ಮೈಸೂರು : ಶಾಸಕ ಸಾ.ರಾ ಮಹೇಶ್ಗೆ ಠಕ್ಕರ್ ನೀಡೋಕೆ ಬಿಜೆಪಿ ಪ್ಲಾನ್ ಮಾಡಿದೆ. ಕೆ.ಆರ್ ನಗರದ ಪ್ರಭಾವಿ ವ್ಯಕ್ತಿ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಹೊಸಹಳ್ಳಿ ವೆಂಕಟೇಶ್ಗೆ ಟಿಕೆಟ್ ನೀಡಿರುವ ಕೇಸರಿ ಪಾಳಯ ಈ ಮೂಲಕ ಸಾ.ರಾ ಮಹೇಶ್ರನ್ನು ಕಟ್ಟಿ ಹಾಕಲು ತಂತ್ರ ಹೆಣೆದಿದೆ.
ಕೆ.ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಪಡೆದ ಬಳಿಕ ಮಾತನಾಡಿದ ಹೊಸಹಳ್ಳಿ ವೆಂಕಟೇಶ್, ನಾನು ಕೆ,ಆರ್ ನಗರ ತಾಲೂಕಿನ ಜನತೆಗೆ ಚಿರಪರಿಚಿತ ವ್ಯಕ್ತಿ. ದೇಶದಲ್ಲಿರುವ ಪ್ರಧಾನಿ ಅಲೆ ಕೆ.ಆರ್ ನಗರದಲ್ಲಿಯೂ ಕೆಲಸ ಮಾಡುತ್ತದೆ ಎಂದು ಹೇಳಿದ್ರು.

ಈ ಕ್ಷೇತ್ರದ ಜನತೆ ಈಗಾಗಲೇ ಕಾಂಗ್ರೆಸ್ – ಜೆಡಿಎಸ್ ಆಡಳಿತ ನೋಡಿದ್ದಾರೆ. ಈಗ ಜನರಿಗೂ ಬದಲಾವಣೆಯ ಅಗತ್ಯವಿದೆ. ಹೀಗಾಗಿ ಈ ಕೆ.ಆರ್ ನಗರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೊಸಹಳ್ಳಿ ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದ್ರು.