ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ (Contractor sachin suicide case)ಬಿಜೆಪಿ ಪೋಸ್ಟರ್ ಅಭಿಯಾನ (Bjp poster campaign) ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಪ್ರತಿಕ್ರಿಯಿಸಿದ್ದಾರೆ.ಬಿಜೆಪಿಯವರು ಯಾವ ಚಳವಳಿಯನ್ನಾದ್ದಾರೂ ಮಾಡಲಿ,ಅವರು ಬಟ್ಟೆಯನ್ನಾದ್ರೂ ಹರಿದುಕೊಳ್ಳಲಿ.ಆದ್ರೆ ಮೊದಲು ದಾಖಲೆಯನ್ನು ಇಟ್ಟುಕೊಂಡು ಮಾತನ್ನಾಡಲಿ ಎಂದು ಹೇಳಿದ್ದಾರೆ.

ಬಿಜೆಪಿಯವರ ಆರೋಪಗಳಿಗೆ ಲಾಜಿಕ್ ಇದ್ದರೆ ನಾವು ಉತ್ತರ ಕೊಡಬಹುದು.ಆದ್ರೆ ದಿನ ಬೆಳಗಾದರೆ ಈ ರೀತಿ ಮಾಡಿದ್ರೆ ಹೇಗೆ ? ಸುಮ್ಮನೆ ಪ್ರಿಯಾಂಕ್ ಹೆಸರು ಜಪ ಮಾಡಿದ್ರೆ ಜನರು ನಂಬುತ್ತರಾ ? ಎಂದು ಕುಟುಕಿದ್ದಾರೆ.
ಬಿಜೆಪಿಯವರ ಸಿದ್ಧಾಂತ ಮತ್ತು ನಮ್ಮ ಸಿದ್ಧಾಂತ ಬೇರೆ ಬೇರೆ.ಅವರದ್ದು ಆರ್ಎಸ್ಎಸ್ (RSS) ಮನುವಾದ ಸಿದ್ಧಾಂತ.ಅದಕ್ಕೆ ನಾನು ಮೊದಲಿನಿಂದಲೂ ವಿರೋಧವೇ.ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕೂಡ ಇದಕ್ಕೆ ವಿರೋಧವೇ. ಅದಕ್ಕೆ ಈ ರೀತಿ ಟಾರ್ಗೆಟ್ ಮಾಡಿ ಆರೋಪ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಲ್ಲಿ ನನ್ನ ಪಾತ್ರ ಇದೆ ಅಂತ ಹೇಳುತ್ತಾರೆ. ಅಶೋಕ್ ಡ್ರಗ್ ಕೇಸ್, ಯಡಿಯೂರಪ್ಪ ಕೇಸ್ ಏನಾಯ್ತು ? ಸ್ಯಾಂಟ್ರೋ ರವಿ, ಸುನೀಲ್ ಯಾರು ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.