಹ ಸತ್ಯ. ಮುದ್ರಣ ಮಾಧ್ಯಮಗಳ...

Read moreDetails

ಯುವ ವಕೀಲರು ಟ್ರಯಲ್ ಕೋರ್ಟ್‌ನಲ್ಲಿ ನಿಮ್ಮ ವೃತ್ತಿ ಆರಂಭಿಸಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್

October 25, 2025
ಇಬ್ಬರು ಶಿಷ್ಯಂದಿರಿಗೆ ಬುದ್ಧಿವಾದ ಹೇಳಿದ ಗುರು..!

ಇಬ್ಬರು ಶಿಷ್ಯಂದಿರಿಗೆ ಬುದ್ಧಿವಾದ ಹೇಳಿದ ಗುರು..!

October 25, 2025
ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲಿ ವಿನೂತನ ಯೋಜನೆಗಳ ಜಾರಿ

ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲಿ ವಿನೂತನ ಯೋಜನೆಗಳ ಜಾರಿ

October 15, 2025

DK Shivakumar: ಜನ ಸಾಮಾನ್ಯರೊಂದಿಗೆ ಡಿಸಿಎಂ ಹೆಜ್ಜೆ, ನಾಗರಿಕರಿಂದ ಸಲಹೆ, ಅಹವಾಲು ಸ್ವೀಕಾರ

October 11, 2025
Next Post
ನಾಳೆ ಕೇಂದ್ರ ಬಜೆಟ್‌.. ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ..?

ನಾಳೆ ಕೇಂದ್ರ ಬಜೆಟ್‌.. ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ..?

Recent News

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
Top Story

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

by ಪ್ರತಿಧ್ವನಿ
October 30, 2025
Top Story

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

by ಪ್ರತಿಧ್ವನಿ
October 30, 2025
Top Story

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

by ಪ್ರತಿಧ್ವನಿ
October 30, 2025
Top Story

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
October 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada